ಬ್ರೇಕಿಂಗ್ ನ್ಯೂಸ್
17-05-21 10:30 pm Udupi Correspondent ಕರಾವಳಿ
ಉಡುಪಿ, ಮೇ 17: ಕೊರೊನಾ ಕಾರಣದಿಂದ ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಮೊಬೈಲ್, ವಿಡಿಯೋ ಗೇಮ್ ಹುಚ್ಚಿಗೆ ಬಿದ್ದು ಎಷ್ಟರ ಮಟ್ಟಿಗೆ ಮಾನಸಿಕ ಸ್ವಾಸ್ಥ್ಯ ಕಳಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ನಿದರ್ಶನ. ಇಲ್ಲೊಬ್ಬ 16 ವರ್ಷದ ಹುಡುಗನೊಬ್ಬ ತಂದೆ, ತಾಯಿ ಮೊಬೈಲ್ ನೋಡುತ್ತಿದ್ದುದಕ್ಕೆ ಗದರಿದರೆಂದು ಮನೆಯಿಂದ ಸ್ವಲ್ಪ ದೂರವಿರುವ ಸಾರ್ವಜನಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನಲ್ಲಿ ನಡೆದಿದೆ.

ಕಾಪು ತಾಲೂಕಿನ ಮಣಿಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಹೇಬತ್ ಅಸ್ಲಾಮಿಯಾ(16) ಮೃತ ದುರಂತ ಸಾವನ್ನಪ್ಪಿದ ಬಾಲಕ. ಈ ಬಗ್ಗೆ ಹುಡುಗನ ಹೆತ್ತವರಾದ ಜುಬೇದಾ ಮತ್ತು ಶಬಾನ್ ದಂಪತಿ ಕಾಪು ಠಾಣೆಗೆ ದೂರು ನೀಡಿದ್ದಾರೆ. ಅಸ್ಲಾಮಿಯಾ ದಿನವಿಡೀ ಮೊಬೈಲಿನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದುದಲ್ಲದೆ ತಂದೆ, ತಾಯಿ ಮಾತು ಕೇಳುತ್ತಿರಲಿಲ್ಲ. ಮೇ 15ರಂದು ಸಂಜೆ ಮೊಬೈಲ್ ಒತ್ತುತ್ತಿದ್ದ ಹುಡುಗನಿಗೆ ತಾಯಿ ಗದರಿದ್ದು, ಗೇಮ್ಸ್ ಆಡುವುದು ಬೇಡವೆಂದು ಹೇಳಿ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಹುಡುಗ, ತಾಯಿ ಬಳಿ ಕೋಪದಿಂದ ಮನೆಯ ಮೂಲೆಯಲ್ಲಿ ಕುಳಿತುಕೊಂಡಿದ್ದ.
ಆನಂತರ ಹುಡುಗನ ತಾಯಿ ನಮಾಜ್ ಮಾಡಲೆಂದು ಕೋಣೆಗೆ ತೆರಳಿದ್ದರೆ, ತಂದೆ ಬಾತ್ ರೂಮಿಗೆ ತೆರಳಿದ್ದರು. ನಮಾಜ್ ಮುಗಿಸಿದ ಬಳಿಕ ತಾಯಿ ಹೊರಬಂದಾಗ ಹುಡುಗ ಮನೆಯಲ್ಲಿ ಇರಲಿಲ್ಲ. ಬಳಿಕ ತಂದೆ, ತಾಯಿ ಇಬ್ಬರೂ ಮನೆ ಪರಿಸರದಲ್ಲಿ ಹುಡುಕಾಡಿದ್ದು, ಹೊರಗಡೆ ತೆರಳಿದಾಗ 200 ಮೀಟರ್ ದೂರದಲ್ಲಿ ಬಾವಿ ಬಳಿ ಜನ ಸೇರಿರುವುದು ಕಂಡುಬಂದಿದೆ. ಅಲ್ಲಿ ತೆರಳಿದಾಗ ಹುಡುಗ ಬಾವಿಗೆ ಹಾರಿರುವುದು ತಿಳಿದುಬಂದಿದ್ದು ಬಳಿಕ ಫೈರ್ ಸರ್ವಿಸ್ ನವರು ಬಂದು ಹುಡುಗನನ್ನು ಮೇಲೆತ್ತಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾನೆ. ಕಾಪು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
In an incident that highlights how mobile gaming addiction has taken over the lives of youngsters, a 16-year-old boy ended his life after being rebuked by her parents for playing video games on mobile phone. The incident occurred on the evening of May 15 at Manipur Kote, Manipura village, Udupi.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm