ಬ್ರೇಕಿಂಗ್ ನ್ಯೂಸ್
15-04-21 04:57 pm Mangalore Correspondent ಕರಾವಳಿ
ಮಂಗಳೂರು, ಎ.15: ನಗರದ ಬಳ್ಳಾಲ್ ಬಾಗ್ ನಲ್ಲಿರುವ ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್ ಮಳಿಗೆ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಬೆಂಕಿ ಬಿದ್ದಿದೆ ಎನ್ನಲಾಗುತ್ತಿದ್ದು, ಕ್ಷಣಮಾತ್ರದಲ್ಲಿ ಬೆಂಕಿ ಹರಡಿಕೊಂಡು ಮೇಲ್ಭಾಗದ ಫೋಮ್ ಸೀಲಿಂಗನ್ನು ಸುಟ್ಟು ಹಾಕಿದೆ.


ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್ ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡ ಹೊಸ ರೀತಿಯ ಮಳಿಗೆ ಆಗಿತ್ತು. ಸಿಟಿ ಸೆಂಟರ್, ಬಿಗ್ ಬಝಾರ್ ನಲ್ಲಿರುವ ರೀತಿ ಎಲ್ಲವನ್ನೂ ಒಳಗೊಂಡ ಸೂಪರ್ ಮಾರ್ಕೆಟ್. ಆದರೆ, ಯಾವುದೇ ಬಿಲ್ಡಿಂಗ್ ಕಟ್ಟದೆ ನೆಲದಲ್ಲೇ ಅಷ್ಟು ದೊಡ್ಡ ಮಾದರಿಯಲ್ಲಿ ಹೈಪರ್ ಮಾರ್ಕೆಟ್ ಸ್ಥಾಪಿಸಿದ್ದು ಮಂಗಳೂರಿನಲ್ಲಿ ಅದೇ ಮೊದಲು. ಜೀನಸು, ತರಕಾರಿಯಿಂದ ತೊಡಗಿ ಮನೆ, ಕಚೇರಿಗೆ ಬೇಕಾಗುವ ಎಲ್ಲ ಸಾಮಗ್ರಿಗಳು ಅಲ್ಲಿ ದೊರೆಯುತ್ತಿದ್ದವು. ಹೀಗಾಗಿ ಕಡಿಮೆ ಅವಧಿಯಲ್ಲಿ ನಗರದ ಜನರ ಪಾಲಿಗೆ ಮೆಚ್ಚಿನ ಸೂಪರ್ ಮಾರ್ಕೆಟ್ ಆಗಿತ್ತು.



ಈಗ ಹತ್ತು ಗಂಟೆಗೆ ರಾತ್ರಿ ಕರ್ಫ್ಯೂ ವಿಧಿಸುವುದರಿಂದ ನಿನ್ನೆ ರಾತ್ರಿ 9.30ಕ್ಕೆ ಮಳಿಗೆ ಕ್ಲೋಸ್ ಮಾಡಿ ತೆರಳಿದ್ದೆವು. ಹತ್ತುವರೆ ಹೊತ್ತಿಗೆ ಹತ್ತಿರದ ಅಪಾರ್ಟ್ಮೆಂಟ್ ನಿವಾಸಿಗಳು ಮಳಿಗೆಯಲ್ಲಿ ಬೆಂಕಿ ಹತ್ತಿಕೊಂಡಿರುವುದನ್ನು ಕರೆ ಮಾಡಿ ತಿಳಿಸಿದ್ದಾರೆ. ನಾವು ಬಂದ ಬಳಿಕವೂ ಅಗ್ನಿಶಾಮಕ ಸಿಬಂದಿ ಬರುವಾಗ ಲೇಟ್ ಆಗಿತ್ತು. ಅಷ್ಟರಲ್ಲಿ ಬೆಂಕಿ ಹರಡಿದ್ದು ಒಳಭಾಗದ ಸೀಲಿಂಗ್ ಪೂರ್ತಿ ಸುಟ್ಟು ಹೋಗಿದ್ದು ಪ್ಲಾಸ್ಟಿಕ್ ಉರಿದು ಕೆಳಗೆ ಬಿದ್ದು ಕೆಳಭಾಗದಲ್ಲಿದ್ದ ಸಾಮಗ್ರಿಗಳು ಕೂಡ ಹಾಳಾಗಿವೆ ಎಂದು ಹೇಳಿದರು ಅಲ್ಲಿನ ಸಿಬಂದಿ.



ಒಂದು ಕೋಟಿ ನಷ್ಟ ಆಗಿರಬಹುದೆಂದು ಕೆಲವರು ಅಂದಾಜಿಸಿದ್ದಾರೆ. ಇನ್ಶೂರೆನ್ಸ್ ಕಂಪನಿಯವರು ಬಂದಿಲ್ಲ. ಇನ್ಶೂರೆನ್ಸ್ ಇದೆ. ಎಸಿಯಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ. ಆದರೆ, ನಾವು ರಾತ್ರಿ ವೇಳೆ ಎಸಿ ಸೇರಿದಂತೆ ಎಲ್ಲವನ್ನೂ ಆಫ್ ಮಾಡಿ ಹೋಗಿದ್ದೆವು. ಪ್ರಕರಣ ದಾಖಲಾಗಿದೆ, ನಷ್ಟ ಅಂದಾಜು ಮಾಡುತ್ತಿದ್ದಾರೆ ಎಂದರು ಇನ್ನೊಬ್ಬ ಸಿಬಂದಿ.
A short circuit has triggered fire Fieldstar HyperMartet at Ballalbagh in Mangalore here on Thursday April 15, leading to panic. It is estimated of one crore loss to the company.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am