ಬ್ರೇಕಿಂಗ್ ನ್ಯೂಸ್
27-05-21 09:32 pm Mangaluru Correspondent ಕರಾವಳಿ
ಕುಂದಾಪುರ, ಮೇ 27: ಎಂಬಿಬಿಎಸ್ ಕಲಿತು ಪಿಜಿ- ನೀಟ್ ಎಕ್ಸಾಂ ಬರೆಯಲು ರೆಡಿಯಾಗುತ್ತಿದ್ದವರು ಅತ್ತ ಪರೀಕ್ಷೆ ಮುಂದೂಡಿಕೆ ಆಗುತ್ತಲೇ ಮತ್ತೆ ನಿರಾಸೆಯಾಗಿದ್ದಾರೆ. ಆದರೆ, ಕುಂದಾಪುರದಲ್ಲಿ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದವರು ತಮ್ಮ ಖಾಲಿ ಅವಧಿಯನ್ನು ಆಸ್ಪತ್ರೆಯಲ್ಲಿ ಕಳೆಯಲು ನಿರ್ಧರಿಸಿದ್ದಾರೆ. ಕೋವಿಡ್ ರೋಗಿಗಳು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಕೈಲಾದ ಸೇವೆ ನೀಡಲು ಮುಂದಾಗಿದ್ದಾರೆ.
ಮುಂಬೈನಲ್ಲಿ ಎಂಬಿಬಿಎಸ್ ಮುಗಿಸಿದ್ದ ಡಾ.ರಚನಾ ಶೆಟ್ಟಿ ಸ್ನಾತಕೋತ್ತರ ಪದವಿಗಾಗಿ ನೀಟ್ ಎಕ್ಸಾಂ ಬರೆಯಲು ರೆಡಿ ಮಾಡಿಕೊಂಡಿದ್ದರು. ಮುಂಬೈನಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಅವರ ತಂದೆ ಸುರೇಶ್ ಶೆಟ್ಟಿ ಕಳೆದ ಪೆಬ್ರವರಿಯಲ್ಲಿ ನಿಧನರಾದ ಹಿನ್ನೆಲೆ ರಚನಾ ಊರಿಗೆ ಮರಳಿದ್ದರು. ಊರಲ್ಲೇ ಇದ್ದುಕೊಂಡು ಮುಂದಿನ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಈ ವೇಳೆ ತಾಯಿ ಮಾತ್ರ, ಮಗಳಲ್ಲಿ ನೀನು ಇಲ್ಲೇ ಇರು ಎಂದು ಒತ್ತಾಯಿಸುತ್ತಿದ್ದರು.

ನಮ್ಮ ಕುಟುಂಬವೂ ತಂದೆಯ ಸಾವಿನಿಂದಾಗಿ ಚಿಂತೆಯಲ್ಲಿತ್ತು. ಹೀಗಾಗಿ ಸ್ಥಳೀಯ ಆಸ್ಪತ್ರೆ ಒಂದರಲ್ಲಿ ಹುದ್ದೆ ಖಾಲಿ ಇರುವುದನ್ನು ತಿಳಿದು ಅಪ್ಲೈ ಮಾಡಿದ್ದೆ. ಕೋವಿಡ್ ಸೋಂಕಿತರು ಒಂದೇ ಸಮನೆ ಹೆಚ್ಚುತ್ತಿರುವುದರಿಂದ ವರ್ಕ್ ಲೋಡ್ ಕೂಡ ಜಾಸ್ತಿಯಾಯ್ತು. ಆದರೂ ವರ್ಕ್ ಮತ್ತು ಸ್ಟಡಿಯನ್ನೂ ಒಟ್ಟಿಗೇ ಮಾಡುತ್ತಿದ್ದೇನೆ ಎಂದು ಹೇಳಿದರು.
ಕುಂದಾಪುರ ಮೂಲದವರೇ ಆಗಿರುವ ಡಾ.ರಜತ್ ಶೆಟ್ಟಿ ಮತ್ತು ಸೋದರ ಡಾ.ಆಶಿತ್ ಶೆಟ್ಟಿ ಕೂಡ ಎಂಬಿಬಿಎಸ್ ಮುಗಿಸಿ ನೀಟ್ ಎಕ್ಸಾಂ ಬರೆಯಲು ರೆಡಿಯಾಗಿದ್ದರು. ಕಳೆದ ವರ್ಷವೂ ಅವರು ಊರಿಗೆ ಬಂದಿದ್ದ ವೇಳೆ ಕೊರೊನಾ ಸೋಂಕು ಆವರಿಸಿದ್ದರಿಂದ ತಾಲೂಕು ಆಸ್ಪತ್ರೆಯಲ್ಲಿ ಸೇವೆಯಲ್ಲಿ ತೊಡಗಿದ್ದರು. ಈ ಬಾರಿಯೂ ಕೊರೊನಾ ಎರಡನೇ ಅಲೆ ಆವರಿಸಿದ್ದು ವೈದ್ಯ ಸೋದರರಿಬ್ಬರು ಮತ್ತೆ ಅದೇ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ.

ಕೊರೊನಾ ಎರಡನೇ ಅಲೆ ತುಂಬ ಸೀರಿಯಸ್ ಆಗಿದ್ದರೂ ವಿಭಿನ್ನ ಅನುಭವಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಪ್ರಾಕ್ಟೀಸ್ ಮಾಡುತ್ತಾ ಪರೀಕ್ಷೆಗೆ ಸಿದ್ಧತೆ ನಡೆಸುವುದು ಕಷ್ಟ. ಆದರೆ, ಎಕ್ಸಾಂ ಯಾವಾಗ ಆಗುತ್ತೆ ಅನ್ನೋದು ಸ್ಪಷ್ಟವಾಗಿಲ್ಲ. ನಾವು ಈ ವರ್ಷವೇ ಬರೆಯಬೇಕು ಎಂದುಕೊಂಡಿದ್ದೆವು. ಮುಂದಿನ ವರ್ಷಕ್ಕೆ ಮತ್ತೆ ಸಿಲೆಬಸ್ ಬದಲಾಗಲೂಬಹುದು ಎಂದು ಹೇಳಿದ್ರು ಡಾ. ರಜತ್ ಶೆಟ್ಟಿ.
ಆಸ್ಪತ್ರೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಡಾ.ನಮೃತಾ ಕೂಡ ಇಂಥದ್ದೇ ಅಭಿಪ್ರಾಯ ಪಟ್ಟರು. ಕೆಲವೊಮ್ಮೆ ದಿನದ ಸೇವೆ ಮುಗಿಸುವಷ್ಟರಲ್ಲಿ ತುಂಬಾನೇ ದಣಿದು ಬಿಡುತ್ತೇವೆ. ಆದರೆ, ದುರಂತದ ಸಂದರ್ಭದಲ್ಲಿ ಸಮಾಜಕ್ಕಾಗಿ ಸೇವೆ ಮಾಡುತ್ತಿದ್ದೇವೆ ಎಂಬ ಸಂತಸ ನಮಗಿದೆ ಎಂದು ಹೇಳುತ್ತಾರೆ. ಈ ರೀತಿ ಕೆಲಸದಲ್ಲಿ ತೊಡಗಿರುವುದು ನಮಗೆ ವಿಶೇಷ ಅನುಭವಗಳನ್ನು ನೀಡುತ್ತಿದೆ. ಇದರಿಂದ ನಾವು ಬಹಳಷ್ಟು ಕಲಿಯಲು ಸಾಧ್ಯವಾಗುತ್ತಿದೆ ಎಂದರು ಡಾ.ನಿವೇದಿತಾ. ಎಲ್ಲ ಸಿಬಂದಿ, ಹಿರಿಯ ವೈದ್ಯರು, ನೋಡಲ್ ಅಧಿಕಾರಿಗಳು ತಮ್ಮ ಕರ್ತವ್ಯದ ಮಧ್ಯೆಯೂ ಗೈಡ್ ಮಾಡುತ್ತಾರೆ ಎಂದರು.
ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಈ ಬಾರಿ ಕೊರೊನಾ ಎರಡನೇ ಅಲೆಗೆ ಸುಮಾರು 700 ಮಂದಿ ಸೋಂಕಿತರು ಅಡ್ಮಿಟ್ ಆಗಿದ್ದಾರೆ. 40 ಮಂದಿ ಕೋವಿಡ್ ಸೋಂಕಿತ ಮಹಿಳೆಯರು ಮೆಟರ್ನಿಟಿ ವಾರ್ಡಿಗೆ ದಾಖಲಾಗಿದ್ದು ಸುರಕ್ಷಿತವಾಗಿ ಹೆರಿಗೆ ಆಗಿದ್ದಾರೆ ಎಂದು ತಾಲೂಕು ನೋಡಲ್ ಅಧಿಕಾರಿ ಡಾ. ನಾಗೇಶ್ ಮಾಹಿತಿ ನೀಡಿದರು.
With the exam entrance postponed, a group of fresh MBBS graduates from Kundapur in Udpui district, who have been prepUdupi for the PG-NEET for almost
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm