ಮೃತ್ಯುಂಜಯ ಹೊಳೆಯಲ್ಲಿ ದಿಢೀರ್ ನೆರೆ ; ಮುಳುಗಿದ ಪಿಕಪ್ ವಾಹನ !

25-05-21 10:28 pm       Mangaluru Correspondent   ಕರಾವಳಿ

ಚಾರ್ಮಾಡಿ ಬಳಿಯ ಮೃತ್ಯುಂಜಯ ನದಿಯಲ್ಲಿ ಒಮ್ಮಿಂದೊಮ್ಮೆಲೇ ನೆರೆನೀರು ಉಕ್ಕಿ ಹರಿದು ಪಿಕಪ್ ವಾಹನ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ.

ಬೆಳ್ತಂಗಡಿ, ಮೇ 25: ಚಾರ್ಮಾಡಿ ಬಳಿಯ ಮೃತ್ಯುಂಜಯ ನದಿಯಲ್ಲಿ ಒಮ್ಮಿಂದೊಮ್ಮೆಲೇ ನೆರೆನೀರು ಉಕ್ಕಿ ಹರಿದು ಪಿಕಪ್ ವಾಹನ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ.

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ         ಎಂಬಲ್ಲಿ ಘಟನೆ ನಡೆದಿದ್ದು, ಹೊಳೆಯನ್ನು ದಾಟುತ್ತಿದ್ದ ವೇಳೆ ನೆರೆನೀರು ಉಕ್ಕಿ ಬಂದಿದೆ. ಕೂಡಲೇ ಅದರಲ್ಲಿದ್ದ ಚಾಲಕ ಸದಾನಂದ ಅವರನ್ನು ಸ್ಥಳೀಯರು ಸೇರಿ ರಕ್ಷಣೆ ಮಾಡಿದ್ದಾರೆ.

ಅಬಳಿಕ ಪಿಕಪ್ ವಾಹನಕ್ಕೆ ಹಗ್ಗ ಕಟ್ಟಿ ನಿಧಾನಕ್ಕೆ ಎಳೆದು ನದಿಯಿಂದ ಮೇಲೆತ್ತಿದ್ದಾರೆ. ಸ್ಥಳೀಯರ ಜೊತೆಗೆ ಕಕ್ಕಿಂಜೆಯ ವಿಕಾಯ ತಂಡದ ಸದಸ್ಯರು ಪಿಕಪ್ ವಾಹನವನ್ನು ಮೇಲಕ್ಕೆ ತರುವಲ್ಲಿ ಸಹಕರಿಸಿದ್ದಾರೆ.

ಕಳೆದ ಬಾರಿಯೂ ಮೃತ್ಯುಂಜಯ ನದಿಯಲ್ಲಿ ಆಗಾಗ ನೆರೆ ಬರುತ್ತಿತ್ತು. ಘಟ್ಟ ಪ್ರದೇಶದಲ್ಲಿ ಮಳೆಯಾದ ಸಂದರ್ಭದಲ್ಲಿ ನೆರೆ ಖಾಲಿ ನದಿಯಲ್ಲೂ ಒಮ್ಮಿಂದೊಮ್ಮೆಲೇ ನೆರೆ ಬರುತ್ತಿದ್ದ ಘಟನೆ ಆಗುತ್ತಿತ್ತು. ಈ ಬಾರಿಯೂ ಅಂತಹುದೇ ಘಟನೆ ಆರಂಭದಲ್ಲೇ ನಡೆಯುತ್ತಿದ್ದು ಸ್ಥಳೀಯರನ್ನು ಭೀತಿಗೊಳಿಸಿದೆ. 

Belthangady Mrityunjaya river overflows Pickup pan submerged in water. Video goes viral on social media.