ಬ್ರೇಕಿಂಗ್ ನ್ಯೂಸ್
28-08-21 11:15 am Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 28: ಈಗಿನ ಕೆಲವು ಯುವಕ- ಯುವತಿಯರಿಗೆ ಟಿಕ್ ಟಾಕ್ ವಿಡಿಯೋ ಮಾಡುವುದು ಟ್ರೆಂಡ್ ಆಗಿದೆ. ಆದರೆ, ಎಲ್ಲಿ ಯಾವುದನ್ನು ಮಾಡಬೇಕು ಎಂಬ ಅರಿವು ಇಲ್ಲದೆಯೋ, ಏನಾಗುತ್ತೆ ಎಂಬ ದಾರ್ಷ್ಟ್ಯವೋ ಸಿಕ್ಕಸಿಕ್ಕಲ್ಲಿ ಟಿಕ್ ಟಾಕ್ ಮಾಡಿ ಸಿಕ್ಕಿಬೀಳುತ್ತಾರೆ. ಹಳೆಯಂಗಡಿ ಪ್ರಸಿದ್ಧ ಪಾವಂಜೆ ದೇವಸ್ಥಾನದಲ್ಲಿ ಇಬ್ಬರು ಹುಡುಗಿಯರ ಜೊತೆ ಯುವಕನೊಬ್ಬ ಟಿಕ್ ಟಾಕ್ ವಿಡಿಯೋ ಮಾಡಿದ್ದು ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮೂಲ್ಕಿ ನಿವಾಸಿ ಪ್ರತೀಕ್ ಶೆಟ್ಟಿ ಎಂಬಾತ ತನ್ನೊಂದಿಗೆ ಇಬ್ಬರು ಹುಡುಗಿಯರ ಜೊತೆ ವಿಡಿಯೋ ಮಾಡಿದ್ದಾನೆ. ದೇವಸ್ಥಾನದ ಒಳಗಿನ ಅಂಗಣದಲ್ಲಿ ವಿಡಿಯೋ ಮಾಡಿರುವಂತಿದೆ. ನಾಲ್ಕು ಮಾದರಿಯ ಬೇರೆ ಬೇರೆ ವಿಡಿಯೋಗಳು ವೈರಲ್ ಆಗಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾವಂಜೆ ಮಹಾಲಿಂಗೇಶ್ವರ ಗಣಪತಿ ದೇವಸ್ಥಾನದಲ್ಲಿ ಈ ರೀತಿ ವಿಡಿಯೋ ಮಾಡಲಾಗಿದೆ ಎನ್ನಲಾಗುತ್ತಿದ್ದು ಸ್ಥಳೀಯ ಭಕ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯೊಬ್ಬ ಯುವಕನಿಗೆ ಫೋನ್ ಮಾಡಿ, ಇನ್ಮುಂದೆ ದೇವಸ್ಥಾನಕ್ಕೆ ಕಾಲಿಟ್ಟಲ್ಲಿ ನಿನ್ನ ಕೈಕಾಲು ಮುರಿಯುತ್ತೇವೆ ಎಂದು ಧಮಕಿ ಹಾಕಿದ್ದಾನೆ. ನಾವು ಕೈಮುಗಿಯುವ ಜಾಗದಲ್ಲಿ ನೀನು ಈ ರೀತಿ ವಿಡಿಯೋ ಮಾಡಿದ್ದೀಯಲ್ಲಾ. ನಿನಗೆ ಯಾರು ಅವಕಾಶ ಕೊಟ್ಟಿದ್ದು ಎಂದು ಕೇಳಿದ್ದಾರೆ. ಅಲ್ಲಿನ ಅರ್ಚಕ ಭಟ್ರಿಗೆ ಹೇಳಿ, ಮಾಡಿದ್ದೇವೆ ಎಂದಿದ್ದಾನೆ. ಯಾರು ಆತ ಭಟ್ಟ, ನಿನಗೆ ಈ ರೀತಿ ವಿಡಿಯೋ ಮಾಡಲು ಹೇಳಿದ್ದು. ಬಾ, ದೇವಸ್ಥಾನಕ್ಕೆ ಬಂದು ಹೇಳು.. ನಾನು ವಿಡಿಯೋ ಡಿಲೀಟ್ ಮಾಡಿದ್ದೇನೆ ಎಂದು ಹುಡುಗ ಹೇಳಿದ್ದಕ್ಕೆ, ಅದು ಎಲ್ಲಾ ಗ್ರೂಪುಗಳಲ್ಲಿ ಬರ್ತಿದೆ. ನೀನು ಡಿಲೀಟ್ ಮಾಡೋದೇನು.. ನಿನ್ನ ಕೈಕಾಲು ತೆಗೀತೇನೆ ಎಂದು ಧಮ್ಕಿ ಹಾಕುವ ಆಡಿಯೋ ಕೂಡ ವೈರಲ್ ಆಗಿದ್ದು ಯುವಕನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿಬಂದಿದೆ.
ಇದೇ ವೇಳೆ, ದೇವಸ್ಥಾನದ ವತಿಯಿಂದ ತಪ್ಪಿತಸ್ಥ ಯುವಕ ಮತ್ತು ಹುಡುಗಿಯರು ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹುಡುಗ- ಹುಡುಗಿಯರ ಹುಚ್ಚಾಟಕ್ಕೆ ದೇವಸ್ಥಾನದ ಮರ್ಯಾದೆ ಹರಾಜು ಆಗುವಂತಾಗಿದೆ.
Video:
Mangalore Tiktok vidoe inside Pavanje temple haleangadi goes viral. Boy from Mulki and girls were seen acting inappropriately shooting their videos for Tiktok.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm