ಬ್ರೇಕಿಂಗ್ ನ್ಯೂಸ್
26-05-21 01:25 pm Mangalore Correspondent ಕರಾವಳಿ
ಮಂಗಳೂರು, ಮೇ 26 : ದೇಶದಲ್ಲಿ ಅತ್ಯಂತ ಹೆಚ್ಚು ಜನರು ಓಡಾಡುವ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 2019-20ರಲ್ಲಿ 29ನೇ ರ್ಯಾಂಕ್ ಪಡೆದಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಾಕ್ಡೌನ್ ವರ್ಷದಲ್ಲಿ ತೀವ್ರ ಪರಿಣಾಮ ಎದುರಾಗಿದ್ದು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಇದರ ಜೊತೆಗೆ 2020- 21ನೇ ಸಾಲಿನಲ್ಲಿ ರ್ಯಾಂಕಿಂಗ್ ಕೂಡ 31ನೇ ಸ್ಥಾನಕ್ಕೆ ಕುಸಿದಿದೆ.
2019-20ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ಸೇರಿ ಒಟ್ಟಾರೆ 18,76,294 ಮಂದಿ ಪ್ರಯಾಣಿಸಿದ್ದರು. 2020- 21ನೇ ಸಾಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.67.2ರಷ್ಟು ಕುಸಿತ ಕಂಡಿದ್ದು, ಕೇವಲ 6,14,845 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಒಟ್ಟು ಪ್ರಯಾಣಿಕರ ನಿರ್ವಹಣೆಯಲ್ಲಿ 2019-20ರಲ್ಲಿ 29ನೇ ರ್ಯಾಂಕ್ ನಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣ ಈಗ ಎರಡು ಸ್ಥಾನಕ್ಕೆ ಕುಸಿದು 31ನೇ ಸ್ಥಾನಕ್ಕೆ ಇಳಿದಿದೆ.
2020-21ನೇ ಸಾಲಿನಲ್ಲಿ 1,52,434 ಅಂತಾರಾಷ್ಟ್ರೀಯ ಪ್ರಯಾಣಿಕರು ಸಂಚರಿಸಿದ್ದು, ಶೇ.73.3ರಷ್ಟು ಕುಸಿತ ಕಂಡಿದೆ. 2019-20ರಲ್ಲಿ ಒಟ್ಟು 5,71,226 ಪ್ರಯಾಣಿಕರ ನಿರ್ವಹಣೆಯಾಗಿತ್ತು. ಇದೇ ಅವಧಿಯಲ್ಲಿ 4,62,411 ದೇಶೀಯ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದು , ಶೇ.75.9ರಷ್ಟು ಕುಸಿತ ದಾಖಲಾಗಿದೆ. 2019- 20ರಲ್ಲಿ ಒಟ್ಟು 13,05,068 ಪ್ರಯಾಣಿಕರ ನಿರ್ವಹಣೆಯಾಗಿತ್ತು.
ಲಾಕ್ಡೌನ್ ಕಾರಣದಿಂದ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದ್ದು ಇದರಿಂದ ಶ್ರೇಯಾಂಕವೂ ಕುಸಿತವಾಗಿದೆ.
The international airport here, which had been allotted 29th rank in the year 2019-20, has slipped to No. 31 in the year 2020-21 in the ranking list of 50 top airports with the highest passenger traffic in India due to the lockdown effect.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm