ಬ್ರೇಕಿಂಗ್ ನ್ಯೂಸ್
30-08-21 05:43 pm Mangaluru Correspondent ಕರಾವಳಿ
ಉಳ್ಳಾಲ, ಆ.30: ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದಾಗ ಸಮುದ್ರಕ್ಕೆ ಬಿದ್ದು ಸಾವಿನ ದವಡೆಗೆ ಸಿಲುಕಿದ್ದ ನವಾಝ್ ಬೆಂಗ್ರೆಯನ್ನ ರಕ್ಷಿಸಿದ್ದ ಉಳ್ಳಾಲ ಹೊಯ್ಗೆಯ ಮೀನುಗಾರರ ತಂಡವನ್ನ ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯು ಗೌರವಿಸಿ ಸನ್ಮಾನಿಸಿದೆ.
ನಿನ್ನೆ ನಡೆದ ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಉಳ್ಳಾಲ ಹೊಯ್ಗೆಯ ಐವರು ಜೀವ ರಕ್ಷಕ ಮೀನುಗಾರರನ್ನ ಸನ್ಮಾನಿಸಲಾಯಿತು.
ಉಳ್ಳಾಲದ ಅಳಿವೆ ಬಾಗಿಲಿನ ಸಮುದ್ರದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡಿ ಹಿಂತಿರುಗುವಾಗ ಅಲೆಗಳ ಆರ್ಭಟಕ್ಕೆ ಸಮುದ್ರಕ್ಕೆಸೆಯಲ್ಪಟ್ಟ ನವಾಝ್ ಬೆಂಗ್ರೆಯನ್ನು ಸಾವಿನ ದವಡೆಯಿಂದ ರಕ್ಷಿಸಿದ ಉಳ್ಳಾಲ ಹೊಯ್ಗೆಯ ಮೀನುಗಾರರಾದ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್, ರಿತೇಶ್ ಡಿಸೋಜ ಮತ್ತು ಅಜಿತ್ ಕರ್ಕೇರ ಬೆಂಗ್ರೆ ಅವರನ್ನು ಯುನಿವರ್ಸಲ್ ಮೆಲೋಡಿಸ್ ಮತ್ತು ಲೋಬೋ ಸೌಂಡ್ಸ್ ಪೆರ್ಮನ್ನೂರು ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಮ್ಯೂಸಿಕಲ್ ಧಮಾಕ- ಸೀಸನ್ 15 ಫೇಸ್ ಬುಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಮುಖ್ಯಸ್ಥ ಲಿಯೋ ಡಿಸೋಜ ರಾಣಿಪುರ, ಲೋಬೋ ಸೌಂಡ್ಸ್ ಪೆರ್ಮನ್ನೂರಿನ ಮಾಲೀಕ ಜೈಸನ್ ಲೋಬೊ ಹಾಗೂ ಸಂಗೀತ ಕಾರ್ಯಕ್ರಮದ ಸದಸ್ಯರಾದ ರವಿರಾಜ್ ಡಿಸೋಜ, ರೋಲ್ಟನ್ ಪಿಂಟೋ, ಮೆಲ್ವಿಟಾ ಡಿಸೋಜ, ಕ್ಲಿಯೋನ್ ಡಿಸೋಜ, ಪ್ರೀತಮ್ ನೊರೊನ್ಹ ಪಜೀರು, ಕಾರ್ಯಕ್ರಮದ ಪ್ರಾಯೋಜಕ ಮ್ಯಾಕ್ಸಿಮ್ ಡಿಸೋಜ ರಾಣಿಪುರ, ಡೋಲ್ಫಿ ಡಿಸೋಜ ರಾಣಿಪುರ, ರೋನಿ ಡಿಸೋಜ ಪೆರ್ಮನ್ನೂರು, ರೇಡಿಯೋ ಸಾರಂಗ್ ಕಾರ್ಯಕ್ರಮ ನಿರೂಪಕ
ರೋಷನ್ ಕ್ರಾಸ್ತಾ ಪಾಲ್ದನೆ ಮೊದಲಾದವರು ಉಪಸ್ಥಿತರಿದ್ದರು.
ಫೇಸ್ ಬುಕ್ ನೇರಪ್ರಸಾರ ವೀಕ್ಷಿಸಿದ ಸಾವಿರಾರು ಮಂದಿ ಜೀವ ಪಣಕ್ಕಿಟ್ಟು ಸಮುದ್ರಪಾಲಾಗುತ್ತಿದ್ದ ಪ್ರಾಣ ಉಳಿಸಿದ ಉಳ್ಳಾಲ ಹೊಯ್ಗೆಯ ಐವರು ಯುವಕರ ಸಾಧನೆಯನ್ನು ಪ್ರಶಂಸಿದ್ದಾರೆ.
Ullal Fishermen rescued from drowning team felicitated for saving life
02-04-26 09:31 pm
HK News Staffer
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
ತಮಿಳುನಾಡು ಚುನಾವಣೆಗೆ 44 ಮೀಸಲು ಕ್ಷೇತ್ರದಿಂದ ಕ್ರಿ...
02-04-26 08:03 pm
ಸಂಸದ ರಾಘವ್ ಚಡ್ಡಾಗೆ ಆಪ್ ಶಾಕ್; ರಾಜ್ಯಸಭೆ ಉಪ ನಾಯಕ...
02-04-26 07:44 pm
ಆಟವಾಡುತ್ತಿದ್ದ ಮಗು ನೀರಿನ ಬಕೆಟ್ಗೆ ಬಿದ್ದು ಸಾವು;...
02-04-26 03:56 pm
02-04-26 10:24 pm
HK News Staffer
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
02-04-26 02:43 pm
HK News Staffer
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm