ಮುಂಬೈ ರೈಲಿನಲ್ಲಿ ಭಾರೀ ಪ್ರಮಾಣದ ಮದ್ಯ ಸಾಗಣೆ ; ಮಂಗಳೂರಿನಲ್ಲಿ ವಶಕ್ಕೆ

28-05-21 08:43 pm       Mangaluru Correspondent   ಕರಾವಳಿ

ರೈಲಿನಲ್ಲಿ ಅಕ್ರಮವಾಗಿ ಭಾರೀ ಪ್ರಮಾಣದ ಮದ್ಯದ ಬಾಟಲಿಗಳನ್ನು ತರುತ್ತಿದ್ದ ವೇಳೆ ಅಬಕಾರಿ ಮತ್ತು ರೈಲ್ವೇ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದು ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಮೇ 28: ರೈಲಿನಲ್ಲಿ ಅಕ್ರಮವಾಗಿ ಭಾರೀ ಪ್ರಮಾಣದ ಮದ್ಯದ ಬಾಟಲಿಗಳನ್ನು ತರುತ್ತಿದ್ದ ವೇಳೆ ಅಬಕಾರಿ ಮತ್ತು ರೈಲ್ವೇ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದು ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಮುಂಬೈನಿಂದ ಬರುತ್ತಿದ್ದ ದಾದರ್ - ತಿರುನಲ್ವೇಲಿ ಎಕ್ಸ್ ಪ್ರೆಸ್ ರೈಲು ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ತಲುಪುತ್ತಿದ್ದಂತೆ ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ತಿಳಿಯುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.

138.750 ಲೀಟರ್ ಮದ್ಯದ ಸಂಗ್ರಹ ಇತ್ತೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಡೀಸಿ ಶೈಲಜಾ ಕೋಟೆ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಮದ್ಯವನ್ನು ಎಲ್ಲಿಂದ ಎಲ್ಲಿಗೆ ಒಯ್ಯಲಾಗುತ್ತಿತ್ತು ಎನ್ನುವುದು ತಿಳಿದುಬಂದಿಲ್ಲ. 

In a joint operation officials of Excise department and railway police confiscated liquor that was being transported illegally on a train at Mangaluru Junction railway station on Friday May 28. As much as 138.750 litres of liquor was seized from the Dadar-Tirunalveli express train.