42ನೇ ಮದುವೆ ವಾರ್ಷಿಕೋತ್ಸವ ; ವೃದ್ಧಾಶ್ರಮಕ್ಕೆ ಒಂದು ಲಕ್ಷ ದೇಣಿಗೆ ನೀಡಿದ ದಂಪತಿ !

01-06-21 09:02 pm       Mangaluru Correspondent   ಕರಾವಳಿ

ದಂಪತಿ ತಮ್ಮ 42ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವೃದ್ಧಾಶ್ರಮಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ.

ಮಂಗಳೂರು, ಜೂನ್ 1: ನಗರದ ಕರಂಗಲ್ಪಾಡಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸಭಾದ ಮಹಿಳಾ ವೇದಿಕೆಯ ಕಾರ್ಯದರ್ಶಿ ಪುಷ್ಪಾವತಿ ಮತ್ತು ಶ್ರೀನಿವಾಸ್ ದಂಪತಿ ತಮ್ಮ 42ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವೃದ್ಧಾಶ್ರಮಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ.

ದಂಪತಿ ತಮ್ಮ ಮದುವೆಯ ದಿನದ ನೆನಪಿಗಾಗಿ ಸುಬ್ರಹ್ಮಣ್ಯ ಸಭಾದ ಘಟಕ ಕೇಂದ್ರ ಪುತ್ತೂರಿನ ಶಿವಸದನ ವೃದ್ಧಾಶ್ರಮಕ್ಕೆ ರೂ. ಒಂದು ಲಕ್ಷ ದೇಣಿಗೆ ನೀಡಿದ್ದಾರೆ. ಇದೇ ವೇಳೆ ದಂಪತಿ ಮದುವೆಯ ನಿಮಿತ್ತ ಹಾರ ಬದಲಾಯಿಸಿಕೊಂಡು ಸಂಭ್ರಮ ಪಟ್ಟರು.‌

ಇವರ ದೇಣಿಗೆಯನ್ನು ಸುಬ್ರಹ್ಮಣ್ಯ ಸಭಾದ ಕಾರ್ಯದರ್ಶಿ ಕರುಣಾಕರ ಬೆಳ್ಳೆ, ಸಂತೋಷ ಕುಮಾರ್ ಮತ್ತು ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ ಕುಮಾರ್, ಉಪಾಧ್ಯಕ್ಷೆ ಸ್ನೇಹಲತಾ ದಿವಾಕರ ಸ್ವೀಕರಿಸಿದರು.

Couple donates Rs 1 lakh on 42nd wedding anniversary to Ashram in Mangalore.