ಬ್ರೇಕಿಂಗ್ ನ್ಯೂಸ್
24-05-21 05:30 pm Mangalore Correspondent ಕರಾವಳಿ
ಮಂಗಳೂರು, ಮೇ 24: ಕೊರೊನಾ ಲಾಕ್ಡೌನಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡೋರಂದ್ರೆ ಪೊಲೀಸರು. ಎಲ್ಲ ಜನ ಮನೆಯಲ್ಲಿ ಕುಳಿತರೂ, ಪೊಲೀಸರು ಮಾತ್ರ ಬೀದಿ ಕಾಯಲೇಬೇಕು ಎನ್ನುವ ಸ್ಥಿತಿ. ಹೀಗಾಗಿ ವಿವಿಧ ಸಂಸ್ಥೆಗಳು ಪೊಲೀಸರಿಗೆ ಊಟ, ಚಹಾ, ತಿಂಡಿ ಕೊಡಲು ಮುಂದೆ ಬಂದಿದ್ದಾರೆ. ಆದರೆ, ಮಂಗಳೂರು ಪೊಲೀಸ್ ಕಮಿಷನರ್ ಅಗತ್ಯವಿದ್ದುದನ್ನು ಮಾತ್ರ ಸ್ವೀಕರಿಸುತ್ತಿದ್ದಾರೆ. ಪೊಲೀಸರಿಗೆ ಬೇರೆ ಯಾವ ವಿಧದಲ್ಲಿ ನೆರವಾಗಬಹುದು ಎಂದು ಯೋಚನೆ ಮಾಡಿದ ಮಂಗಳೂರಿನ ಟಿವಿಎಸ್ ಟು - ವೀಲರ್ ಶೋರೂಮ್ ಸಂಸ್ಥೆಯವರು ವಿಭಿನ್ನ ರೀತಿಯ ಸೇವೆ ನೀಡಿದ್ದಾರೆ.
ಪೊಲೀಸರ ಸೇವೆಗಾಗಿ ನೂರಾರು ವಾಹನಗಳಿರುತ್ತವೆ. ಲಾಕ್ಡೌನಲ್ಲಿ ಗ್ಯಾರೇಜ್, ಶೋರೂಮ್ ಬಂದ್ ಆಗಿರುವ ಮಧ್ಯೆ ತುರ್ತಾಗಿ ವಾಹನಗಳನ್ನು ಸರ್ವಿಸ್ ಮಾಡುವುದಾಗಲೀ, ರಿಪೇರಿ ಮಾಡುವುದಾಗಲೀ ಸಾಧ್ಯವಾಗಲ್ಲ. ಪೊಲೀಸರಿಗೆ ಇದರಿಂದ ತೊಂದರೆ ಆಗಬಾರದೆಂಬ ನೆಲೆಯಲ್ಲಿ ಮಂಗಳೂರಿನ ಹೆಸರಾಂತ ಸಾಯಿರಾಧಾ ಟಿವಿಎಸ್ ಶೋರೂಂ ಸಂಸ್ಥೆಯವರು ಪೊಲೀಸರ ವಾಹನಗಳನ್ನು ಉಚಿತವಾಗಿ ಸರ್ವಿಸ್ ಮಾಡಿಕೊಡಲು ಮುಂದೆ ಬಂದಿದ್ದಾರೆ.



ಟಿವಿಎಸ್ ಕಂಪನಿಯ ವಾಹನಗಳನ್ನು ಉಚಿತವಾಗಿ ಆಯಿಲ್ ಚೇಂಜ್ ಸೇರಿ ಎಲ್ಲ ರೀತಿಯ ರಿಪೇರಿಯನ್ನೂ ಕಂಪನಿ ಮೆಕ್ಯಾನಿಕ್ ಗಳೇ ಮಾಡಿಕೊಡುತ್ತಿದ್ದಾರೆ. ಸಾಧಾರಣವಾಗಿ ಒಂದು ಬೈಕಿಗೆ 800 – 1000 ರೂ. ಖರ್ಚು ಬರುತ್ತಿದ್ದರೆ, ಅವನ್ನು ಸಾಯಿರಾಧಾ ಸಂಸ್ಥೆಯವರೇ ಭರಿಸಿದ್ದಾರೆ. ಪೊಲೀಸರ ವಾಹನಗಳ ಸರ್ವಿಸ್ ಮಾಡುವ ಮೂಲಕ ಸಾಯಿರಾಧಾ ಸಂಸ್ಥೆಯವರು ಹೊಸ ರೀತಿಯಲ್ಲಿ ಪೊಲೀಸರ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.





ಇಂದು ಬೆಳಗ್ಗೆ ಕಮಿಷನರ್ ಕಚೇರಿಗೆ ಆಗಮಿಸಿದ್ದ ಟಿವಿಎಸ್ ಸಾಯಿರಾಧಾ ಸಂಸ್ಥೆಯ ಪಾಲುದಾರ ಸಿದ್ದಾರ್ಥ ಶೆಟ್ಟಿ, ಈ ರೀತಿಯ ಅವಕಾಶ ಕೊಟ್ಟಿದ್ದಕ್ಕೆ ಕಮಿಷನರ್ ಶಶಿಕುಮಾರ್ ಅವರಿಗೆ ಧನ್ಯವಾದ ಹೇಳಿದರು. ಮೇ 20ರಿಂದ 25ರ ವರೆಗೆ ಪೊಲೀಸ್ ಗ್ರೌಂಡಿಗೇ ಬಂದು ನಮ್ಮ ಮೆಕ್ಯಾನಿಕ್ ಗಳು ರಿಪೇರಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ವಾಹನಗಳನ್ನು ಶೋರೂಮಿಗೆ ತಂದು ಕೊಟ್ಟರೂ ಸರ್ವಿಸ್ ಮಾಡಿಕೊಡುತ್ತೇವೆ ಎಂದು ಸಿದ್ದಾರ್ಥ ಶೆಟ್ಟಿ ಹೇಳಿದ್ದಾರೆ.
ಸಿದ್ದಾರ್ಥ ಶೆಟ್ಟಿ ಮತ್ತು ಅವರ ತಂದೆ ಮನೋಹರ್ ಶೆಟ್ಟಿ ಸಾಯಿರಾಧಾ ಬ್ರಾಂಡ್ ಹೆಸರಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಮೆಡಿಕಲ್ಸ್, ಹೊಟೇಲ್, ಹೆರಿಟೇಜ್ ರೆಸಾರ್ಟ್, ಟಿವಿಎಸ್ ಶೋರೂಂ ಹೀಗೆ ವಿವಿಧ ರೀತಿಯ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
Video:
Sai Radha TVS Offer Free Check-Up and Service of 48 TVS Apache Bikes of Mangalore Police. This project is initiated under the leadership of Manohar Shetty and Siddarth Shetty-Managing Partners of Sai Radha TVS.
08-09-26 02:24 pm
HK News Staffer
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
08-09-26 05:20 pm
HK News Staffer
ದಕ್ಷಿಣ ಕನ್ನಡದಲ್ಲಿ ದಿಢೀರ್ ಲೋಕಾಯುಕ್ತ ದಾಳಿ: ಬಂಟ್...
08-09-26 03:50 pm
Mangalore Jail Raid: ಮಂಗಳೂರು ಜೈಲಿಗೆ ತಡರಾತ್ರಿ...
08-09-26 09:50 am
ಪುತ್ತೂರು ಮಹಾಲಿಂಗೇಶ್ವರನ ಹೆಸರಲ್ಲಿ ಅವ್ಯವಹಾರ ; ಸಣ...
08-09-26 08:27 am
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬ...
07-09-26 09:57 pm
08-09-26 02:26 pm
HK News Staffer
ಅಪಘಾತದಲ್ಲಿ ಗಾಯಗೊಂಡ ಚಿರತೆಯನ್ನು ರಕ್ಷಣೆ ಮಾಡಲು ಹೋ...
08-09-26 01:11 pm
ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ವಿ...
08-09-26 11:17 am
ಆಸ್ಪತ್ರೆ ಸಿಬ್ಬಂದಿಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌ...
07-09-26 08:56 pm
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm