ಬ್ರೇಕಿಂಗ್ ನ್ಯೂಸ್
18-07-21 11:25 am Mangaluru Correspondent ಕರಾವಳಿ
ಮಂಗಳೂರು, ಜುಲೈ 18: ಕುಲಶೇಖರ ಬಳಿ ರೈಲ್ವೆ ಹಳಿಗೆ ಕುಸಿದು ಬಿದ್ದ ಮಣ್ಣನ್ನು ಎರಡು ದಿನಗಳ ಕಾರ್ಯಾಚರಣೆ ಬಳಿಕ ತೆರವು ಮಾಡಲಾಗಿದೆ. ಹಳಿಗೆ ಬಿದ್ದಿರುವ ಬಂಡೆ ಕಲ್ಲು, ತಡೆಗೋಡೆಯ ಕಾಂಕ್ರೀಟ್ ಸಾಮಗ್ರಿ, ಮಣ್ಣನ್ನು ತೆರವು ಮಾಡಲಾಗಿದ್ದು ಭಾನುವಾರ ಬೆಳಗ್ಗೆ ರೈಲು ಸಂಚಾರ ಪುನಾರಂಭಗೊಂಡಿದೆ.
ಮಂಗಳೂರಿನಿಂದ ಕಾರವಾರ, ಮುಂಬೈ ಕಡೆಗೆ ತೆರಳುವ ಪ್ರಮುಖ ಹಳಿಯಾಗಿದ್ದರಿಂದ ಹಲವು ರೈಲುಗಳ ಸಂಚಾರಕ್ಕೆ ತೊಡಕಾಗಿತ್ತು. ಎರಡು ದಿನಗಳಿಂದ ಕಾರವಾರ ರೈಲು ಮಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ಅಲ್ಲದೆ, ಮುಂಬೈನಿಂದ ಮಂಗಳೂರು- ಕೇರಳಕ್ಕೆ ಸಾಗುವ ರೈಲುಗಳ ಸಂಚಾರಕ್ಕೂ ತೊಡಕಾಗಿತ್ತು. ಹೀಗಾಗಿ ಮಳೆಯ ನಡುವೆಯೇ ಭರದ ಕಾಮಗಾರಿ ನಡೆಸಲಾಗಿದ್ದು ಇಂದು ಬೆಳಗ್ಗೆ ಕೆಲಸ ಪೂರ್ಣಗೊಂಡಿದೆ. ಅದರಂತೆ ಇಂದು ಬೆಳಗ್ಗೆ 8.45ರ ಹೊತ್ತಿಗೆ ಮೊದಲ ರೈಲು ಸಾಗಿದ್ದು ಎರ್ನಾಕುಲಂ - ಅಜ್ಮೀರ್ ರೈಲು ಹಳಿಯಿಂದ ಸಂಚರಿಸಿದೆ. ಮಣ್ಣು ಕುಸಿತಗೊಂಡ ಕುಲಶೇಖರ ಪ್ರದೇಶದಲ್ಲಿ ರೈಲು ತೆರಳುವ ವೇಳೆ ರೈಲ್ವೆ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಉಪಸ್ಥಿತರಿದ್ದು, ವೀಕ್ಷಣೆ ಮಾಡಿದರು.
ರೈಲು ಸಂಚಾರವನ್ನು ಭಾನುವಾರದಿಂದ ಆರಂಭಿಸಲೇಬೇಕು ಎನ್ನುವ ಉದ್ದೇಶದಿಂದ ಕಾರ್ಯಾಚರಣೆ ಶನಿವಾರ ತಡರಾತ್ರಿಯ ವರೆಗೂ ನಡೆದಿತ್ತು. ತಡೆಗೋಡೆ ಕುಸಿತ ಪ್ರದೇಶದಿಂದ ಮಣ್ಣು, ಬೃಹತ್ ಗಾತ್ರದ ಕಲ್ಲುಗಳನ್ನು ಹಿಟಾಚಿ ಬಳಸಿ ತೆಗೆಯಲಾಯಿತು. ರೈಲ್ವೆ ಹಳಿಗೆ ವಾಲಿದ ತಡೆಗೋಡೆಯನ್ನು ಯಂತ್ರ ಬಳಸಿ ಕಟ್ಟಿಂಗ್ ಮಾಡಲಾಗಿದೆ. ಮೇಲ್ಬಾಗದಲ್ಲಿರುವ ಮಣ್ಣು, ಕಲ್ಲುಗಳು ಮತ್ತೆ ಕುಸಿತವಾಗದಂತೆ ತೆರವು ಮಾಡಲಾಗಿದೆ.
ಎರಡು ದಿನಗಳ ಹಿಂದೆ, ಕುಲಶೇಖರ ಬಳಿಯ ಸುರಂಗದಿಂದ ಸ್ವಲ್ಪ ದೂರಕ್ಕೆ ಭಾರೀ ಮಳೆಗೆ ಗುಡ್ಡ ಕುಸಿದು ಹಳಿಗೆ ಬಿದ್ದಿತ್ತು. ಇದರಿಂದಾಗಿ ಮಂಗಳೂರಿನಿಂದ ಕೊಂಕಣ ರೈಲ್ವೇ ಹಾದಿಯಲ್ಲಿ ಸಂಚಾರ ಸ್ಥಗಿತ ಮಾಡಲಾಗಿತ್ತು.
Read: ಕೊಂಕಣ ರೈಲ್ವೇಯ ತೋಕೂರು ಬಳಿ ರೈಲು ಹಳಿಗೆ ಗುಡ್ಡ ಕುಸಿತ ; 9 ರೈಲುಗಳ ಸಂಚಾರಕ್ಕೆ ತೊಡಕು
The work on removal of mud and debris, that had fallen on the railway track between Padil and Kulshekhar due to the landslide and collapse of retainer wall, was almost completed on Saturday, July 17. The trains are likely to resume on this stretch after track inspection and electric line restoration on Sunday, July 18.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm