ದುಬೈನಿಂದ ಚಿನ್ನ ಬಚ್ಚಿಟ್ಟುಕೊಂಡು ಬಂದು ಸಿಕ್ಕಿಬಿದ್ದ ಭಟ್ಕಳದ ಭೂಪ !

28-05-21 05:17 pm       Mangalore Correspondent   ಕರಾವಳಿ

ಚಿನ್ನದ ಗಟ್ಟಿಯನ್ನು ದೇಹದಲ್ಲಿ ಬಚ್ಚಿಟ್ಟುಕೊಂಡು ಬರುತ್ತಿದ್ದ ಭಟ್ಕಳ ಮೂಲದ ಪ್ರಯಾಣಿಕನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಮಂಗಳೂರು, ಮೇ 28: ಅಕ್ರಮವಾಗಿ ಚಿನ್ನದ ಗಟ್ಟಿಯನ್ನು ದೇಹದಲ್ಲಿ ಬಚ್ಚಿಟ್ಟುಕೊಂಡು ಬರುತ್ತಿದ್ದ ಭಟ್ಕಳ ಮೂಲದ ಪ್ರಯಾಣಿಕನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ‌

ಭಟ್ಕಳ ಮೂಲದ ಸಿದ್ದಿಕ್ ಮುಕ್ದಮ್ ಹುಸೇನ್ (27) ಸಿಕ್ಕಿಬಿದ್ದ ಆರೋಪಿ.‌ ದುಬೈನಿಂದ ಇಂದು ಬೆಳಗ್ಗೆ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದ ಈ ವ್ಯಕ್ತಿ ತನ್ನ ಗುದದ್ವಾರದಲ್ಲಿ 262 ಗ್ರಾಮ್ ಚಿನ್ನವನ್ನು ಪೇಸ್ಟ್ ರೂಪಕ್ಕಿಳಿಸಿ ಉಂಡೆ ಮಾಡಿಕೊಂಡು ತಂದಿದ್ದ. 

ಕಸ್ಟಮ್ಸ್ ಅಧಿಕಾರಿಗಳು ಸಂಶಯದಿಂದ ತಪಾಸಣೆ ನಡೆಸಿದ್ದು ಆತನ ದೇಹದಿಂದ 13.17 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆದಿದ್ದಾರೆ. ‌ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಸ್ಪಿ ದರ್ಜೆಯ ರಾಕೇಶ್ ಕುಮಾರ್, ಸತೀಶ ಕುಮಾರ್, ಇನ್ಸ್ ಪೆಕ್ಟರ್ ಸಂದೀಪ್ ಮತ್ತಿತರರು ಇದ್ದರು.

Customs officers seized 262 grams gold worth Rs 13.2 lac at Mangaluru International Airport on Friday May 28. Based on intelligence and profiling of passengers, Customs officers intercepted Siddiqua Miqdam Hussain (27) hailing from Bhatkal.