ಕಂಡಲ್ಲಿ ಕಸ ಎಸೆದು ಸ್ಥಳೀಯರಿಗೆ ಧಮ್ಕಿ ; ತಪ್ಪಿಗೆ ದಂಡ ಕಟ್ಟಿದ್ದಲ್ಲದೆ ಕಸವನ್ನೂ ಹೆಕ್ಕಿದ !

15-07-21 10:59 am       Mangalore Correspondent   ಕರಾವಳಿ

ತ್ಯಾಜ್ಯವನ್ನ ಸಾರ್ವಜನಿಕ ಸ್ಥಳದಲ್ಲಿ ಸುರಿಯುತ್ತಿದ್ದ ವ್ಯಕ್ತಿಯನ್ನು ಪತ್ತೆ ಮಾಡಿದ ಉಳ್ಳಾಲ ಪೊಲೀಸರು ಸ್ಕೂಟರನ್ನು ವಶಪಡಿಸಿ ದಂಡ ವಿಧಿಸಿದ್ದಲ್ಲದೆ, ಆತನಿಂದಲೇ ಕಸವನ್ನು ಹೆಕ್ಕಿಸಿದ ಘಟನೆ ಕಿನ್ಯ ಗ್ರಾಮದಲ್ಲಿ ನಡೆದಿದೆ. 

ಉಳ್ಳಾಲ, ಜು.15: ಸ್ಕೂಟರಿನಲ್ಲಿ ತಂದಿದ್ದ ತ್ಯಾಜ್ಯವನ್ನ ಸಾರ್ವಜನಿಕ ಸ್ಥಳದಲ್ಲಿ ಸುರಿಯುತ್ತಿದ್ದ ವ್ಯಕ್ತಿಯ ಫೋಟೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವ್ಯಕ್ತಿಯನ್ನು ಪತ್ತೆ ಮಾಡಿದ ಉಳ್ಳಾಲ ಪೊಲೀಸರು ಸ್ಕೂಟರನ್ನು ವಶಪಡಿಸಿ ದಂಡ ವಿಧಿಸಿದ್ದಲ್ಲದೆ, ಆತನಿಂದಲೇ ಕಸವನ್ನು ಹೆಕ್ಕಿಸಿದ ಘಟನೆ ಕಿನ್ಯ ಗ್ರಾಮದಲ್ಲಿ ನಡೆದಿದೆ. 

ಉಳ್ಳಾಲ ನಿವಾಸಿ ಬದ್ರುದ್ದೀನ್ ಇರ್ಫಾನ್ ಎಂಬಾತನೇ ತನ್ನ ತಪ್ಪಿಗೆ ಶಾಸ್ತಿ ಮಾಡಿಕೊಂಡ ವ್ಯಕ್ತಿ. ಇರ್ಫಾನ್ ಮಂಜನಾಡಿಯ ಕಲ್ಕಟ್ಟ ಎಂಬಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದು, KA19 HA1879 ನೋಂದಣಿಯ ಸ್ಕೂಟರಲ್ಲಿ‌ ಕಳೆದ ಭಾನುವಾರ ಬೆಳಗ್ಗೆ ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೇಶ ತಿರುವು ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗೋಣಿ ಚೀಲದಲ್ಲಿ ಕಸವನ್ನು ತಂದು  ಎಸೆದಿದ್ದ. 

ಈತ ಈ ಮೊದಲೂ ಇದೇ ರೀತಿ ಪರಿಸರದಲ್ಲಿ ತ್ಯಾಜ್ಯ ಎಸೆಯುವುದನ್ನ ಸ್ಥಳೀಯರು ಗಮನಿಸಿದ್ದರು. ಈ ಬಾರಿ ಕಸ ಎಸೆಯುವುದನ್ನ ಮೊಬೈಲಲ್ಲಿ ಚಿತ್ರೀಕರಿಸಿದ ಸ್ಥಳೀಯರಿಗೆ ಇರ್ಫಾನ್ ಬೆದರಿಕೆಯನ್ನೂ ನೀಡಿದ್ದನಂತೆ. ಸ್ಥಳೀಯರು ಈ ಬಗ್ಗೆ ಕಿನ್ಯಾ ಗ್ರಾ.ಪಂ. ಪಿಡಿಓಗೆ ದೂರು ನೀಡಿದ್ದಾರೆ. 

ಪಂಚಾಯತ್ ಪಿಡಿಓ ಉಳ್ಳಾಲ ಠಾಣೆಗೆ ದೂರನ್ನು ನೀಡಿದ್ದು ಪೊಲೀಸರು ಆರೋಪಿ ಇರ್ಪಾನ್ ನ ಸ್ಕೂಟರ್ ಜಪ್ತಿಗೊಳಿಸಿ ಪ್ರಕರಣ ದಾಖಲಿಸಿದ್ದು ದಂಡವನ್ನೂ ಹಾಕಿದ್ದಾರೆ. ಅಲ್ಲದೆ, ಸ್ಥಳೀಯ ಸಾರ್ವಜನಿಕರು ಆರೋಪಿ ಇರ್ಫಾನಲ್ಲಿ ಸಂಕೇಶ ಪರಿಸರದಲ್ಲಿ ಸುರಿದಿದ್ದ ಕಸವನ್ನು ಹೆಕ್ಕಿ ಸ್ವಚ್ಚಗೊಳಿಸಿದ್ದಾರೆ.

Some villagers complained to the gram panchayat against a person who had disposed of waste by the roadside. Based on the complaint, the gram panchayat officials not only registered a case against the person concerned, but also made him to pick up the waste he had thrown. This incident happened within the limits of Kinya gram panchayat at Ullal in Mangalore.