ಬ್ರೇಕಿಂಗ್ ನ್ಯೂಸ್
28-05-21 09:04 pm Mangaluru Correspondent ಕರಾವಳಿ
ಮಂಗಳೂರು, ಮೇ 28: ಮಂಗಳೂರು ನಗರ ಪೊಲೀಸರು ಆರಂಭಿಸಿರುವ ಕೋವಿಡ್ ಸಮನ್ವಯ ಹೆಲ್ಪ್ ಲೈನ್ ಮೂಲಕ 80 ಮಂಗಳಮುಖಿಯರಿಗೆ ಕೋವಿಡ್ ದಿನಸಿ ಕಿಟ್ ವಿತರಿಸಲಾಗಿದೆ. ರಥಬೀದಿಯ ಉದ್ಯಮಿ ವಿಜಯೇಂದ್ರ ಭಟ್ ಕೊಡಮಾಡಿರುವ ಕಿಟ್ ಗಳನ್ನು ಇಂದು ಕಮಿಷನರ್ ಕಚೇರಿಯಲ್ಲಿ ಮಂಗಳಮುಖಿಯರಿಗೆ ವಿತರಣೆ ಮಾಡಲಾಯಿತು.
ತಲಾ ಹತ್ತು ಕೇಜಿ ದಿನಸಿ ಕಿಟ್ ಪ್ರಾಯೋಜಿಸಿದ ವಿಜಯೇಂದ್ರ ಭಟ್ ಅವರನ್ನು ಪೊಲೀಸ್ ಕಮಿಷನರ್ ಶಶಿಕುಮಾರ್ ಅಭಿನಂದಿಸಿದರು. ಮೇ 21ರಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಕೋವಿಡ್ ಸಮನ್ವಯ ಎಂಬ ಹೊಸ ಪರಿಕಲ್ಪನೆಯಡಿ ಸಹಾಯವಾಣಿ ಆರಂಭಿಸಲಾಗಿತ್ತು. ಕೋವಿಡ್ ಸಂಕಷ್ಟದಿಂದ ಕಷ್ಟಕ್ಕೆ ಒಳಗಾದವರು, ವಿದೇಶದಲ್ಲಿದ್ದು ಊರಲ್ಲಿ ಕುಟುಂಬಸ್ಥರಿಗೆ ತೊಂದರೆ ಎದುರಾದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸ್ಪಂದಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದರು.
ಅದರಂತೆ, ವಿವಿಧ ಕಡೆಗಳಿಂದ ಕರೆಗಳು ಬಂದಿದ್ದು ಈವರೆಗೆ 24 ಕರೆಗಳಿಗೆ ಸ್ಪಂದಿಸಲಾಗಿದೆ. ಮಂಗಳಮುಖಿಯರ ಸಂಘದ ರಾಜ್ಯ ಘಟಕದಿಂದ ಕರೆ ಮಾಡಿ, ಮಂಗಳೂರಿನಲ್ಲಿರುವ ಮಂಗಳಮುಖಿ ಸದಸ್ಯರು ಕಷ್ಟದಲ್ಲಿರುವ ಬಗ್ಗೆ ಹೇಳಿಕೊಂಡಿದ್ದರು. ಹೀಗಾಗಿ ಉದ್ಯಮಿಗಳ ಮೂಲಕ ಆಹಾರದ ಕಿಟ್ ವಿತರಿಸುವ ಕೆಲಸ ಮಾಡಲಾಗಿದೆ. ವಿಜಯೇಂದ್ರ ಭಟ್ ದಿನಸಿ ಕಿಟ್ ಪ್ರಾಯೋಜಿಸಿದ್ದಾರೆ ಎಂದು ಕಮಿಷನರ್ ಇದೇ ವೇಳೆ ತಿಳಿಸಿದರು.
ಲಾಕ್ಡೌನ್ ಕಾರಣದಿಂದ ಬಹಳಷ್ಟು ಕಷ್ಟದಲ್ಲಿದ್ದೇವೆ. ರಾಜ್ಯ ಸರಕಾರದಿಂದಲೂ ನಮಗೆ ಯಾವುದೇ ಪರಿಹಾರ, ಸೌಲಭ್ಯ ದೊರಕಿಲ್ಲ. ನಮ್ಮ ಕಷ್ಟದ ಬಗ್ಗೆ ತಿಳಿದು ಸ್ಪಂದಿಸಿದ ಮಂಗಳೂರಿನ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮಂಗಳಮುಖಿ ಹೇಮಾ ತಿಳಿಸಿದರು.
ಈ ಸಂದರ್ಭ ಡಿಸಿಪಿಗಳಾದ ಹರಿರಾಮ್ ಶಂಕರ್, ವಿನಯ ಗಾಂವ್ಕರ್, ಎಸಿಪಿಗಳಾದ ಮಹೇಶ್ ಕುಮಾರ್, ನಟರಾಜ್, ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಉಪಸ್ಥಿತರಿದ್ದರು.
Mangaluru city police commissioner N Shashi Kumar along with DCP (Law and Order) Hariram Shankar, DCP (Crime and Traffic) Vinay A Gaonkar distributed grocery kits to over 80 transgenders in the city on Friday, May 28. The grocery kits were distributed on the premises of the police commissioner's office.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm