ಬ್ರೇಕಿಂಗ್ ನ್ಯೂಸ್
24-07-21 10:59 am Mangalore Correspondent ಕರಾವಳಿ
ಉಳ್ಳಾಲ, ಜು.24:ಉಳ್ಳಾಲ ನಗರಸಭಾ ಕಚೇರಿಯಲ್ಲಿ ಪೌರ ಕಾರ್ಮಿಕರಾಗಿದ್ದರೂ ಅಧಿಕಾರಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ಪ ಅಟ್ಟೋಲೆಯವರು ಕ್ಯಾನ್ಸರ್ ಮಹಾಮಾರಿಯಿಂದ ಶುಕ್ರವಾರ ಸಾವನ್ನಪ್ಪಿದ್ದಾರೆ.
ಸುಮಾರು 17 ವರ್ಷಗಳಿಂದ ಉಳ್ಳಾಲ ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿದ್ದ ಶಿವಪ್ಪ ಅಟ್ಟೋಲೆ(51) ಅವರು ಕ್ಯಾನ್ಸರ್ ಮಹಾಮಾರಿಯಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದಲಿತ ಹೋರಾಟಗಾರರಾಗಿದ್ದ ಶಿವಪ್ಪ ಅವರು ಅಂಬೇಡ್ಕರ್ ವಾದವನ್ನ ಪ್ರತಿಪಾದಿಸಿದವರು. ಬಹುಜನ ಸಮಾಜ ಪರಿವರ್ತನಾ ವೇದಿಕೆಯ ಜಿಲ್ಲಾ ಉಸ್ತುವಾರಿಯಾಗಿದ್ದ ಅವರು ಎಲ್ಲರಿಗೂ ಅಂಗಾರ ಎಂದೇ ಪರಿಚಿತರು.



ಮೂಲತಃ ಪುತ್ತೂರು ತಾಲೂಕಿನ ಸವಣೂರು ಮೂಲದ ಶಿವಪ್ಪ ಅವರು ಕಳೆದ 17 ವರ್ಷದಿಂದ ಹಿಂದೆ ಉಳ್ಳಾಲ ಪಟ್ಟಣ ಪಂಚಾಯತ್ಗೆ ಪೌರ ಕಾರ್ಮಿಕರಾಗಿ ವರ್ಗಾವಣೆಯಾಗಿ ಬಂದಿದ್ದರು. ಪೌರ ಕಾರ್ಮಿಕರಾಗಿದ್ದ ಶಿವಪ್ಪ ಅವರಿಗೆ ಉಳ್ಳಾಲದ ಇಂದಿನ ನಗರಸಭೆ ಈ ಹಿಂದೆ ಪುರಸಭೆ ಆಗಿದ್ದಾಗಲೇ ಬಿಲ್ ಕಲೆಕ್ಟರ್ ಆಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಅಟ್ಟೋಲೆಯವರು ಖಡಕ್ ಅಧಿಕಾರಿಯಾಗಿ ವಸ್ತ್ರ ಧರಿಸಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಏರಿಸಿ ಬೈಕಲ್ಲಿ ಬಿಲ್ ಕಲೆಕ್ಷನ್ ಹೆ ಹೋದರೆ ಸ್ಥಳೀಯಾಡಳಿತಕ್ಕೆ ಬರೋ ಆದಾಯ ಪಕ್ಕಾ. ಅಂತಹ ವ್ಯಕ್ತಿತ್ವವನ್ನ ಹೊಂದಿದ್ದ ಅಟ್ಟೋಲೆಯವರು ಮೂಳೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಶಿವಪ್ಪ ಅವರ ಬೆನ್ನು ಮೂಲೆಗೆ ಏಟು ತಗಲಿತ್ತು. ಕರ್ತವ್ಯದ ಒತ್ತಡದಿಂದ ಅವರು ಸರಿಯಾದ ಚಿಕಿತ್ಸೆ ಪಡೆಯದ ಕಾರಣ ಕ್ಯಾನ್ಸರ್ ಉಲ್ಬಣಿಸಿ ಸಾವನ್ನಪ್ಪಿರುವುದಾಗಿ ಅವರ ಆಪ್ತ ವಲಯದವರು ತಿಳಿಸಿದ್ದಾರೆ.
ಶಿವಪ್ಪ ಅವರು ಮಂಗಳೂರಿನ ವಾಮಂಜೂರಲ್ಲಿ ವಾಸವಿದ್ದು ಪತ್ನಿ, ಎರಡು ಹೆಣ್ಮಕ್ಕಳನ್ನ ಅಗಲಿದ್ದಾರೆ. ಶಿವಪ್ಪ ಅವರ ಅಕಾಲಿಕ ಅಗಲಿಕೆಗೆ ಶಾಸಕರಾದ ಯು.ಟಿ.ಖಾದರ್, ನಗರಸಭೆ ಅಧ್ಯಕ್ಷರಾದ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷರಾದ ಆಯುಬ್ ಮಂಚಿಲ, ಪೌರಾಯುಕ್ತರಾದ ರಾಯಪ್ಪ, ಮಾಜಿ ನಗರ ಸದಸ್ಯ ಫಾರೂಕ್ ಉಳ್ಳಾಲ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಇಂದು ನಗರಸಭೆ ಆವರಣದಲ್ಲಿ ಅಟ್ಟೋಲೆಯವರ ಪಾರ್ಥಿವ ಶರೀರರಕ್ಕೆ ಅಂತಿಮ ನಮನ ಸಲ್ಲಿಸಲಾಗುವುದು. ಪಾರ್ಥಿವ ಶರೀರದ ಅಂತ್ಯಕ್ರಿಯೆ ಪುತ್ತೂರಿನಲ್ಲಿ ನಡೆಯಲಿದೆ.


ಪೌರಾಯುಕ್ತರನ್ನೇ ಮೀರಿಸಿ ಅಧಿಕಾರಿಯಾಗಿದ್ದರು !
ಈ ಹಿಂದೆ ಉಳ್ಳಾಲ ಪುರಸಭೆ ಆಗಿದ್ದಾಗ ಆಗಿನ ಪೌರಾಯುಕ್ತರು ತೊಕ್ಕೊಟ್ಟಿನ ಮಳಿಗೆಯೊಂದರಲ್ಲಿ ಶೂ ಖರೀದಿಸಲು ಹೋದಾಗ ಅಲ್ಲಿನ ಸಿಬ್ಬಂದಿ ಶೂ ಒಂದನ್ನು ತೋರಿಸಿ, ಸರ್ ನಿಮ್ಮ ಮೇಲಧಿಕಾರಿ ಶಿವಪ್ಪ ಅವರೇ ಈ ಶೂ ಅನ್ನು ಇಷ್ಟ ಪಟ್ಟು ಖರೀದಿಸಿದ್ದಾರೆ. ನೀವೂ ಇದನ್ನೆ ಖರೀದಿಸಿ ಎಂದಿದ್ದರಂತೆ. ಅಷ್ಟರ ಮಟ್ಟಿಗೆ ಶಿವಪ್ಪ ಅವರು ಉಳ್ಳಾಲ ನಗರದಾದ್ಯಂತ ಅಧಿಕಾರಿಯೆಂದೇ ಹೆಸರಾಗಿದ್ದರು.
ಮಲೇಷಿಯಾಕ್ಕು ತೆರಳಿ ಖ್ಯಾತಿ
ಶಿವಪ್ಪ ಅವರು ಬಹಳ ಕ್ರಿಯಾಶೀಲ ಪೃವೃತ್ತಿಯವರಾಗಿದ್ದು ಪರಿಸರ ಸ್ವಚ್ಚತಾ ಅಭಿಯಾನ ಅಧ್ಯಯನಕ್ಕಾಗಿ ರಾಜ್ಯದಿಂದ ಆಯ್ಕೆಯಾಗಿ ಮಲೇಷಿಯಾಕ್ಕೆ ಹೋಗಿದ್ದರು. ಇದರಿಂದ ಶಿವಪ್ಪ ಅವರು ಬಹಳ ಖ್ಯಾತಿಯನ್ನೂ ಗಳಿಸಿದ್ದರು.
Ullal town municipal civic worker Shivappa dies of Cancer. It is said Shivappa was had worked for 17 long years. He was hailing from Puttur.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm