ಸೋಂಕಿತರ ಸಂಖ್ಯೆ ಇಳಿಮುಖ ; ಸಾವಿನ ಪ್ರಮಾಣ ಏರಿಕೆ - ದ.ಕ. ಜಿಲ್ಲೆಯಲ್ಲಿ ಒಂದೇ ದಿನ 11 ಬಲಿ !

26-05-21 11:01 pm       Mangaluru Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇಂದು ಒಂದೇ ದಿನ ಹನ್ನೊಂದು ಮಂದಿ ಬಲಿಯಾಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ

ಮಂಗಳೂರು, ಮೇ 26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇಂದು ಒಂದೇ ದಿನ ಹನ್ನೊಂದು ಮಂದಿ ಬಲಿಯಾಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.‌ ಹದಿನೈದು ದಿನಗಳ ಲಾಕ್ಡೌನ್ ಬಳಿಕ ಸೋಂಕಿತರ ಸಂಖ್ಯೆ ಕಡಿಮೆಯಾದ್ರೂ ಸಾವಿನ‌ ಸಂಖ್ಯೆಯಲ್ಲಿ ಒಂದೇ ಬಾರಿಗೆ ಏರಿಕೆಯಾಗಿದ್ದು ಆತಂಕ ಮೂಡಿಸಿದೆ.

ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿಗೆ 11 ಮಂದಿ ಸಾವು ಕಂಡಿದ್ದಾರೆ. ಇದರೊಂದಿಗೆ ‌ಕೊರೋನಾಗೆ ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ 884 ಕ್ಕೆ ಏರಿಕೆಯಾಗಿದೆ. ‌

ದ.ಕ. ಜಿಲ್ಲೆಯಲ್ಲಿ ಇದೇ ವೇಳೆ 729 ಮಂದಿ ಕೊರೋನಾ ಪಾಸಿಟಿವ್ ಆಗಿದ್ದಾರೆ. ‌ಇದಲ್ಲದೆ, ಇಂದು 756 ಮಂದಿ ಕೊರೋನಾದಿಂದ ಗುಣಮುಖರಾಗಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಹಾಗಿದ್ದರೂ ಜಿಲ್ಲೆಯಲ್ಲಿ ಒಟ್ಟು ಸೋಂಕಿತರು 10,099 ಮಂದಿ ಇದ್ದಾರೆ.

ವಾರದ ಹಿಂದೆ ದಿನದ ಸೋಂಕಿತರ ಸಂಖ್ಯೆ ಒಂದೂವರೆ ಸಾವಿರ ಇತ್ತು. ಈಗ ಅರ್ಧಕ್ಕೆ ಬಂದು ನಿಂತಿದ್ದು ಲಾಕ್ಡೌನ್ ಬಳಿಕ ಸೋಂಕು ಹರಡುವಿಕೆ ಕಡಿಮೆಯಾಗಿದ್ದನ್ನು ಸೂಚಿಸುತ್ತಿದೆ. ಆದರೆ, ಸಾವಿನ ಸಂಖ್ಯೆ ಜಿಲ್ಲೆಯಲ್ಲಿ ಇದೇ ಮೊದಲಿಗೆ ದಿನದಲ್ಲಿ ಹತ್ತಕ್ಕಿಂತ ಹೆಚ್ಚು ಆಗಿದೆ.

Covid 19 cases spike up in Mangalore 11 death reported as on May 26th 729 tested positive.