ಮಂಗಳೂರು: ಮಳೆಗೆ ಮನೆಗಳು ಕೊಚ್ಚಿ ಹೋಗ್ತಿದ್ದರೆ ಮುಖ್ಯಮಂತ್ರಿ ಕಸರತ್ತಿನಲ್ಲಿದ್ದಾರೆ, ಯಾರು ಬಂದ್ರೂ ಭ್ರಷ್ಟರು !! ತಾಕತ್ತಿದ್ದರೆ ದಲಿತ ಸಿಎಂ ಮಾಡಿ !

23-07-21 12:27 pm       Mangalore Correspondent   ಕರಾವಳಿ

ಮುಂದೆ ಯಾರು ಮುಖ್ಯಮಂತ್ರಿ ಆಗ್ತಾರೋ ಗೊತ್ತಿಲ್ಲ. ಯಾರೇ ಬಂದ್ರೂ ಬಿ.ಜೆ.ಪಿ ಒಂದು ಕರಪ್ಟ್ ಪಾರ್ಟಿ.‌ ಮುಂದೆ ಮುಖ್ಯಮಂತ್ರಿ ಆಗಿ ಬರೋನು ಸಹ ಕರಪ್ಟ್ ಆಗಿಯೇ ಇರ್ತಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರಕಾರದ ಬಗ್ಗೆ ಜರೆದಿದ್ದಾರೆ.‌ 

ಮಂಗಳೂರು, ಜುಲೈ 23: ಉತ್ತರ ಕರ್ನಾಟಕದಲ್ಲಿ ಈಗ ಮಳೆಯಾಗಿ ಮನೆಗಳು ಬಿದ್ದು ಹೋಗಿ, ಪ್ರಾಣಿಗಳು ಕೊಚ್ಚಿ ಹೋಗುತ್ತಿದ್ದರೆ ಇವರು ಮುಖ್ಯಮಂತ್ರಿ ಬದಲಾವಣೆಯ ಕಸರತ್ತು ಮಾಡುತ್ತಿದ್ದಾರೆ. ಮುಂದೆ ಯಾರು ಮುಖ್ಯಮಂತ್ರಿ ಆಗ್ತಾರೋ ಗೊತ್ತಿಲ್ಲ. ಯಾರೇ ಬಂದ್ರೂ ಬಿ.ಜೆ.ಪಿ ಒಂದು ಕರಪ್ಟ್ ಪಾರ್ಟಿ.‌ ಮುಂದೆ ಮುಖ್ಯಮಂತ್ರಿ ಆಗಿ ಬರೋನು ಸಹ ಕರಪ್ಟ್ ಆಗಿಯೇ ಇರ್ತಾನೆ. ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರಕಾರದ ಬಗ್ಗೆ ಜರೆದಿದ್ದಾರೆ.‌ 

ಮಂಗಳೂರಿನಲ್ಲಿ ಸುದ್ದಿ ಮಾಧ್ಯಮಕ್ಕೆ ಮಾತನಾಡಿದ ಅವರು, ಈ ಪಾರ್ಟಿ ಅಧಿಕಾರದಿಂದ ಎಷ್ಟು ಬೇಗ ತೊಲಗುತ್ತೆ ಅಷ್ಟು ಬೇಗ ರಾಜ್ಯಕ್ಕೆ ಒಳ್ಳೆದಾಗುತ್ತೆ. ಯಾರೇ ಮಠಾಧೀಶರಾಗಲಿ ರಾಜಕಾರಣಕ್ಕೆ ಕೈ ಹಾಕಬಾರದು. ಅವರ ಅಭಿಪ್ರಾಯ ಹೇಳೊದು ಬೇರೆ ವಿಚಾರ. ಆದ್ರೆ ಜನರ ಅಭಿಪ್ರಾಯ ಬಹಳ ಮುಖ್ಯ. ಅದರ ಮೇಲೆ ತಮ್ಮ ಮಾತನ್ನು ಹೇರಿಕೆ ಮಾಡುವುದು ಸರಿಯಲ್ಲ. ಅಲ್ಲದೆ, ಮಠಾಧೀಶರಾಗಿ ಒಂದು ಪಕ್ಷದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದೂ ಸರಿಯಲ್ಲ ಎಂದು ಹೇಳಿದರು. 

ಫೋನ್ ಕದ್ದಾಲಿಕೆಯಿಂದ ಸಮ್ಮಿಶ್ರ ಸರ್ಕಾರ ಪತನ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಫೋನ್ ಕದ್ದಾಲಿಕೆ ಇದೇ ಮೊದಲಲ್ಲ, ಬಿಜೆಪಿ ಈ ಹಿಂದೆಯೂ ಮೊದಲು ಮಾಡಿತ್ತು. 2019ರಲ್ಲಿ ನನ್ನ ಪಿಎ ವೆಂಕಟೇಶ್ ಫೋನ್ ಕದ್ದಾಲಿಕೆ ಮಾಡಿದ್ದಾರೆ.‌ ಕುಮಾರಸ್ವಾಮಿ, ಜಿ.ಪರಮೇಶ್ವರ್ ಸೇರಿ ಹಲವರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಕಿತ್ತು ಹಾಕಲು ಏನು ಬೇಕೋ ಅದೆಲ್ಲಾ ಅಕ್ರಮ ಮಾಡಿದ್ದಾರೆ. ನಾನು ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆಯಾಗಬೇಕೆಂದು ಆಗ್ರಹಿಸುತ್ತೇನೆ. ಇದೊಂದು ಪ್ರಜಾಪ್ರಭುತ್ವದ ಕೊಲೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್ ಗಳದ್ದೇ ಫೋನ್ ಕದ್ದಾಲಿಸೋದು ದೇಶದ್ರೋಹದ ಕೆಲಸ. ಇವರಿಗೆ ಸರ್ಕಾರ ಮಾಡೋಕೆ ಯೋಗ್ಯತೆ ಇಲ್ಲ, ನಾಲಾಯಕ್ ಗಳು ಎಂದು ವಾಗ್ದಾಳಿ ನಡೆಸಿದ್ದಾರೆ. 

ಪಕ್ಷ ಬಿಟ್ಟು ಹೋದವರ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಕ್ಷ ಬಿಟ್ಟವರನ್ನು ಯಾವ ಕಾರಣಕ್ಕೂ ವಾಪಸು ತೆಗೆದುಕೊಳ್ಳುವುದಿಲ್ಲ. ಇವತ್ತಿಗೂ ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ಎಲ್ಲಾ ಒಟ್ಟಾಗಿ ಹೋಗಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಭ್ರಷ್ಟ ಸರ್ಕಾರನ ಕಿತ್ತು ಬಿಸಾಕಿ ಪಕ್ಷ ಬಲ‌ಪಡಿಸಿ‌ ಎಂದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದ್ದಾರೆ. ಅದನ್ನು ನಾವು ಒಟ್ಟಾಗಿ ಸೇರಿ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. 

ಸಿಎಂ ಬದಲಾವಣೆ ಬಗ್ಗೆ ಕೇಳಿದ್ದಕ್ಕೆ, ಕೆಲವು ತಿಂಗಳ ಹಿಂದೆಯೇ ಮುಖ್ಯಮಂತ್ರಿ ಬದಲಾಗ್ತಾರೆ ಎಂದು ನಾನು ಹೇಳಿದ್ದೆ. ನಂಗೆ ಖಚಿತವಾದ ಮಾಹಿತಿಯಿತ್ತು. ಆದರೆ, ನಳಿನ್‌ ಕುಮಾರ್ ಕಟೀಲ್ ನನಗೊಂದು ಸವಾಲು ಹಾಕಿದ್ದರು. ಸಿದ್ದರಾಮಯ್ಯ ದಲಿತರನ್ನು‌ ಮುಖ್ಯಮಂತ್ರಿ ಘೋಷಣೆ ಮಾಡಲಿ ಎಂದು ಹೇಳಿದ್ದರು. ನಮ್ಮಲ್ಲಿ ನಾಲ್ಕು ಜನ ಮುಖ್ಯಮಂತ್ರಿ ಆಗಿದ್ದಾರೆ. ಈಗ ಬಿಜೆಪಿಯವರಿಗೆ ಅವಕಾಶ ಬಂದಿದೆ. ನಳಿನ್ ಕುಮಾರ್ ಕಟೀಲ್ ಈಗ ಕರ್ನಾಟಕದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ. ಈಗ ಹೇಗೂ ಸೀಟು ಖಾಲಿ ಇದ್ದು ದಲಿತರಿಗೆ ಅವಕಾಶ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಸವಾಲು ಹಾಕಿದ್ದಾರೆ.

Read: ಮಾಧ್ಯಮದಲ್ಲಿ ಬರುವಷ್ಟು ಆಸ್ಕರ್ ಆರೋಗ್ಯ ಹದಗೆಟ್ಟಿಲ್ಲ ; ಡಿಕೆ ಶಿವಕುಮಾರ್ 

Any BJP CM for Karnataka will be corrupt slams senior congress leader Siddaramaiah in Mangalore. Siddaramaiah came last night to Visit Former Union minister Oscar Fernandes who has been admitted to the hospital also spoke today about the recent development In BJP party.