ಉಪ್ಪಿನಂಗಡಿ ; ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಮಗು ಸಾವು 

20-06-21 04:28 pm       Mangaluru Correspondent   ಕರಾವಳಿ

ತಿಂಡಿಯೆಂದು ಇಲಿ ಪಾಷಾಣವನ್ನು ತಿಂದು ಎರಡೂವರೆ ವರ್ಷದ ಮಗು ದಾರುಣ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. 

ಉಪ್ಪಿನಂಗಡಿ, ಜೂನ್ 20: ತಿಂಡಿಯೆಂದು ಇಲಿ ಪಾಷಾಣವನ್ನು ತಿಂದು ಎರಡೂವರೆ ವರ್ಷದ ಮಗು ದಾರುಣ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. 

ಉಪ್ಪಿನಂಗಡಿ ಸಮೀಪದ ಬಜಂತೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ನಿವೃತ್ತ ಸೈನಿಕ ಸೈಜು ಹಾಗೂ ದೀಪ್ತಿ ದಂಪತಿಯ ಪುತ್ರಿ ಶ್ರೇಯಾ ಮೃತಪಟ್ಟ ಮಗು. 

ಮಗು ಮನೆಯೊಳಗೆ ಆಟವಾಡುತ್ತಿದ್ದಾಗ ಕೈಗೆ ಸಿಕ್ಕಿದ ಇಲಿಗಳನ್ನು ಕೊಲ್ಲಲು ಬಳಸುವ ವಿಷದ ವಸ್ತುವನ್ನು ತಿಂದಿದೆ ಎನ್ನಲಾಗುತ್ತಿದ್ದು ತೀವ್ರ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ಒಯ್ದಿದ್ದಾರೆ.‌ ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a tragic incident, a Two-year-old baby scummed to death after eating rat poison. The incident was reported at Uppinangady in Mangalore.