ಬ್ರೇಕಿಂಗ್ ನ್ಯೂಸ್
11-04-21 09:15 am Mangaluru Reporter ಕರಾವಳಿ
ಉಳ್ಳಾಲ, ಎ.11: ತೊಕ್ಕೊಟ್ಟು ಹಳೆ ಚೆಕ್ ಪೋಸ್ಟ್ ಬಳಿಯ ಕೊರಗಜ್ಜನ ಕಟ್ಟೆಯಲ್ಲಿ ನಿನ್ನೆ ರಾತ್ರಿ ಕೋಲ ನಡೆಯುತ್ತಿದ್ದಾಗ ಮಾದಕ ವ್ಯಸನಿ ವ್ಯಕ್ತಿಯೊಬ್ಬ ಕೋಲ ನಿಲ್ಲಿಸುವಂತೆ ಹೇಳಿ ಅರಚಾಡುತ್ತಾ ಪೊಲೀಸ್ ಜೀಪಿಗೆ ಕಲ್ಲೆಸೆದು ಹಾನಿಗೊಳಿಸಿ ದಾಂಧಲೆಗೆ ಯತ್ನಿಸಿದ ಘಟನೆ ನಡೆದಿದ್ದು ಸಾರ್ವಜನಿಕರೇ ಆತನನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಉಳ್ಳಾಲ ಪ್ಯಾರೀಸ್ ಹೊಟೇಲ್ ಬಳಿಯ ನಿವಾಸಿ ಮಹಮ್ಮದ್ ಹಫೀಝ್ (25) ಬಂಧಿತ ಆರೋಪಿ. ತೊಕ್ಕೊಟ್ಟಿನ ಹಳೇ ಚೆಕ್ ಪೋಸ್ಟ್ ಬಳಿ ನಡೆದ ಕೋಲಕ್ಕೆ ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಸಂದೀಪ್ ಅವರು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಘಟನೆ ನಡೆದಿದೆ. ಸಂಪೂರ್ಣ ನಶೆಯಲ್ಲಿದ್ದ ಹಫೀಝ್ ಸಾಮೂಹಿಕ ಅನ್ನ ಸಂತರ್ಪಣೆ ನಡೆಯುತ್ತಿದ್ದ ಪ್ರದೇಶದಲ್ಲಿ ಠಳಾಯಿಸಿ ಅಲ್ಲಿ ನೆರೆದಿದ್ದ ಭಕ್ತಾದಿಗಳನ್ನು ದುರುಗುಟ್ಟುತ್ತಾ ಹೋಗಿದ್ದಾನೆ.

ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಪೊಲೀಸ್ ಜೀಪಿಗೆ ಕಲ್ಲೆಸೆದು ಕೊರಗಜ್ಜನ ಸಾನಿಧ್ಯದ ಸಮೀಪಕ್ಕೆ ಬಂದ ಆತ ಕೋಲ ನಿಲ್ಲಿಸುವಂತೆ ಜೋರಾಗಿ ಅರಚಿದ್ದಾನೆ. ಜೀಪಿಗೆ ಕಲ್ಲೆಸೆದುದನ್ನು ಗಮನಿಸಿದ ಸಾರ್ವಜನಿಕರು ಹಫೀಝನ್ನು ವಿಚಾರಿಸಲು ಮುಂದಾದಾಗ ಆತ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣದ ಮಹಡಿಗಳಲ್ಲಿ ಓಡಲಾರಂಭಿಸಿದ್ದಾನೆ. ಬಳಿಕ ಅಟ್ಟಿಸಿಕೊಂಡು ಹೋಗಿ ಹಿಡಿದ ಯುವಕರು ಧರ್ಮದೇಟು ನೀಡಿದ್ದಲ್ಲದೆ, ಸ್ಥಳದಲ್ಲಿದ್ದ ಇನ್ಸ್ ಪೆಕ್ಟರ್ ಸಂದೀಪ್ ಅವರು ಊಟವನ್ನು ಅರ್ಧಕ್ಕೇ ಬಿಟ್ಟು ಆರೋಪಿಯನ್ನ ಹಿಡಿದು ಠಾಣೆಗೆ ಕರೆದೊಯ್ದು ಉಪಚರಿಸಿದ್ದಾರೆ.
ಆರೋಪಿ ಹಫೀಝ್ ನ ಆಧಾರ್ ಕಾರ್ಡ್ ಸ್ಥಳದಲ್ಲೇ ಬಿದ್ದು ಸಿಕ್ಕಿದ್ದು ಪೊಲೀಸರು ವಶಪಡಿಸಿದ್ದಾರೆ.

ನೂರಾರು ಮಂದಿ ಭಕ್ತಾದಿಗಳು ಸೇರಿದ್ದ ಸಾನಿಧ್ಯದಲ್ಲಿ ನಶೆಯಲ್ಲಿ ಬಂದು ದಾಂಧಲೆಗೈದ ವ್ಯಕ್ತಿಯ ಹಿಂದೆ ಕೋಮು ಸಾಮರಸ್ಯ ಹದಗೆಡಿಸಲು ಯತ್ನಿಸುವ ಕಾಣದ ಕೈಗಳು ಇರಬಹುದೆಂದು ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದು ಶ್ರದ್ಧಾಕೇಂದ್ರಗಳನ್ನು ಅಪವಿತ್ರಗೊಳಿಸುವ ಕುಕೃತ್ಯಗಳು ಮರುಕಳಿಸುತ್ತಿರುವಾಗಲೇ ಈಗ ಕೊರಗಜ್ಜನ ಕೋಲ ನಡೆಯುತ್ತಿದ್ದಾಗಲೇ ದಾಂಧಲೆ ನಡೆಸಿದ್ದು ಸ್ಥಳೀಯರ ಶಂಕೆಗೆ ಕಾರಣವಾಗಿದೆ.
ಮಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಧಿಸಿರುವಾಗ ತೊಕ್ಕೊಟ್ಟಿನಲ್ಲಿ ಕೋಲಕ್ಕೆ ಹೇಗೆ ಅವಕಾಶ ಕೊಟ್ಟಿದ್ದಾರೆ ಎನ್ನುವ ಭ್ರಮೆಯಲ್ಲಿ ಆರೋಪಿ ಈ ಕೃತ್ಯ ಮಾಡಿರುವ ಸಾಧ್ಯತೆಯಿದೆ. ಆದರೆ, ನೈಟ್ ಕರ್ಫ್ಯೂ ಕೇವಲ ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಾತ್ರ. ತೊಕ್ಕೊಟ್ಟು ಉಳ್ಳಾಲ ನಗರಸಭೆ ವ್ಯಾಪ್ತಿಗೆ ಬರುತ್ತದೆ ಎಂಬ ಅರಿವು ಇಲ್ಲದೆ, ಮಾದಕ ವ್ಯಸನದ ಮತ್ತಿನಲ್ಲಿ ಅರಚಾಟ, ಕಲ್ಲು ತೂರಾಟ ನಡೆಸಿದ್ದಾನೆ ಎನ್ನಲಾಗುತ್ತಿದೆ.
A man who tried to stop the koragajja kola by pelting stone at police jeep was nabbed by the public and thrashed at Thokottu in Mangalore.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm