ಮಂಗಳೂರಿನಲ್ಲೂ ಕೆಎಸ್ಸಾರ್ಟಿಸಿ ಬಸ್ ಮುಷ್ಕರ ; ರಸ್ತೆಗಿಳಿಯದ ಬಸ್

07-04-21 10:36 am       Mangalore Correspondent   ಕರಾವಳಿ

ಕೆಎಸ್ಸಾರ್ಟಿಸಿ ಬಸ್ ನೌಕರರು ಮಂಗಳೂರಿನಲ್ಲೂ ಮುಷ್ಕರ ನಡೆಸಿದ್ದಾರೆ.

ಮಂಗಳೂರು, ಎ.7: ಕೆಎಸ್ಸಾರ್ಟಿಸಿ ಬಸ್ ನೌಕರರು ಮಂಗಳೂರಿನಲ್ಲೂ ಮುಷ್ಕರ ನಡೆಸಿದ್ದಾರೆ. ಮಂಗಳೂರು ವಿಭಾಗದ ಎಲ್ಲ ಡಿಪೋಗಳಲ್ಲೂ ಬಸ್ ಮುಷ್ಕರ ನಡೆದಿದ್ದು ಚಾಲಕ ಮತ್ತು ನಿರ್ವಾಹಕರು ಕೆಲಸಕ್ಕೆ ಬರದೆ ಮುಷ್ಕರ ನಡೆಸಿದ್ದಾರೆ. 

ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ನೌಕರರ ಸಂಘ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದೆ. ಇದರಂತೆ ಬಹುತೇಕ ಎಲ್ಲ ಕಡೆಯೂ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. 

ಮಂಗಳೂರು ವಿಭಾಗದಲ್ಲಿ ಐದು ಡಿಪೋಗಳಿದ್ದು 1750 ನೌಕರರಿದ್ದಾರೆ. ಕ್ಲರಿಕಲ್ ಸ್ಟಾಫ್ ಸೇರಿ ಒಟ್ಟು 2250 ಸಿಬಂದಿ ಇದ್ದಾರೆ. ಚಾಲಕ- ನಿರ್ವಾಹಕರು ಪೂರ್ತಿಯಾಗಿ ಮುಷ್ಕರಕ್ಕೆ ಇಳಿದಿದ್ದು ಒಂದಷ್ಟು ಕ್ಲರಿಕಲ್ ಸ್ಟಾಫ್ ಕೆಲಸಕ್ಕೆ ಹಾಜರಾಗಿದ್ದಾರೆ. ಮಂಗಳೂರಿನ ಲಾಲ್ ಬಾಗ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳು ಬಂದು ಪ್ರಯಾಣಿಕರನ್ನು ಒಯ್ಯಲು ಅವಕಾಶ ಮಾಡಲಾಗಿದೆ. ದೂರದ ಪ್ರಯಾಣಕ್ಕೆ ಹೋಗುವ ಮಂದಿಗೆ ಖಾಸಗಿ ಬಸ್ ಗಳನ್ನು ಆಶ್ರಯಿಸಿದ್ದಾರೆ. ಉಳಿದಂತೆ, ಮಂಗಳೂರು ಹಾಗೂ ಉಡುಪಿಯಲ್ಲಿ ಖಾಸಗಿ ಬಸ್ ಗಳು ಹೆಚ್ಚಿದ್ದು ಜನರಿಗೆ ತೊಂದರೆ ಆಗಿಲ್ಲ.

Karnataka bus strike ksrtc bus stay off road in Mangalore. Private roads move as usual on roads.