ಉಡುಪಿಯಲ್ಲಿ ಶಾಸಕರು, ಅಧಿಕಾರಿಗಳಿಂದಲೇ ಲಾಕ್ಡೌನ್ ನೀತಿ ಉಲ್ಲಂಘನೆ ! ಅಂತರವೂ ಇಲ್ಲ.. ಜನರಿಗೆ ಮಿತಿಯೂ ಇಲ್ಲ..!

12-06-21 12:59 pm       Udupi Correspondent   ಕರಾವಳಿ

ಉಡುಪಿ ಶಾಸಕ ರಘುಪತಿ ಭಟ್ ಪಾಲ್ಗೊಂಡಿದ್ದ ಕಾರ್ಯಕ್ರಮ ಒಂದರಲ್ಲಿ ಜನವೋ ಜನ.. ಮಾಸ್ಕೂ ಇಲ್ಲ. ಅಂತರವೂ ಇರಲಿಲ್ಲ. ಜನರಿಗೆ ಮಿತಿಯೂ ಇರಲಿಲ್ಲ. 

ಉಡುಪಿ, ಜೂನ್ 12: ಲಾಕ್ಡೌನ್ ಕಾರಣ ಯಾವುದೇ ಜನ ಸೇರುವ ಕಾರ್ಯಕ್ರಮ ಮಾಡುವಂತಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳನ್ನೂ ಮಾಡುವ ಹಾಗಿಲ್ಲ. ಆದರೆ, ಉಡುಪಿ ಶಾಸಕ ರಘುಪತಿ ಭಟ್ ಪಾಲ್ಗೊಂಡಿದ್ದ ಕಾರ್ಯಕ್ರಮ ಒಂದರಲ್ಲಿ ಜನವೋ ಜನ.. ಮಾಸ್ಕೂ ಇಲ್ಲ. ಅಂತರವೂ ಇರಲಿಲ್ಲ. ಜನರಿಗೆ ಮಿತಿಯೂ ಇರಲಿಲ್ಲ. 

ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ನಾಟಿ ಮಾಡುವ ಕಾರ್ಯಕ್ರಮ ನಡೆದಿತ್ತು.‌ ಕಾರ್ಯಕ್ರಮದಲ್ಲಿ ಪಂಚಾಯತ್ ಸಿಇಓ ನವೀನ್ ಭಟ್, ಸೋದೆ ಮಠದ ಸ್ವಾಮಿಗಳು ಸಹಿತ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದರು. 

ಆದರೆ, ಸರ್ಕಾರದ ಕೊರೊನಾ ನಿಯಮ ಪಾಲಿಸಬೇಕಾದವರೇ ನಿಯಮ ಉಲ್ಲಂಘನೆ ಮಾಡಿದ್ದಾರೆ. ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದ ಸರಕಾರಿ ಕಾರ್ಯಕ್ರಮದಲ್ಲೇ ಹೀಗೆ ನಿಯಮ ಉಲ್ಲಂಘನೆ ಆದರೆ ಹೇಗೆ ಎನ್ನುವ ಪ್ರಶ್ನೆ ಉಂಟಾಗಿದೆ. ಯಾಕಂದ್ರೆ, ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಜನ ಸೇರಿದ್ದರು.‌ ಅಲ್ಲದೆ, ಅಂತರವನ್ನೇ ಕಾಯ್ದು ಕೊಂಡಿರಲಿಲ್ಲ. ಹಳ್ಳಿಯ ಕಾರ್ಯಕ್ರಮ ಆಗಿದ್ದರಿಂದ ಅಧಿಕಾರಿಗಳು ಕೂಡ ಹೆಚ್ಚು ಗೊಡವೆ ಕೊಟ್ಟಿರಲಿಲ್ಲವೋ ಏನೋ..

Video: Click

Udupi MLA Raghupathi Bhat violates covid rules gathers hundreds of people. The video of this has gone viral on social media.