ವಾರಾಂತ್ಯ ಕರ್ಫ್ಯೂ ಇರಲ್ಲ ; ಎಂದಿನಂತೆ ಲಾಕ್ಡೌನ್ ಮುಂದುವರಿಕೆ : ಜಿಲ್ಲಾಧಿಕಾರಿ

13-05-21 11:11 pm       Mangaluru Correspondent   ಕರಾವಳಿ

ಬೆಳಗ್ಗಿನ ಹತ್ತು ಗಂಟ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುತ್ತದೆ. ಇದೇ ನೀತಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇರಲಿದೆ. ಯಾವುದೇ ವಾರಾಂತ್ಯದ ಕರ್ಫ್ಯೂ ಇರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರು, ಮೇ 13: ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ವಾರಾಂತ್ಯದ ಎರಡು ದಿನ ಬಿಗಿ ಕರ್ಫ್ಯೂ ವಿಧಿಸಿ ಆದೇಶ ಮಾಡಲಾಗಿತ್ತು.‌ ಆದರೆ, ಆಬಳಿಕ ರಾಜ್ಯ ಸರಕಾರ ಮೇ 10ರಿಂದ 24 ರ ವರೆಗೆ ಕಟ್ಟುನಿಟ್ಟಿನ ಲಾಕ್ಡೌನ್ ವಿಧಿಸಿ ಜನರ ಸಂಚಾರಕ್ಕೆ ನಿರ್ಬಂಧ ಹೇರಿತ್ತು.

ರಾಜ್ಯ ಸರಕಾರದ ಆದೇಶ ವಾರಾಂತ್ಯ ಸೇರಿ ಎಲ್ಲ ದಿನಗಳಲ್ಲಿ ಏಕಪ್ರಕಾರದಲ್ಲಿ ಜಾರಿಗೆ ಬಂದಿದ್ದು ಮೇ 24 ರ ವರೆಗೂ ಒಂದೇ ರೀತಿ ಇರಲಿದೆ. ಬೆಳಗ್ಗಿನ ಹತ್ತು ಗಂಟ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುತ್ತದೆ. ಇದೇ ನೀತಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇರಲಿದೆ. ಯಾವುದೇ ವಾರಾಂತ್ಯದ ಕರ್ಫ್ಯೂ ಇರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಶನಿವಾರ ಮತ್ತು ಭಾನುವಾರ ದಿನಸಿ ಅಂಗಡಿಗಳು ಬಂದ್ ಆಗಿದ್ದರಿಂದ ಸೋಮವಾರ ಬೆಳಗ್ಗೆ ಮಾರುಕಟ್ಟೆಗಳಲ್ಲಿ ಜನ ರಶ್ ಆಗಿದ್ದರು.

Dakshina Kannada deputy commissioner has issued revised order for the weekend curfew in a press release dated May 13. The district administration stated that there would not be complete lockdown in the district during the weekends and rather would follow the same restrictions as applicable on the weekdays till May 24.