ಉಕ್ಕುಡ; ನೀರು ಶುದ್ಧೀಕರಣ ಘಟಕ ಉದ್ಘಾಟನೆ

10-09-20 10:57 pm       Puttur Correspondent   ಕರಾವಳಿ

ಉಕ್ಕುಡ ಅಂಗನವಾಡಿ ಕೇಂದ್ರಕ್ಕೆ ನೀರು ಶುದ್ಧೀಕರಣ ಘಟಕವನ್ನು ವಿಟ್ಲ ಜೇಸಿಐ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ನೀಡಲಾಯಿತು.

ಮಂಗಳೂರು, ಸಪ್ಟೆಂಬರ್ 10: ಉಕ್ಕುಡ ಅಂಗನವಾಡಿ ಕೇಂದ್ರಕ್ಕೆ ನೀರು ಶುದ್ಧೀಕರಣ ಘಟಕವನ್ನು ವಿಟ್ಲ ಜೇಸಿಐ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ನೀಡಲಾಯಿತು.

ಜೇಸಿಐ ಅಧ್ಯಕ್ಷರರಾದ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಶ್ರೀಧರ ಶೆಟ್ಟಿ ಉದ್ಘಾಟಿಸಿದರು.

ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರಶೀದ್ ವಿಟ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಜೇಸಿಐ ನಿಕಟ ಪೂರ್ವಾಧ್ಯಕ್ಷ ಬಾಲಕೃಷ್ಣ, ಪಟ್ಟಣ ಪಂಚಾಯತ್ ಸದಸ್ಯೆ ಸುನೀತಾ, ಮೋಹನದಾಸ್ ಉಕ್ಕುಡ ಉಪಸ್ಥಿತರಿದ್ದರು. ಕಾರ್ಯದರ್ಶಿ ಆರ್ತಿಕ್ ವಂದಿಸಿದರು.