ಸಾಯಿರಾಧಾ, ಸಾಯಿ ಪ್ಯಾಲೇಸ್ ಸಂಸ್ಥೆಯಿಂದ ಪೊಲೀಸರಿಗೆ 350 ದಿನಸಿ ಕಿಟ್ ವಿತರಣೆ

05-06-21 09:54 pm       Mangaluru Correspondent   ಕರಾವಳಿ

ಸಾಯಿರಾಧಾ ಮತ್ತು ಸಾಯಿ ಪ್ಯಾಲೇಸ್ ಸಮೂಹ ಸಂಸ್ಥೆಗಳ ವತಿಯಿಂದ ಪೊಲೀಸರಿಗೆ ದಿನಸಿ ಕಿಟ್ ಗಳನ್ನೂ ವಿತರಣೆ ಮಾಡಲಾಗಿದೆ.

ಮಂಗಳೂರು, ಜೂನ್ 5: ಸಾಯಿರಾಧಾ ಮತ್ತು ಸಾಯಿ ಪ್ಯಾಲೇಸ್ ಸಮೂಹ ಸಂಸ್ಥೆಗಳ ವತಿಯಿಂದ ಪೊಲೀಸರಿಗೆ ದಿನಸಿ ಕಿಟ್ ಗಳನ್ನೂ ವಿತರಣೆ ಮಾಡಲಾಗಿದೆ. ಮಂಗಳೂರಿನಲ್ಲಿ 350 ಪೋಲೀಸರಿಗೆ ದಿನಸಿ ಕಿಟ್ ಗಳನ್ನು ನೀಡಲಾಗಿದ್ದು, ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಅವರಿಗೆ ಹಸ್ತಾಂತರ ಮಾಡಲಾಗಿದೆ.

ಪೋಲೀಸರಿಗೆ ದಿನಕ್ಕೆ ಬೇಕಾಗುವಷ್ಟು ಎಲ್ಲ ರೀತಿಯ ಸಾಮಗ್ರಿಗಳನ್ನು ಸಂಗ್ರಹಿಸಿ, ಕಿಟ್ ನೀಡಲಾಗಿದೆ. 350 ಕಿಟ್ ಗಳನ್ನು ಬಾಕ್ಸ್ ಗಳನ್ನು ಕಮಿಷನರೇಟ್ ಕಚೇರಿಗೆ ತಲುಪಿಸಲಾಗಿದ್ದು ಸಾಯಿರಾಧಾ ಕಂಪೆನಿಯ ಪ್ರಮೋಟರ್ ಸಿದ್ಧಾರ್ಥ ಶೆಟ್ಟಿ ಡಿಸಿಪಿ ಹರಿರಾಮ್ ಶಂಕರ್ ಅವರಿಗೆ ಹಸ್ತಾಂತರ ಮಾಡಿದರು.

ಇತ್ತೀಚೆಗೆ ಸಾಯಿರಾಧಾ ಸಂಸ್ಥೆಯಿಂದ ಪೊಲೀಸರ ವಾಹನಗಳನ್ನು ಉಚಿತವಾಗಿ ದುರಸ್ತಿ ಮಾಡುವ ಸೇವೆ ನೀಡಲಾಗಿತ್ತು. ಕಂಪನಿಯ ಮೆಕ್ಯಾನಿಕ್ ಗಳು ಕಮಿಷನರೇಟ್ ಕಚೇರಿಯ ಮೈದಾನಕ್ಕೆ ತೆರಳಿ, ಐದು ದಿನಗಳ ಕಾಲ ಪೊಲೀಸರ ಬೈಕ್ ಇನ್ನಿತರ ವಾಹನಗಳನ್ನು ಉಚಿತವಾಗಿ ದುರಸ್ತಿ ಮಾಡಿದ್ದರು. ಅದರ ಜೊತೆಗೆ, ಉಚಿತವಾಗಿ ಆಯಿಲ್ ಹಾಕಿ, ಸರ್ವಿಸ್ ಮಾಡಿಕೊಡುವ ಕೆಲಸವನ್ನೂ ಮಾಡಿದ್ದರು. ಸಾಯಿರಾಧಾ ಸಂಸ್ಥೆಯ ವಿಶೇಷ ರೀತಿಯ ಸೇವೆಯ ಬಗ್ಗೆ ಕಮಿಷನರ್ ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

Read: ಪೊಲೀಸರ ಕಾರ್ಯಕ್ಕೆ ಹೀಗೊಂದು ನೆರವು ; ವಾಹನಗಳ ರಿಪೇರಿಗೆ ಸಾಯಿರಾಧಾ ಟಿವಿಎಸ್

Sai Palace and Sai Radha group distribute 350 food kit to the Police Staff canteen in Mangalore. The Kits were handed over to DCP Hariram Shanker.