ಶುಕ್ರವಾರ ಮಧ್ಯಾಹ್ನ ಪಶ್ಚಿಮಕ್ಕೆ ತಿರುಗಿದರೆ ಮಾತ್ರ ದೇವರು ಒಲಿಯುವುದೇ ? ಕಲ್ಲಡ್ಕ ಭಟ್ ಪ್ರಶ್ನೆ

17-04-21 05:57 pm       Mangalore Correspondent   ಕರಾವಳಿ

ಆದಿತ್ಯವಾರ ಬೆಳಗ್ಗೆ ಪರಲೋಕದ ತಂದೆಯೇ ಎಂದು ಜಪಿಸಿದರೆ ಮಾತ್ರ ದೇವರು ಒಲಿಯುವುದೇ ಎನ್ನುವ ಮೂಲಕ ಕಲ್ಲಡ್ಕ ಪ್ರಭಾಕರ ಭಟ್ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. 

ಉಳ್ಳಾಲ, ಎ.17 : ಶುಕ್ರವಾರ ಮಧ್ಯಾಹ್ನ ಪಶ್ಮಿಮಕ್ಕೆ ತಿರುಗಿ ಕೂಗಿದರೆ ಮಾತ್ರ ದೇವರು ಬರುವನೇ.. ಅಥವಾ ಆದಿತ್ಯವಾರ ಬೆಳಗ್ಗೆ ಪರಲೋಕದ ತಂದೆಯೇ ಎಂದು ಜಪಿಸಿದರೆ ಮಾತ್ರ ದೇವರು ಒಲಿಯುವುದೇ ಎನ್ನುವ ಮೂಲಕ ಕಲ್ಲಡ್ಕ ಪ್ರಭಾಕರ ಭಟ್ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. 

ತೊಕ್ಕೊಟ್ಟು ಸಮೀಪದ ಪಿಲಾರು ಪ್ರಕಾಶ ನಗರದಲ್ಲಿ ಕೊರಗತನಿಯ ಸೇವಾ ಸಮಿತಿ (ಕೆಟಿಎಸ್ ಎಸ್ ಬಾಯ್ಸ್ ) ಹಮ್ಮಿಕೊಂಡ ಬಿಸು ಹಬ್ಬದ ಧಾರ್ಮಿಕ ಸಭೆಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದಾರೆ.

ಹಿಂದುಗಳಿಗೆ ಆ ದಿನ ಈ ದಿನ ಅಂತ ಇಲ್ಲ. ಯಾವುದೇ ಸಮಯದಲ್ಲೂ ದೇವರನ್ನು ಜಪಿಸಬಹುದು. ಶುಕ್ರವಾರ ಮಧ್ಯಾಹ್ನ 12.30 ಗಂಟೆಗೆ ಪಶ್ಚಿಮಕ್ಕೆ ಮುಖ ಮಾಡಿ ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆಂದು ಕೆಲವರು ಹೇಳಿದರೆ, ಇನ್ನು ಕೆಲವರು ಆದಿತ್ಯವಾರ ಬೆಳಗ್ಗೆ ಏಳು ಅಥವಾ ಒಂಬತ್ತು ಗಂಟೆಗೆ ಪರಲೋಕದಲ್ಲಿರುವ ತಂದೆಯೇ ಎಂದರೆ ದೇವರು ಒಲಿಯುವನೆಂದು ಹೇಳುತ್ತಾರೆ. ನಮ್ಮ ಹಿಂದು ಧರ್ಮದಲ್ಲಿ ವರುಷದ 365 ದಿವಸಗಳ ಪ್ರತಿ ಗಂಟೆ, ನಿಮಿಷಗಳಲ್ಲೂ ದೇವರು ಒಲಿಯುತ್ತಾನೆ. ಆ ದೇವರಿಗೆ ನಿರ್ದಿಷ್ಟ ಹೆಸರಿಲ್ಲ. ಯಾವ ಹೆಸರು ಕರೆದರೂ ಅವನು ಯಾವ ಸಮಯದಲ್ಲೂ ಒಲಿಯುತ್ತಾನೆಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

Stirring yet another controversy, RSS leader Kalladka Prabhakar Bhat said that Friday and Sunday are not the only days to seek God. Bhat said that one can pray to God every day and only certain days are not fixed to offer prayers.