ಹಾಸನದಲ್ಲಿ ಭೀಕರ ಅಪಘಾತ ; ಬೆಳ್ತಂಗಡಿ ಮೂಲದ ಅಣ್ಣ - ತಮ್ಮಂದಿರು ಸಾವು ! 

19-06-21 09:50 pm       Mangaluru Correspondent   ಕರಾವಳಿ

ಹಾಸನ ಜಿಲ್ಲೆಯ ಕೆಂಚಟ್ಟಹಳ್ಳಿ ಎಂಬಲ್ಲಿ ಬೆಳ್ತಂಗಡಿ ಮೂಲದ ಯುವಕರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಅಣ್ಣ ತಮ್ಮಂದಿರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಬೆಳ್ತಂಗಡಿ, ಜೂನ್ 19: ಹಾಸನ ಜಿಲ್ಲೆಯ ಕೆಂಚಟ್ಟಹಳ್ಳಿ ಎಂಬಲ್ಲಿ ಬೆಳ್ತಂಗಡಿ ಮೂಲದ ಯುವಕರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಅಣ್ಣ ತಮ್ಮಂದಿರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಜಯಪ್ರಕಾಶ್ (25) ಮತ್ತು ಯೋಗೀಶ್ (23)  ಸಾವನ್ನಪ್ಪಿದ ಸೋದರರು ಎನ್ನಲಾಗುತ್ತಿದೆ. 

ಯುವಕರು ಕ್ವಿಡ್ ಕಾರಿನಲ್ಲಿ ಬೆಂಗಳೂರಿನಿಂದ ಬರುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯ ಕೆಂಚಟ್ಟಹಳ್ಳಿ ಎಂಬಲ್ಲಿ ಮುಂದಿನಿಂದ ತೆರಳುತ್ತಿದ್ದ ಲಾರಿ ಹಂಪ್ಸ್ ನಿಯಂತ್ರಣಕ್ಕಾಗಿ ಬ್ರೇಕ್ ಹಾಕಿದ್ದು ಹಿಂದಿನಿಂದ ಬರುತ್ತಿದ್ದ ಕಾರು ವೇಗವಾಗಿ ಲಾರಿಗೆ ಡಿಕ್ಕಿಯಾಗಿದೆ.  ಲಾರಿಗೆ ಡಿಕ್ಕಿಯಾಗಿದ್ದರಿಂದ ಕಾರಿನಲ್ಲಿದ್ದ ಯುವಕರು ತೀವ್ರ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಮತ್ತೊಬ್ಬ ಯುವಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. 

ಸೋದರರು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಕ್ವಿಡ್ ಕಾರಿನಲ್ಲಿ ಬೆಂಗಳೂರಿನಿಂದ ಊರಿಗೆ ಬರುತ್ತಿದ್ದರು.

Tragic Car accident in Hassan Two brothers from Belthangady killed after their car rammed a truck which applied brakes suddenly. The Deceased is identified as Yogish and Jayaprakash.