ನೈಟ್ ಕರ್ಫ್ಯೂ ; ರಾತ್ರಿ ಹತ್ತು ಗಂಟೆ ನಂತ್ರ ಹೊರಗಡೆ ತಿರುಗಾಡಿದ್ರೆ ಹುಷಾರ್ !

10-04-21 02:38 pm       Mangalore Correspondent   ಕರಾವಳಿ

ನೈಟ್ ಕರ್ಫ್ಯೂ ಆದೇಶವನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಮಂಗಳೂರು, ಎ.10: ನೈಟ್ ಕರ್ಫ್ಯೂ ಆದೇಶವನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಹೊರಗಡೆ ತಿರುಗಾಡಲು ಅವಕಾಶ ನೀಡುವುದಿಲ್ಲ. ಅಗತ್ಯ ಪ್ರಯಾಣ ಹೊರತುಪಡಿಸಿ ಉಳಿದೆಲ್ಲ ಪ್ರಯಾಣಿಕರು, ವಾಹನಗಳು ರಾತ್ರಿ 10 ಗಂಟೆ ಒಳಗೆ ಮನೆ ಸೇರಬೇಕು ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಇದಕ್ಕಾಗಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 45 ಚೆಕ್ ಪೋಸ್ಟ್ ಹಾಕಲಾಗುವುದು. ಪ್ರತೀ ಚೆಕ್ ಪೋಸ್ಟಿನಲ್ಲಿ ಪಿಎಸ್ಐ ದರ್ಜೆಯ 8-10 ಸಿಬಂದಿಯನ್ನು ನಿಯೋಜನೆ ಮಾಡಲಾಗುವುದು. ನೈಟ್ ಕರ್ಫ್ಯೂ ಜಾರಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೀಮಿತ ಆಗಿದ್ದರೂ, ಕಮಿಷನರೇಟ್ ವ್ಯಾಪ್ತಿಯ ಮೂಡುಬಿದ್ರೆಯಲ್ಲೂ ಚೆಕ್ ಪೋಸ್ಟ್ ಹಾಕಲಾಗುವುದು ಎಂದು ತಿಳಿಸಿದರು.

ರಾತ್ರಿಯ ಕರ್ತವ್ಯಕ್ಕೆ 75 ಶೇಕಡಾ ಪೊಲೀಸರನ್ನು ನಿಯೋಜನೆ ಮಾಡುತ್ತೇವೆ. ಕೆಎಸ್ಆರ್ ಪಿ, ಸಿಎಆರ್ ಪೊಲೀಸ್ ಪಡೆಯನ್ನೂ ಹಾಕ್ತೀವಿ. ಯಾರೇ ಆಗಲಿ, ಬಸ್, ವಿಮಾನಕ್ಕೆ ಹೋಗುವ ಮಂದಿ ಟಿಕೆಟ್ ಹೊಂದಿರಬೇಕು. ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ವಾಹನವನ್ನು ಸೀಜ್ ಮಾಡುತ್ತೇವೆ. ಪ್ರಯಾಣಿಕರನ್ನೂ ಕೋವಿಡ್ ಆಕ್ಟ್ ಅಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಕಮಿಷನರ್ ಶಶಿಕುಮಾರ್ ಎಚ್ಚರಿಸಿದ್ದಾರೆ. 

Video: 

Night curfew ban of vehicles after 10 PM, Mangalore commissioner Shashi Kumar warns those who break rules. Strict action to be taken on violators he said.