ಬ್ರೇಕಿಂಗ್ ನ್ಯೂಸ್
16-12-21 03:56 pm HK Desk news ಕರಾವಳಿ
ಮಂಗಳೂರು, ಡಿ.16 : ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗ್ಗೆ ಅವಹೇಳನಕಾರಿ ಮಾತುಗಳು ಕೇಳಿಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ರಾಜ್ಯಾಧ್ಯಕ್ಷರ ರಾಜಿನಾಮೆಯನ್ನು ಕೆಲವು ಕಾರ್ಯಕರ್ತರು ಕೇಳುತ್ತಿದ್ದಾರೆ. ದುರ್ಬಲ ರಾಜ್ಯಾಧ್ಯಕ್ಷ ಎಂದು ಬರೆದ ಮಾತ್ರಕ್ಕೆ ಅವರೇನು ದುರ್ಬಲರಾಗುವುದಿಲ್ಲ. ನೀವು ರಾಜಿನಾಮೆ ಕೇಳಿದ್ದಕ್ಕೆ ರಾಜಿನಾಮೆ ಕೊಡಲು ರಾಜ್ಯಾಧ್ಯಕ್ಷ ಪಟ್ಟ ಅನ್ನುವುದು ನೀವು ಕೊಟ್ಟಿರುವ ಭಿಕ್ಷೆಯಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧವೇ ಹರಿಹಾಯ್ದಿದ್ದಾರೆ.
ಸಂಘ ಪರಿವಾರದ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರಾಜಿನಾಮೆ ನೀಡುವಂತೆ ಆಗ್ರಹಿಸಿ ಅಭಿಯಾನ ನಡೆಸುತ್ತಿದ್ದಾರೆ. ಬಹಿರಂಗವಾಗಿ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಬೆಳವಣಿಗೆಯಿಂದ ಬಿಜೆಪಿ ನಾಯಕರು ತೀವ್ರ ಇರಿಸು ಮುರಿಸಿಗೆ ಒಳಗಾಗಿದ್ದರು. ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸುದರ್ಶನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ನಳಿನ್ ಕುಮಾರ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಿದ್ದರೂ, ಅವರ ಬಗ್ಗೆ ಕ್ಷುಲ್ಲಕವಾಗಿ ಬರೆಯುತ್ತಿರುವುದರ ಹಿನ್ನೆಲೆಯನ್ನು ಗಮನಿಸಿದಾಗ, ಕೆಲವು ಅಂಶಗಳು ಗಮನಕ್ಕೆ ಬಂದಿವೆ. ಇದರ ಹಿಂದೆ ಕೆಲವು ಅತೃಪ್ತ ಆತ್ಮಗಳು ಕೆಲಸ ಮಾಡುತ್ತಿವೆ. ಕಾಣದ ಕೈಗಳು ಕೆಲಸ ಮಾಡುತ್ತಾ ಇದೆ. ಬಿಜೆಪಿ ಮತ್ತು ನಮ್ಮ ಜಿಲ್ಲೆಯ ಹಿಂದು ಸಂಘಟನೆ ಮಧ್ಯೆ ಒಡಕನ್ನು ಮೂಡಿಸಬೇಕು. ಆಮೂಲಕ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಬೇಕು ಎನ್ನುವ ಹುನ್ನಾರ ಅಡಗಿರುವುದು ಕಂಡುಬಂದಿದೆ.
ಈ ಹಿಂದೆ ಬಜರಂಗದಳ ಜಿಲ್ಲಾ ಘಟಕದ ಜವಾಬ್ದಾರಿ ಹೊಂದಿದ್ದು, ಆನಂತರ ಬಿಜೆಪಿಗೆ ಬಂದಿದ್ದೇನೆ. ಬಜರಂಗದಳ ಕಾರ್ಯಕರ್ತರ ಜವಾಬ್ದಾರಿಗಳೇನು, ಅಲ್ಲಿನ ನೈಜ ಕಾರ್ಯಕರ್ತರು ಯಾರು ಅನ್ನುವುದು ಗೊತ್ತಿದೆ. ಕಾರ್ಯಕರ್ತರಿಗೆ ಯಾವ ರೀತಿಯ ನೆರವು ನೀಡಬೇಕು ಅನ್ನುವುದು ತಿಳಿದಿದೆ. ಅದನ್ನು ನಾನಾ ಪ್ರಕಾರಗಳಲ್ಲಿ ಮಾಡಿದ್ದೇವೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದವರು ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಹೊಗಳಿ ಬರೆದಿದ್ದಾರೆ. ಈಗ ತೆಗಳಿ ಬರೆಯುತ್ತಿದ್ದಾರೆ. ಈ ಪೈಕಿ ಕೆಲವರು ಒಮ್ಮೆ ಬಿಜೆಪಿ, ಆನಂತರ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದವರಿದ್ದಾರೆ.
ಕೆಲವರು ಬಿಜೆಪಿಯಲ್ಲಿ ಜವಾಬ್ದಾರಿ, ಪದವಿ ಮೇಲೆ ಕಣ್ಣಿಟ್ಟು ಈ ರೀತಿ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರೆದು ಎಂಪಿ, ಎಂಎಲ್ಎ ಆಗಬಹುದು ಅನ್ನುವ ಕನಸು ಕಾಣುತ್ತಿದ್ದಾರೆ. ಇದೊಂದು ಮೂರ್ಖತನದ ಪರಮಾವಧಿ. ಸೋಶಿಯಲ್ ಮೀಡಿಯಾದಿಂದ ಹಿಂದು ಸಂಘಟನೆ ಮಾಡಬಹುದು ಅನ್ನುವುದು ಮೂರ್ಖತನ. ಹಿಂದು ಸಂಘಟನೆಗಾಗಿ ಬಹಳಷ್ಟು ಮಂದಿ ಬೆವರು ಸುರಿಸಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಹಿಂದು ಸಂಘಟನೆ ಆಗುವುದಿಲ್ಲ. ಅಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದೂ ಇಲ್ಲ. ಆದರೆ, ಏನೋ ದುರುದ್ದೇಶ ಇಟ್ಟುಕೊಂಡು ಬರೆಯುತ್ತಿದ್ದಾರೆ. ನೈಜ ಕಾರ್ಯಕರ್ತರು ಈ ರೀತಿ ಬರೆಯುವುದಿಲ್ಲ.
ತಮ್ಮ ಜವಾಬ್ದಾರಿ ಏನು, ಹಿಂದು ಸಂಘಟನೆಯ ಕೆಲಸ ಏನು ಅನ್ನುವುದನ್ನು ಅರಿತು ಮಾಡಬೇಕು. ನಾವು ರಾಮ ಮಂದಿರ, ಕಾಶಿ ವಿಶ್ವನಾಥ ದೇಗುಲದ ಬಗ್ಗೆ ಘೋಷಣೆ ಮಾತ್ರ ಹಾಕಿಲ್ಲ. ನಾವದನ್ನು ಮಾಡಿ ತೋರಿಸಿದ್ದೇವೆ. ಲವ್ ಜಿಹಾದ್, ಮತಾಂತರದ ಬಗ್ಗೆ ಕಾನೂನು ತರುತ್ತಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದ ಮಾತ್ರಕ್ಕೆ ಯಾವುದೇ ಸಾಧನೆ ಆಗಲ್ಲ. ಆ ಬಗ್ಗೆ ಇರುವ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಮುಂದಡಿ ಇಡುತ್ತಿದ್ದೇವೆ. ರಾಷ್ಟ್ರೀಯ ವಿಚಾರಧಾರೆ ಇರುವ ಪ್ರಮುಖರು, ನಾಯಕರು ಶಾಸಕಾಂಗ ಪ್ರವೇಶ ಮಾಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಕ್ಷುಲ್ಲಕವಾಗಿ ನಡೆದುಕೊಂಡು ರಾಜ್ಯಾಧ್ಯಕ್ಷರ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಸುದರ್ಶನ್ ಮೂಡುಬಿದ್ರೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಧೀರ್ ಶೆಟ್ಟಿ ಕಣ್ಣೂರು, ವಕ್ತಾರ ರಾಧಾಕೃಷ್ಣ , ಕಸ್ತೂರಿ ಪಂಜ ಇದ್ದರು.
Mangalore Nalin Kumar Kateel is BJP president not by begging slams Sudarshan Moodbidri to VHP leaders. The Bajarang Dal and VHP members are constantly making campaigns on social media demanding the resignation of BJP state president Nalin Kumar Kateel.
02-10-25 03:50 pm
Bangalore Correspondent
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
02-10-25 03:45 pm
HK News Desk
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
02-10-25 11:05 pm
Mangalore Correspondent
Illegal Slaughterhouse in Mangalore: ಬೆನ್ನು ಬ...
02-10-25 10:43 pm
D.K. Shivakumar, Mangaluru Dasara: ದೇವರೇ ನನ್ನ...
02-10-25 11:43 am
Mangalore, Pilinalike 2025: ಪಿಲಿನಲಿಕೆ ಉತ್ಸವಕ್...
01-10-25 11:00 pm
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm