ಬ್ರೇಕಿಂಗ್ ನ್ಯೂಸ್
24-05-21 09:17 pm Mangaluru Correspondent ಕರಾವಳಿ
ಮಂಗಳೂರು, ಮೇ 24: ಎಂಆರ್ಪಿಎಲ್ ಸಂಸ್ಥೆಯವರು ನಮ್ಮದೇ ನೆಲದಲ್ಲಿ ಕಾಲೂರಿ ನಮ್ಮದೇ ಜನರಿಗೇ ಅನ್ಯಾಯ ಮಾಡುತ್ತಿದೆ. ನಮ್ಮ ನಾಡಿನ ಜನರಿಗೆ ಘೋರ ಅನ್ಯಾಯ ಆಗುತ್ತಿದ್ದರೂ, ಈ ಭಾಗದ ಶಾಸಕರು, ಸಂಸದರು ಏನು ಮಾಡುತ್ತಿದ್ದಾರೆ. ನಳಿನ್ ಕುಮಾರ್, ಶೋಭಾ ಎಲ್ಲಿ ಅವಿತಿದ್ದಾರೆ..?
ಎಂಆರ್ ಪಿಎಲ್ ಉದ್ಯೋಗ ನೇಮಕಾತಿಯಲ್ಲಿ ಮಾಡಿರುವ ವಂಚನೆಯ ಬಗ್ಗೆ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಜೆ.ಆರ್.ಲೋಬೋ ಕಿಡಿಕಾರಿದ್ದು ಶಾಸಕರು ಮತ್ತು ಸಂಸದರ ನೈತಿಕತೆಯನ್ನು ಪ್ರಶ್ನೆ ಮಾಡಿದ್ದಾರೆ.
ಎಂಆರ್ ಪಿಎಲ್ ಮಂಗಳೂರಿಗೆ ಬಂದಾಗ ಆರಂಭದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಊರು ಒಳ್ಳೆಯದಾಗುತ್ತದೆ, ಉದ್ಯೋಗ ಸಿಗುತ್ತದೆ ಎಂಬ ನೆಲೆಯಲ್ಲಿ ಜನರನ್ನು ಮನವೊಲಿಸಲಾಗಿತ್ತು. ಆದರೆ, ಜನರ ನಿರೀಕ್ಷೆಗೆ ಮೋಸವಾಗಿದೆ, ಉದ್ಯೋಗವೂ ಇಲ್ಲ. ಭೂಮಿಯೂ ಇಲ್ಲ ಎಂಬಂತಾಗಿದೆ ಎಂದರು.
ಇತ್ತೀಚೆಗೆ ನಡೆದಿರುವ 233 ಹುದ್ದೆಗಳ ನೇಮಕಾತಿಯಲ್ಲಿ ಕೇವಲ 13 ಮಂದಿ ಮಾತ್ರ ಕರ್ನಾಟಕದವರು ಇದ್ದಾರೆ. ಅದ್ರಲ್ಲಿ ನಾಲ್ಕು ಮಂದಿಗಷ್ಟೇ ಕರಾವಳಿಗೆ ಸಿಕ್ಕಿದೆ. ಹಾಗಾದರೆ ಇಲ್ಲಿ ವಿದ್ಯಾವಂತರಿಲ್ಲವೇ ? ಸ್ಥಳೀಯರಿಗೆ ಯಾಕೆ ಆದ್ಯತೆ ಕೊಟ್ಟಿಲ್ಲ. ಸರೋಜಿನಿ ಮಹಿಷಿ ವರದಿಗೆ ಯಾಕೆ ಮಾನ್ಯತೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಎಂಆರ್ ಪಿಎಲ್ ಯೂನಿಯನ್ ನವರು ಕರ್ನಾಟಕದವರಿಗೆ ಆದ್ಯತೆ ಕೊಡಿ ಎಂದು ಹೇಳಿದರೂ ಸಂಸ್ಥೆ ಕ್ಯಾರೇ ಮಾಡಿಲ್ಲ. ಸಂಸದರು, ಶಾಸಕರು ಕೊನೆಕ್ಷಣದಲ್ಲಿ ಸಭೆ ಕರೆದು ನೇಮಕಾತಿಗೆ ತಡೆ ಎಂದು ಹೇಳಿರುವುದು ರಾಜಕೀಯ ಪ್ರೇರಿತ. ಆಕ್ರೋಶಿತ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ. ಎಂಆರ್ಪಿಎಲ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಲೋಬೋ ಹೇಳಿದರು.
ನಮ್ಮದೇ ನೆಲದಲ್ಲಿ ನಮ್ಮದೇ ಜನರಿಗೆ ಅನ್ಯಾಯ ಆಗುತ್ತಿದ್ದರೆ, ಈ ಭಾಗದ ಸಂಸದರಾದ ನಳಿನ್, ಶೋಭಾ ಏನ್ ಮಾಡುತ್ತಿದ್ದಾರೆ ? ನಮ್ಮ ಯುವಜನರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗಬೇಕಾದ ಪರಿಸ್ಥಿತಿ ಇದೆ. ಅಂದು ಎಂಆರ್ ಪಿಎಲ್ ಗೆ ಜಾಗ ಕೊಡಲು ಹೋಗಿದ್ದ ಅಧಿಕಾರಿಯಲ್ಲಿ ನಾನು ಕೂಡ ಒಬ್ಬ. ಅಂದು ಅಜ್ಜಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಈಗಲೂ ಕಣ್ಮುಂದೆ ಬರ್ತಿದೆ. ಅಂತಹ ಕಣ್ಣೀರ ಮಧ್ಯೆ ನಾವು ನಮ್ಮ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂಬ ನೆಲೆಯಲ್ಲಿ ಜಾಗ ಕೊಡಿಸಿದ್ದೇವೆ. ಈಗ ಕಂಪನಿಯವರೇ ಮೋಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಪಾಲಿಕೆಯ ಪ್ರತಿಪಕ್ಷ ನಾಯಕ ವಿನಯರಾಜ್, ಮಾಜಿ ಮೇಯರ್ ಮಹಾಬಲ ಮಾರ್ಲ, ವಿಶ್ವಾಸ್ ದಾಸ್, ಸಂತೋಷ್ ಶೆಟ್ಟಿ, ಟಿ.ಕೆ. ಸುಧೀರ್, ನೀರಜ್ ಪಾಲ್, ಶುಭೋದಯ ಆಳ್ವ, ರಮಾನಂದ ಪೂಜಾರಿ, ಸವಾನ್ ಜೆಪ್ಪು ಉಪಸ್ಥಿತರಿದ್ದರು.
Job Cheating by MRPL for youngsters of Mangalore J R Lobo Slams BJP leaders. He also questioned where are Naleen Kumar Kateel and MP Shobha Karandlaje hiding.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm