ಬ್ರೇಕಿಂಗ್ ನ್ಯೂಸ್
17-05-21 10:20 pm Mangaluru Correspondent ಕರಾವಳಿ
ಮಂಗಳೂರು, ಮೇ 17: ರಾಜ್ಯದಲ್ಲಿ ಕೊರೊನಾ ಸ್ಥಿತಿ ವಿಪರೀತಕ್ಕೆ ಹೋಗುತ್ತಿದ್ದು ರಾಷ್ಟ್ರೀಯ ವಿಪತ್ತಾಗಿ ದೇಶಕ್ಕೆ ಬೆದರಿಕೆಯಾಗಿ ಪರಿಣಮಿಸಿದೆ. ಆದರೆ, ಇದನ್ನು ನಿರ್ವಹಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರ ಕೂಡ ಕೇಂದ್ರದಿಂದ ಪರಿಹಾರ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು ಸಾಮಾನ್ಯ ಜನರ ಸ್ಥಿತಿ ಶೋಚನೀಯವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರಿಗೆ ಇವತ್ತು ಲಸಿಕೆಯೂ ಸಿಗುತ್ತಿಲ್ಲ. ಔಷಧಿಯೂ ಸಿಗುತ್ತಿಲ್ಲ. ಕಳೆದ ಬಾರಿಗೆ ಕೊರೊನಾ ಹೊಸತಾಗಿತ್ತು. ಆದರೆ, ಒಂದು ವರ್ಷ ಕಳೆದರೂ, ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ ಅಂದ್ರೆ ಇವರ ವೈಫಲ್ಯ ಅಲ್ಲದೆ ಮತ್ತೇನು ? ಇಲ್ಲೊಬ್ಬರು ಲೋಕಸಭಾ ಸದಸ್ಯರಿದ್ದಾರೆ. ಬಾಲಿಶವಾಗಿ ಹೇಳಿಕೆ ನೀಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕೊರೊನಾ ಹೆಚ್ಚಲು ಕಾಂಗ್ರೆಸ್ ಕಾರಣವಂತೆ. ಲಸಿಕೆಯನ್ನು ಜನರಿಗೆ ಕೊಡುವಂತದ್ದು ಅಧಿಕಾರದಲ್ಲಿ ಯಾರಿದ್ದಾರೆ ಅವರ ಕೆಲಸ. ಈಗ ಲಸಿಕೆಯೇ ಸಿಗಲ್ಲ. ಮತ್ತೊಂದೆಡೆ ಮೊದಲ ಡೋಸ್ ಕೊಟ್ಟವರಿಗೆ ಎರಡನೇ ಡೋಸ್ ಪಡೆಯಲು ಸಮಯ ಬಂದಿದ್ದರೆ, ಯಾವಾಗ ಸಿಗಲಿದೆ ಎಂದು ಸಿಎಂಗೇ ಗೊತ್ತಿಲ್ಲದಾಗಿದೆ. ಆಕ್ಸಿಜನ್, ಐಸಿಯು, ಚಿಕಿತ್ಸೆ ಇಲ್ಲದೇ ಜನರು ಸಾಯುತ್ತಿದ್ದಾರೆ. ಬಿಜೆಪಿ ಸರಕಾರ ರಾಜ್ಯದಲ್ಲಿ ಕೆಟ್ಟ ಸ್ಥಿತಿಯನ್ನು ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೊರೊನಾ ಪೀಡಿತರಾಗಿ ಮನೆ, ಆಸ್ತಿ ಕಳಕೊಂಡವರಿಗೆ ಪ್ಯಾಕೇಜ್ ಕೊಡಬೇಕು. ಅದರಲ್ಲೂ ಇಂತಹ ಮಂದಿಗೆ ಪ್ಯಾಕೇಜ್ ಕೊಡಲೇಬೇಕು ಎಂದು ಆಗ್ರಹಿಸಿದ ರಮಾನಾಥ ರೈ, ಇವತ್ತು ಕಾಂಗ್ರೆಸ್ ಇದ್ದಿದ್ದರೆ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇರುತ್ತಿತ್ತು. ಮನೆ ಮನೆಗೆ ಕೊರೊನಾ ಕಿಟ್ ಹೋಗುತ್ತಿತ್ತು ಎಂದು ಸವಾಲೆಸೆದರು.
ಕೊರೊನಾ ನಿರ್ವಹಣೆಯಿಂದ ವೈಫಲ್ಯಕ್ಕೀಡಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮುಜುಗರಕ್ಕೀಡಾಗಿದ್ದಾರೆ. ಪ್ರಧಾನಿಯವರ ಇಮೇಜನ್ನು ಹೇಗೆ ಸೇವ್ ಮಾಡುವುದು ಅಂತಾ ಬಿಜೆಪಿಯವರು ಯೋಚಿಸುತ್ತಿದ್ದಾರೆಯೇ ವಿನಾ ಜನರ ಪ್ರಾಣ ಕಾಪಾಡುವ ಬಗ್ಗೆ ಯಾವುದೇ ಯೋಚನೆ ಅವರಿಗಿಲ್ಲ. ಜನರ ಬಗ್ಗೆ ಕನಿಷ್ಠ ಕಾಳಜಿ ಇರುತ್ತಿದ್ದರೆ ಇಷ್ಟು ನಿರ್ಲಕ್ಷ್ಯ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು.
The state and union government have completely failed in handling the pandemic, said district Congress president Harish Kumar.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm