ನಾಗಪೂಜೆಗೆ ಹೊರಬಂದ ಜೇನ್ನೊಣ ದಾಳಿ ; ಎಂಟು ಮಂದಿ ಅಸ್ವಸ್ಥ !

20-04-21 03:52 pm       Mangalore Correspondent   ಕರಾವಳಿ

ನಾಗಪೂಜೆ ನಡೆಯುತ್ತಿದ್ದ ವೇಳೆ ಹೊಗೆಯಿಂದ ತೊಂದರೆಗೊಳಗಾದ ಹೆಜ್ಜೇನು ಹಿಂಡು ಗೂಡಿನಿಂದ ಹೊರಬಂದು ದಾಳಿ ನಡೆಸಿದ ಘಟನೆ ಕುಂಡಡ್ಕ ಎಂಬಲ್ಲಿ ನಡೆದಿದೆ. 

ಬೆಳ್ತಂಗಡಿ, ಎ. 20 : ಪರಿಸರದ ಮನೆಯಲ್ಲಿ ನಾಗಪೂಜೆ ನಡೆಯುತ್ತಿದ್ದ ವೇಳೆ ಹೊಗೆಯಿಂದ ತೊಂದರೆಗೊಳಗಾದ ಹೆಜ್ಜೇನು ಹಿಂಡು ಗೂಡಿನಿಂದ ಹೊರಬಂದು ದಾಳಿ ನಡೆಸಿದ ಘಟನೆ ನಡೆದಿದ್ದು ಎಂಟು ಮಂದಿ ತೀವ್ರ ಅಸ್ವಸ್ಥಗೊಂಡ ಘಟನೆ ನಾವೂರು ಗ್ರಾಮದ ಕುಂಡಡ್ಕ ಎಂಬಲ್ಲಿ ನಡೆದಿದೆ. 

ಕುಂಡಡ್ಕ ನಿವಾಸಿ ಅರುವಾಲು ಬಾಲಕೃಷ್ಣ ಎಂಬವರ ಮನೆಯಲ್ಲಿ ಇಂದು ಬೆಳಗ್ಗೆ ನಾಗಪೂಜೆ ನಡೆಯುತ್ತಿತ್ತು. ಪೂಜೆಯ ವೇಳೆ ಹೊಗೆ ಆವರಿಸಿದ್ದು ಜೇನುಗೂಡಿನಲ್ಲಿದ್ದ ನೊಣಗಳು ತೊಂದರೆಗೆ ಒಳಗಾಗಿದೆ.

ಇದರಿಂದ ಜೇನ್ನೊಣಗಳು ಹಿಂಡಾಗಿ ಗೂಡಿನಿಂದ ಹೊರ ಬಂದಿದ್ದು ಪೂಜೆಗೆ ಸೇರಿದ್ದ ಜನರ ಮೇಲೆ ದಾಳಿ ನಡೆಸಿದೆ. ಸ್ಥಳದಲ್ಲಿದ್ದ ಸುಮಾರು ಇಪ್ಪತೈದು ಮಂದಿ ದಾಳಿಗೆ ಈಡಾಗಿದ್ದಾರೆ. ಈ ಪೈಕಿ ಎಂಟು ಮಂದಿ ಹೆಜ್ಜೇನು ಕಡಿತದಿಂದ ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸ್ಥಳೀಯವಾಗಿ ಚಿಕಿತ್ಸೆ ಪಡೆದಿದ್ದಾರೆ.

Eight people have said to be in critical condition after wild honey bees attacked them after a pooja in Belthangady in Dakshina Kannada.It is said the bees have attacked more then 25 members.