ಬ್ರೇಕಿಂಗ್ ನ್ಯೂಸ್
13-08-21 08:59 pm Udupi Correspondent ಕರಾವಳಿ
ಉಡುಪಿ, ಆಗಸ್ಟ್ 13: "ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ" ಎನ್ನುವ ವಚನ ಒಂದಿದೆ. ಹೌದು.. ನೈಜ ನಾಗರ ಕಂಡರೆ ದೂರಕ್ಕೆ ಓಡುವವರೇ ಜಾಸ್ತಿ. ಹೀಗಾಗಿ ಕಲ್ಲಿನ ನಾಗನಿಗೆ ಮಾತ್ರ ಹಾಲೆರೆಯುವ ಪದ್ಧತಿ ಬಂದಿದೆ. ಹಾಗಂತಲೇ, ಹೆಡೆಯೆತ್ತುವ ಹಾವು ಕಂಡರೆ ಕೊಲ್ಲುವರು ಎಂದು ವಚನಕಾರರು ಹೇಳಿದ್ದರು. ಆದರೆ, ಈಗಿನ ಆಧುನಿಕ ಕಾಲದಲ್ಲಿ ಈ ವಚನ ಅಷ್ಟು ಒಗ್ಗಿಕೊಳ್ಳುವುದಿಲ್ಲವೋ ಏನೋ.. ಯಾಕಂದ್ರೆ ಇಲ್ಲೊಬ್ಬರು ನೈಜ ನಾಗನಿಗೇ ಹಾಲು, ಸೀಯಾಳ ಅಭಿಷೇಕ ಮಾಡಿ ಗಮನ ಸೆಳೆದಿದ್ದಾರೆ.
ನಾಗರ ಪಂಚಮಿಯ ದಿನ ನಾಗನ ಕಲ್ಲಿನ ಮೂರ್ತಿಗಳಿಗೆ ಹಾಲು ಎರೆಯುವುದು ಹಿಂದಿನಿಂದಲೂ ಬಂದ ಪದ್ಧತಿ. ಕರಾವಳಿಯಲ್ಲಂತೂ ನಾಗಬನ, ನಾಗನ ಕ್ಷೇತ್ರಗಳಿಗೆ ತೆರಳಿ, ಈ ದಿನ ಕಡ್ಡಾಯವಾಗಿ ಪೂಜೆ ಸಲ್ಲಿಸುತ್ತಾರೆ. ಈ ನಡುವೆ ಉಡುಪಿಯಲ್ಲಿ ಒಂದು ವಿಚಿತ್ರ ವಿದ್ಯಮಾನ ಸಂಭವಿಸಿದೆ. ಕೇವಲ ಕಲ್ಲನಾಗರನಿಗೆ ಮಾತ್ರವಲ್ಲದೆ ನಿಜವಾದ ನಾಗನಿಗೂ ಪೂಜೆ ಸಲ್ಲಿಕೆಯಾಗಿದೆ.



ಕಾಪು ತಾಲೂಕಿನ ಮಂಜೂರು ಎಂಬಲ್ಲಿ ವಿಶೇಷ ಪೂಜೆ ನಡೆದಿದೆ. ಇಲ್ಲಿನ ಪುರೋಹಿತ ವೃತ್ತಿ ನಡೆಸುವ ಗೋವರ್ಧನ ಭಟ್ ಗೋವಿನ ರೀತಿಯಲ್ಲೆ ನಾಗನ ಪ್ರೀತಿಯಿಂದ ನೋಡಿಕೊಂಡು ಬಂದವರು. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡುವ ವಿಶೇಷ ಹವ್ಯಾಸ ಹೊಂದಿದ್ದಾರೆ. ಈ ಪರಿಸರದಲ್ಲಿ ಎಲ್ಲೇ ಗಾಯಾಳು ನಾಗರ ಹಾವು ಕಂಡುಬಂದರೆ, ಗೋವರ್ಧನ ಭಟ್ಟರಿಗೆ ತಿಳಿಸುತ್ತಾರೆ. ಹಾಗಾಗಿ ಇವರ ಮನೆಯಲ್ಲಿ ಯಾವತ್ತೂ ಗುಣಮುಖವಾದ ಹಾವುಗಳು ಇದ್ದೇ ಇರುತ್ತವೆ.
ಈ ಬಾರಿ ನಾಗರಪಂಚಮಿಯ ದಿನ, ತಾವು ಮನೆಯಲ್ಲೇ ಆರೈಕೆ ಮಾಡಿದ ನಾಗರ ಹಾವುಗಳಿಗೆ ಆರತಿ ಬೆಳಗಿ, ಸೀಯಾಳ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ. ಹೀಗೆ ನೈಜ ನಾಗರನಿಗೆ ಪೂಜೆ ಮಾಡುವ ವಿಡಿಯೋ ವೈರಲ್ ಆಗಿದ್ದು ಜನರು ಅಚ್ಚರಿಗೆ ಒಳಗಾಗಿದ್ದಾರೆ. ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನವನ್ನು ಇನ್ನು ಬದಲಿಸಬೇಕು. ಹಾವು ಕಂಡರೆ ಓಡಬೇಕಿಲ್ಲ. ಅವುಗಳಿಗೂ ನೋವು ನಲಿವು ಇದೆ ಎಂಬುದನ್ನು ಕಂಡುಕೊಳ್ಳಬೇಕಿದೆ.
Real Nagara Snake worshipped at Home by Priests in Udupi for Nagara Panchami 2021.
02-04-26 09:31 pm
HK News Staffer
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
ತಮಿಳುನಾಡು ಚುನಾವಣೆಗೆ 44 ಮೀಸಲು ಕ್ಷೇತ್ರದಿಂದ ಕ್ರಿ...
02-04-26 08:03 pm
ಸಂಸದ ರಾಘವ್ ಚಡ್ಡಾಗೆ ಆಪ್ ಶಾಕ್; ರಾಜ್ಯಸಭೆ ಉಪ ನಾಯಕ...
02-04-26 07:44 pm
ಆಟವಾಡುತ್ತಿದ್ದ ಮಗು ನೀರಿನ ಬಕೆಟ್ಗೆ ಬಿದ್ದು ಸಾವು;...
02-04-26 03:56 pm
02-04-26 10:24 pm
HK News Staffer
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
02-04-26 02:43 pm
HK News Staffer
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm