ಅನಾರೋಗ್ಯದ ನೆಪದಲ್ಲಿ ಸಾವಿಗೆ ಶರಣಾದ ವೃದ್ಧ ದಂಪತಿ !

03-06-21 10:47 am       Udupi Correspondent   ಕರಾವಳಿ

ಕಾರ್ಕಳ ಪೇಟೆಯ ಹವಾಲ್ದಾರ್ ಬೆಟ್ಟು ಎಂಬಲ್ಲಿ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಕಾರ್ಕಳ, ಜೂ.3 : ಕಾರ್ಕಳ ಪೇಟೆಯ ಹವಾಲ್ದಾರ್ ಬೆಟ್ಟು ಎಂಬಲ್ಲಿ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಮೃತರನ್ನು ಕೆ.ಪಿ.ಅನಂತ ಪ್ರಭು(84) ಮತ್ತು ಕೆಪಿ.ಪದ್ಮಾ ಪ್ರಭು(82) ಎಂದು ಗುರುತಿಸಲಾಗಿದೆ. ಮೇ 31ರಂದು ಮನೆಯಲ್ಲಿ ವಿಷ ಸೇವಿಸಿದ್ದು ತೀವ್ರ ಅಸ್ವಸ್ಥರಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ದಂಪತಿ ಕೊನೆಯುಸಿರೆಳೆದಿದ್ದಾರೆ. 

ಅನಂತಪ್ರಭು ಜೂ.1ರ ಬೆಳಗ್ಗೆ ಮೃತರಾದರೆ,  ಪದ್ಮಾ ಪ್ರಭು ಅದೇ ದಿನ ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾರೆ. ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಕೆ.ಪಿ. ಅನಂತ ಪ್ರಭು, ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಕಾರ್ಕಳ ನಗರದಲ್ಲಿ ಪಾತ್ರೆ ಮಳಿಗೆ ನಡೆಸುತ್ತಿದ್ದರು.

ಈ ನಡುವೆ ಪತ್ನಿ ಪದ್ಮಾ ಪ್ರಭು ಅನಾರೋಗ್ಯಕ್ಕೆ ತುತ್ತಾಗಿದ್ದರು. ವೃದ್ಧಾಪ್ಯ ಮತ್ತು ಅನಾರೋಗ್ಯದಿಂದ ಬೇಸತ್ತ ದಂಪತಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ದಂಪತಿಗೆ ಇಬ್ಬರು ಪುತ್ರರಿದ್ದು ಒಬ್ಬಾತ ಭಾರತೀಯ ಸೇನೆಯಲ್ಲಿ ಕರ್ನಲ್ ಹುದ್ದೆಯಲ್ಲಿದ್ದಾರೆ.

In a tragic incident Elderly couple has been found dead at Home after consuming poison in Karkala. The reason for their suicide is still not yet know.