ಬ್ರೇಕಿಂಗ್ ನ್ಯೂಸ್
24-08-21 03:02 pm Mangaluru Correspondent ಕರಾವಳಿ
ಉಳ್ಳಾಲ, 24: ಉಳ್ಳಾಲ ಉಳಿಯದ ಮೆಲ್ವಿನ್ ಮೊಂತೇರೊ (45) ಅಫ್ಘಾನಿಸ್ತಾನದ ನರಕದಿಂದ ಕಳೆದ ವಾರ ಪಾರಾಗಿ ಬಂದಿದ್ದರು. ಉದ್ಯೋಗಕ್ಕಾಗಿ ತೆರಳಿ ಸಿಕ್ಕಿಬಿದ್ದಿದ್ದ ಮೆಲ್ವಿನ್ ಸಹೋದರ ಡೆಮ್ಸಿ ಮೊಂತೆರೊ ಕೂಡ ಇಂದು ಅಪ್ಘನ್ ರಾಷ್ಟ್ರದಿಂದ ತಾಯ್ನಾಡಿಗೆ ವಾಪಸಾಗಿದ್ದಾರೆ.
ಕಳೆದ ಐದು ವರ್ಷಗಳಿಂದ ಕಾಬೂಲಿನ ಮಿಲಿಟರಿ ಬೇಸ್ ನಲ್ಲಿ ಇಕೊಲೊಗ್ ಇಂಟರ್ನ್ಯಾಷನಲ್ ಕಂಪನಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೆಮ್ಸಿ ಮೊಂತೆರೊ(29) ಇಂದು ಉಳ್ಳಾಲದ ಉಳಿಯದಲ್ಲಿರುವ ತನ್ನ ಮನೆಗೆ ಮರಳಿದ್ದಾರೆ.
ಕಳೆದ ಆ.17ರಂದು ಭಾರತೀಯ ವಾಯುಪಡೆ ಮೆಲ್ವಿನ್ ಮೊಂತೇರೊ ಅವರನ್ನ ಸುರಕ್ಷಿತವಾಗಿ ಭಾರತಕ್ಕೆ ಏರ್ ಲಿಫ್ಟ್ ಮಾಡಿತ್ತು. ಮೆಲ್ವಿನ್ ತಮ್ಮ ಡೆಮ್ಸಿಯನ್ನ ಮರುದಿವಸ ಆ.18 ರಂದು ನ್ಯಾಟೊ ಪಡೆಯು ಕಾಬೂಲಿನಿಂದ ಏರ್ ಲಿಪ್ಟ್ ಮಾಡಿತ್ತು. ಅಂದು ರಾತ್ರಿ ಇಡೀ ಕಾಬೂಲ್ ಏರ್ಪೋರ್ಟಲ್ಲಿ ಡೆಮ್ಸಿ ಸೇರಿ 155 ಮಂದಿ ಭಾರತೀಯರು ವಿಮಾನದೊಳಗೆ ಕಳೆದಿದ್ದರು.19 ರಂದು ಬೆಳಗ್ಗೆ ಡೆಮ್ಸಿ ಸೇರಿ ಒಟ್ಟು 155 ಮಂದಿಯನ್ನ ಕಾಬೂಲಿನಿಂದ ಕತಾರಿಗೆ ಏರ್ ಲಿಪ್ಟ್ ಮಾಡಲಾಗಿತ್ತು.
ಕತಾರ್ ಏರ್ಪೋರ್ಟಲ್ಲಿ ಡೆಮ್ಸಿ ನಾಲ್ಕು ದಿನ ಕಳೆದಿದ್ದು ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಅಲ್ಲಿದ್ದ ಭಾರತೀಯರನ್ನು ಶನಿವಾರ ರಾತ್ರಿ ವಾಯುಪಡೆ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿತ್ತು. ಆನಂತರ ಮುಂಬೈಗೆ ತಲುಪಿದ್ದು ಇಂದು ಮಧ್ಯಾಹ್ನ ಮಂಗಳೂರಿಗೆ ತಲುಪಿದ್ದಾರೆ.
ಉಳ್ಳಾಲ ಉಳಿಯದ ವಲೇರಿಯನ್ ಮೊಂತೇರೊ- ಸಿಸಿಲಿಯಾ ಮೊಂತೇರೊ ದಂಪತಿಯ ಎಂಟು ಮಕ್ಕಳಲ್ಲಿ ಮೆಲ್ವಿನ್ ಹಿರಿಯ ಮಗನಾದರೆ, ಡೆಮ್ಸಿ ಮೊಂತೇರೊ ಎಲ್ಲರಿಗೂ ಕಿರಿಯನಾಗಿದ್ದಾರೆ. ಮೆಲ್ವಿನ್ ಅವರು ಕಾಬೂಲಿನ ಮಿಲಿಟರಿ ಬೇಸಲ್ಲಿ ಇಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದರು. ಕಳೆದ ವಾರವಷ್ಟೆ ಅವರು ಸೇಫಾಗಿ ತಾಯ್ನಾಡಿಗೆ ಮರಳಿದ್ದು ಇಂದು ಅವರ ಸೋದರ ಡೆಮ್ಸಿ ಕೂಡ ಮನೆ ಸೇರಿದ್ದು ಉಳಿಯದ ಮೊಂತೆರೊ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಮಾಜಿ ಸಚಿವ, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರು ಉಳ್ಳಾಲ, ಉಳಿಯದ ಮೊಂತೇರೊ ಸಹೋದರರ ಮನೆಗೆ ತೆರಳಿ ಕ್ಷೇಮ ವಿಚಾರಿಸಿದ್ದಾರೆ. ಮೆಲ್ವಿನ್ ಮತ್ತು ಡೆಮ್ಸಿ ಸೋದರರು ಅಫ್ಘನ್ನಲ್ಲಿ ಅತಂತ್ರರಾಗಿ ಮರಳಿದ್ದರು. ಮೆಲ್ವಿನ್ ಕಳೆದ ವಾರ ಮರಳಿದ್ದರೆ, ಡೆಮ್ಸಿ ಇಂದು ಮನೆಗೆ ಬಂದಿದ್ದಾರೆ.
Stranded Dempsey Monterio stranded in Afghan Kabul reaches Mangaluru shares experience. Last night five from Kabul reached Mangaluru aiprort. Dempsey hails from Ullal. Dempsey has been working since five years at the Kabul Air base of Nato.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm