ದಕ್ಷಿಣ ಕನ್ನಡದಲ್ಲಿ ನಿಲ್ಲದ ಕೊರೋನಾ ಆರ್ಭಟ; ಇಂದು ಮತ್ತೆ 316 ಮಂದಿಗೆ ಸೋಂಕು, 3 ಸಾವು

03-09-20 08:34 pm       Dhruthi Anchan - Correspondent   ಕರಾವಳಿ

ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಕೊರೋನಾ ಪ್ರಕರಣ 316 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟರೆ, ಸಾವಿನ ಸಂಖ್ಯೆ 384ಕ್ಕೆ ಏರಿಕೆ

ಮಂಗಳೂರು, ಸೆಪ್ಟೆಂಬರ್.3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತೂ ಕೂಡ ಕೊರೋನಾ ಮಹಾಸ್ಪೋಟಗೊಂಡಿದೆ. ಇಂದು ಬರೋಬ್ಬರಿ 316 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು 3 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 384ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 208 ಮಂದಿ ಗುಣಮುಖರಾಗಿದ್ದಾರೆ.

ಮಂಗಳೂರಿನಲ್ಲಿ 190, ಬಂಟ್ವಾಳದಲ್ಲಿ 40, ಪುತ್ತೂರಿನಲ್ಲಿ 21, ಸುಳ್ಯದಲ್ಲಿ 16, ಬೆಳ್ತಂಗಡಿಯಲ್ಲಿ 16 , ಹಾಗೂ ಹೊರ ಜಿಲ್ಲೆಯ 33 ಮಂದಿಗೆ ಕೋರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇನ್ನೂ ಆತಂಕಕಾರಿ ವಿಚಾರವೇನೆಂದರೆ ಸೋಂಕಿನ ಮೂಲವೆ ಪತ್ತೆಯಾಗದವರ ಸಂಖ್ಯೆ 120ಕ್ಕೆ ಏರಿಕೆಯಾಗಿದೆ. 

ಇಂದು ಪತ್ತೆಯಾದ ಸೋಂಕಿತರ ಪೈಕಿ 54  ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟರೆ, ಜ್ವರದ ಲಕ್ಷಣವಿರುವ 142 ಮಂದಿಗೆ ಕೊರೊನ ಪತ್ತೆಯಾಗಿದೆ.