ಬ್ರೇಕಿಂಗ್ ನ್ಯೂಸ್
05-06-21 05:54 pm Udupi Correspondent ಕರಾವಳಿ
ಕಾರ್ಕಳ, ಜೂನ್ 5: 85 ವರ್ಷದ ಅಜ್ಜಿಯನ್ನು ಸ್ವಂತ ಮಗನೇ ಮನೆಯಿಂದ ಹೊರಹಾಕಿದ್ದಲ್ಲದೆ, ಆಕೆಯ ಮೇಲೆ ಹಲ್ಲೆಗೈದ ಘಟನೆ ಕಾರ್ಕಳ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಗಮನಿಸಿ ಅಜ್ಜಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಲೂಕಿನ ಕುಂಟಲ್ಪಾಡಿ ಎಂಬಲ್ಲಿನ ಅಶೋಕನಗರದ ಅಂಗನವಾಡಿಯ ಜಗಲಿಯಲ್ಲಿ ಅಜ್ಜಿ ಎರಡು ದಿನಗಳಿಂದ ಅನ್ನ ನೀರಿಲ್ಲದೆ ಮಲಗಿದ್ದರು. ತಲೆಯ ಭಾಗಕ್ಕೆ ಗಾಯಗೊಂಡಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಎಂಬವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಜ್ಜಿಯನ್ನು ಯಶೋದಾ ಆಚಾರ್ಯ (85) ಎಂದು ಗುರುತಿಸಲಾಗಿದ್ದು, ಆಕೆಯ ಮಗನೇ ಮನೆಯಿಂದ ಹೊರಹಾಕಿದ್ದಾನೆ ಎನ್ನಲಾಗುತ್ತಿದೆ.
ರಮಿತಾ ಕೋವಿಡ್ ಆಹಾರದ ಕಿಟ್ ನೀಡುವುದಕ್ಕಾಗಿ ಮನೆ ಪರಿಸರಕ್ಕೆ ಬಂದಿದ್ದಾಗ, ಅಜ್ಜಿಯನ್ನು ಹೊರಗೆ ಹಾಕಿರುವುದು ಗಮನಕ್ಕೆ ಬಂದಿದೆ. ಅಲ್ಲದೆ, ಈ ಬಗ್ಗೆ ಮನೆಯಲ್ಲಿ ಕೇಳಿದಾಗ ಸ್ವಂತ ಮಗನೇ ತಾಯಿಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾನೆಂದು ತಿಳಿದುಬಂದಿದೆ. ಹೀಗಾಗಿ ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಿದ್ದಲ್ಲದೆ, ಒಂದಷ್ಟು ಬಟ್ಟೆಯನ್ನೂ ತೆಗೆದುಕೊಟ್ಟಿದ್ದಾರೆ. ಯಶೋಧಾ ಅವರ ಗಂಡ ಶೀನ ಆಚಾರ್ಯ ಐದು ವರ್ಷಗಳ ಹಿಂದೆ ನಿಧನರಾಗಿದ್ದು ಆಬಳಿಕ ಮಗನ ಜೊತೆ ವಾಸವಿದ್ದರು.
ಅಜ್ಜಿ ಯಶೋಧಾ ಹೇಳುವ ಪ್ರಕಾರ, ಮನೆಯಲ್ಲಿ ಮಗ ಮತ್ತು ಸೊಸೆ ಹೊಡೆಯುತ್ತಿದ್ದರಂತೆ. ಕಟ್ಟಿಗೆಯಲ್ಲಿ ಹೊಡೆದಿದ್ದರಿಂದ ತಲೆಗೆ ಗಾಯವಾಗಿದೆ ಎಂದು ಹೇಳಿದ್ದಾರೆ. ಆದರೆ, ಮಗ ತಾಯಿಗೆ ಹೊಡೆದಿರುವುದನ್ನು ನಿರಾಕರಿಸಿದ್ದಾನೆ. ತಾಯಿ ಮಾನಸಿಕವಾಗಿ ಸ್ಥಿಮಿತ ಕಳಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದಿದ್ದು, ಅದರಿಂದ ತಲೆಗೆ ಪೆಟ್ಟಾಗಿದೆ. ಅಷ್ಟೇನು ದೊಡ್ಡ ಗಾಯ ಆಗಿಲ್ಲದ ಕಾರಣ ಆಸ್ಪತ್ರೆಗೆ ತೋರಿಸಿಲ್ಲ ಎಂದಿದ್ದಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ತಾಯಿ ಮೇಲೆ ಹಲ್ಲೆಗೈದ ಬಗ್ಗೆ ಮಗನ ವಿರುದ್ಧ ಕೇಸು ದಾಖಲಾಗಿದೆ.
In a heartless act, a son did not take his 85-year-old mother, who had received grievous injuries to her head, for medical treatment. A social worker came to the rescue of the elderly woman and got her admitted to the government hospital of the taluk.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm