ಉಳ್ಳಾಲ: ಮೀನುಗಾರಿಕಾ ಬೋಟ್ ದುರಂತ, ಹತ್ತು ಜನ ಮೀನುಗಾರರ ರಕ್ಷಿಸಿದ ಸ್ಥಳೀಯರು ! 

23-05-21 11:05 am       Mangaluru Correspondent   ಕರಾವಳಿ

ಉಳ್ಳಾಲ ಕೋಡಿಯಿಂದ ನಿನ್ನೆ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್ ಬೋಟ್ ನಲ್ಲಿದ್ದ ಹತ್ತು ಜನ ಮೀನುಗಾರರು ಸ್ಥಳೀಯರಿಂದ ರಕ್ಷಿಸಿಸಲ್ಪಟ್ಟಿದ್ದಾರೆ.

ಉಳ್ಳಾಲ, ಮೇ 23: ಉಳ್ಳಾಲ ಕೋಡಿಯಿಂದ ನಿನ್ನೆ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್ ಬೋಟ್ ನಲ್ಲಿದ್ದ ಹತ್ತು ಜನ ಮೀನುಗಾರರು ಸ್ಥಳೀಯರಿಂದ ರಕ್ಷಿಸಿಸಲ್ಪಟ್ಟಿದ್ದಾರೆ.

ಉಳ್ಳಾಲದ ಅಶ್ರಫ್ ಮತ್ತು ಫಾರೂಕ್ ಪಾಲುದಾರಿಕೆಯ ಅಝಾನ್ ಬೋಟ್ ಇಂದು ಮುಂಜಾನೆ ದುರಂತಕ್ಕೀಡಾಗಿದೆ. ಕೋಡಿಯಿಂದ ನಿನ್ನೆ ರಾತ್ರಿ ಹತ್ತು ಜನರಿದ್ದ ಬೋಟ್ ಹೊರಟಿದ್ದು ಇಂದು ಮುಂಜಾನೆ ಮೊಗವೀರ ಪಟ್ಣದಲ್ಲಿ ಅಪಘಾಕ್ಕೀಡಾಗಿ ತೀರಕ್ಕೆ ಬಂದು ಬಿದ್ದಿದೆ. 

ಬ್ರೇಕ್ ವಾಟರ್ ಅವೈಜ್ಞಾನಿಕ ರೀಫ್ ಅಪಘಾತಕ್ಕೆ ಕಾರಣ ! 

ಉಳ್ಳಾಲದ ಕಡಲಿನ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಮೊಗವೀರ ಪಟ್ಣ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಎರಡು ರೀಫ್ ಗಳನ್ನು (ಬಂಡೆಗಳ ಸಾಲು) ಅಳವಡಿಸಲಾಗಿದ್ದು ಈ ರೀಫ್ ಗಳ ಮಧ್ಯದಲ್ಲಿ 1,070 ಮೀಟರ್ ಅಂತರವಿದೆ. ಈ ಕಡಿಮೆ ಅಂತರವನ್ನೇ ಮೀನುಗಾರರು ನಸುಕಿನ ವೇಳೆ ಅಳಿವೆ ಬಾಗಿಲೆಂದು ಗ್ರಹಿಸಿ ಬೋಟ್ ಚಲಾಯಿಸುತ್ತಾರೆಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ. ಅಲ್ಲದೆ, ರೀಫ್ ನಡುವೆ ಅಂತರ ಇರುವ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ‌. ಇದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ. 

ಅವೈಜ್ಞಾನಿಕ ರೀಫ್ ಕಾಮಗಾರಿಯಿಂದಲೇ ಈ ಅಪಘಾತ ನಡೆದಿರುವುದಾಗಿ ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Mangalore Boat accident in Ullal 10 fishermen recused by localities after boat rammed on huge rocks