ಬ್ರೇಕಿಂಗ್ ನ್ಯೂಸ್
17-12-21 03:34 pm HK Desk news ಕರಾವಳಿ
ಉಡುಪಿ, ಡಿ.17 : ಇಲ್ಲೊಬ್ಬ ತನ್ನ ನಾಲ್ಕು ಮಕ್ಕಳನ್ನು ಬೀದಿಪಾಲು ಮಾಡಿ, ವಿವಾಹಿತ ಮಹಿಳೆಯೊಬ್ಬಳ ಜೊತೆ ಎರಡನೇ ಮದುವೆಗೆ ಮುಂದಾಗಿರುವ ಘಟನೆ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಬೆಳಕಿಗೆ ಬಂದಿದ್ದು ಮಕ್ಕಳು ಸೇರಿದಂತೆ ಸಮಾಜದ ಮುಖಂಡರು ಆಕ್ಷೇಪ ಎತ್ತಿದ್ದಾರೆ.
ಉಡುಪಿ ಮಧ್ವ ನಗರದ ನಿವಾಸಿಗಳಾದ ಮಹಮದ್ ಅಶ್ಫಕ್ ಹಾಗೂ ಜಯಲಕ್ಷ್ಮೀ ಪ್ರೀತಿಸಿ ಮದುವೆಯಾಗಲು ಹೊರಟ ಜೋಡಿಯಾಗಿದ್ದು ಉಡುಪಿಯ ವಿವಾಹ ನೋಂದಣಿ ಕಚೇರಿಯಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದರು. ಅಶ್ಫಾಕ್, ತನ್ನ ನಿಜ ಬಣ್ಣವನ್ನು ಮರೆಮಾಚಿ ನಕಲಿ ದಾಖಲೆ ಸಲ್ಲಿಸಿ ಮದುವೆಯಾಗಲು ಹೊರಟಿದ್ದಾನೆ.

ಉಡುಪಿಯ ಮಧ್ವ ನಗರದ ನಿವಾಸಿಯಾಗಿದ್ದರೂ ಅಶ್ಫಾಕ್, ಮಂಗಳೂರು ತಾಲೂಕಿನ ಪಡು ಪೆರಾರದ ವಿಳಾಸ ನೀಡಿದ್ದಾನೆ. ಅಲ್ಲದೆ, ತಾನೊಬ್ಬ ಅವಿವಾಹಿತ ಎಂದು ಬಿಂಬಿಸಲು ನಕಲಿ ದಾಖಲೆಯನ್ನೂ ಕೊಟ್ಟಿದ್ದ. ಈತನಿಗೆ 2002ರಲ್ಲಿ ಆಸೀಫಾ ಬಾನು ಎಂಬಾಕೆ ಜೊತೆಗೆ ಮದುವೆಯಾಗಿದ್ದು ನಾಲ್ಕು ಮಕ್ಕಳನ್ನು ಹೊಂದಿದ್ದಾನೆ.

ಆದರೆ ಮೊದಲ ಪತ್ನಿ ಆಸೀಫಾ ಬಾನು ಕೊರೋನಾದಿಂದಾಗಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದು ಆಬಳಿಕ ಮಕ್ಕಳನ್ನು ಅಜ್ಜಿ ಮನೆಯಲ್ಲಿ ಬಿಟ್ಟು ದೂರವಾಗಿದ್ದ. 18 ವರ್ಷದ ಹಿರಿ ಮಗಳು, 16 ವರ್ಷದ ಮಗ ಹಾಗೂ ಎರಡೂವರೆ ವರ್ಷದ ಇಬ್ಬರು ಅವಳಿ ಮಕ್ಕಳನ್ನು ಹೊಂದಿದ್ದು ಅವರಿಗೆ ತಿಳಿಯದಂತೆ ಬೇರೊಂದು ಮದುವೆಯಾಗಲು ಮುಂದಾಗಿದ್ದಾನೆ. ನಾಲ್ಕು ಮಕ್ಕಳನ್ನ ಬಿಟ್ಟು ಬೀದಿಪಾಲು ಮಾಡಿ ವಿವಾಹಿತೆಯ ಜೊತೆ ಸಂಪರ್ಕ ಬೆಳೆಸಿ, ಮದುವೆಗೆ ತಯಾರಿ ನಡೆಸಿದ್ದಾನೆ. ಈ ಬಗ್ಗೆ ಅಶ್ಪಕ್ ಮಕ್ಕಳು, ತಮಗೆ ಯಾವುದೇ ದಿಕ್ಕಿಲ್ಲದಂತೆ ಮಾಡಿ ಬೇರೆ ಮದುವೆಗೆ ಹೊರಟಿದ್ದಾರೆ. ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಈ ಬಗ್ಗೆ ಮುಸ್ಲಿಂ ಸಮುದಾಯದ ಮುಖಂಡರು ಕೂಡ ಬುದ್ದಿವಾದ ಹೇಳಿದ್ದಾರೆ. ವಿಷಯ ತಿಳಿದ ಹಿಂದೂ ಮಹಾಸಭಾ ಮುಖಂಡರು ಹಾಗೂ ಅಶ್ಪಾಕ್ ಮಕ್ಕಳು ವಿವಾಹ ನೋಂದಣಿ ಕಚೇರಿಗೆ ಬಂದಿದ್ದು ಆಕ್ಷೇಪ ಸೂಚಿಸಿದ್ದಾರೆ. ಮದುವೆ ಅರ್ಜಿ ಅನೂರ್ಜಿತಗೊಳಿಸುವಂತೆ ವಿವಾಹ ನೋಂದಣಾಧಿಕಾರಿಗೆ ಮನವಿ ಮಾಡಿದ್ದಾರೆ.
ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ಬಗ್ಗೆ ಅಶ್ಪಾಖ್ ಕುಟುಂಬಸ್ಥರು, ಮಕ್ಕಳು, ಹಿಂದು ಮಗಾಸಭಾ ಮುಖಂಡರು ಸೇರಿದ್ದು ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದು ಹಿಂದು - ಮುಸ್ಲಿಂ ಮದುವೆ ಚರ್ಚೆಗೆ ಕಾರಣವಾಗಿದೆ.
Udupi Man plans for second wedding by putting his four children out of house. Hindu leaders and Muslim family demanded justice at the sub registrar office in Udupi.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm