ಬ್ರೇಕಿಂಗ್ ನ್ಯೂಸ್
18-12-21 10:38 pm HK Desk news ಕರಾವಳಿ
ಮಂಗಳೂರು, ಡಿ.19: ದೇಶಾದ್ಯಂತ ಎಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಆದರೆ, ಆರೋಗ್ಯ ಇಲಾಖೆಯಲ್ಲಿ ಲಸಿಕೆ ಪಡೆಯಬೇಕಿದ್ದರೆ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಬೇಕು. ಆಸ್ಪತ್ರೆಗೆ ಹೋದರೂ ದಾಖಲೆ ಪತ್ರಗಳಿಲ್ಲದಿದ್ದರೆ ಲಸಿಕೆ ನೀಡಲು ಆಗಲ್ಲ ಎನ್ನುತ್ತಾರೆ. ಹಾಗಿದ್ದರೆ, ಅನಾಥರು, ನಿರ್ಗತಿಕರು ದಾಖಲೆ ಪತ್ರಗಳಿಗಾಗಿ ಎಲ್ಲಿ ಹೋಗಬೇಕು. ಅಂಥವರಿಗೆ ಲಸಿಕೆ ಹೇಗೆ ನೀಡಬೇಕು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲದಾಗಿತ್ತು.
ಇಂಥ ಉತ್ತರ ಇಲ್ಲದ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯೇ ಉತ್ತರ ನೀಡಿದ್ದರು. ಸ್ಪೆಷಲ್ ಡ್ರೈವ್ ಮೂಲಕ ಅಂಥ ವಿಭಾಗದವರಿಗೆ ಲಸಿಕೆ ನೀಡಲು ಕೇಂದ್ರ ಸರಕಾರವೇ ಅವಕಾಶ ಕೊಟ್ಟಿತ್ತು. ಕಳೆದ ಬಾರಿ ಸೆ.17ರಂದು ಪ್ರಧಾನಿ ಮೋದಿ ಜನ್ಮದಿನದಂದು ಇದೇ ವಿಶೇಷ ಅವಕಾಶವನ್ನು ಬಳಸ್ಕೊಂಡು ಮಂಗಳೂರಿನ ಸಮರ್ಥನಾ ಫೌಂಡೇಶನ್ ಅನಾಥರು, ನಿರ್ಗತಿಕರಿಗೂ ಕೊರೊನಾ ಲಸಿಕೆ ನೀಡಲು ಮುಂದಾಗಿತ್ತು.

ಮಂಗಳೂರಿನ ನೆಹರು ಮೈದಾನದ ಆಸುಪಾಸಿನಲ್ಲಿ ನೂರಾರು ಮಂದಿ ನಿರ್ಗತಿಕರು ಇದ್ದಾರೆ. ಅನಾಥರು, ಭಿಕ್ಷುಕರು ಕೂಡ ಇದರಲ್ಲಿದ್ದಾರೆ. ಅವರಲ್ಲಿ ಯಾರಿಗೂ ದಾಖಲೆ ಪತ್ರಗಳಿಲ್ಲ. ಮೊಬೈಲುಗಳಿಲ್ಲ. ಆಧಾರ್ ಕಾರ್ಡ್ ಇಲ್ಲ. ಬೇರೆ ಬೇರೆ ಊರುಗಳಿಂದ, ಎಲ್ಲೋ ರಾಜ್ಯದ ಮೂಲೆಯಿಂದ ಬಂದು ಇಲ್ಲಿ ಉಳಿದುಕೊಂಡವರಿದ್ದಾರೆ. ಭಾಷೆ, ತಮ್ಮ ಕುಟುಂಬ, ಊರಿನ ಪರಿವೇ ಇಲ್ಲದವರೂ ಇದ್ದಾರೆ. ಅವರನ್ನು ಪತ್ತೆ ಮಾಡಿ, ಕೊರೊನಾ ಲಸಿಕೆ ನೀಡುವ ಕೆಲಸವನ್ನು ಸಮರ್ಥನಾ ಫೌಂಡೇಶನ್ ಮಾಡಿದೆ. ಕಳೆದ ಬಾರಿ 83 ಜನಕ್ಕೆ ಈ ರೀತಿ ಲಸಿಕೆ ನೀಡಲಾಗಿತ್ತು. ಈಗ 84 ದಿನಗಳ ನಂತರ ಡಿ.17ರಂದು ಎರಡನೇ ಡೋಸ್ ನೀಡಲಾಗಿದ್ದು, ಈ ಬಾರಿ 55 ಜನರು ಎರಡನೇ ಹಂತದ ಡೋಸ್ ಪಡೆದಿದ್ದಾರೆ.

ಕೋವಿನ್ ಏಪ್ ನಲ್ಲಿ ಒಂದೇ ಮೊಬೈಲ್ ನಂಬರಿನಲ್ಲಿ ಸ್ಪೆಷಲ್ ಡ್ರೈವ್ ಬಗ್ಗೆ ರಿಜಿಸ್ಟರ್ ಮಾಡಿಕೊಂಡು ಅವಕಾಶ ನೀಡಲಾಗಿತ್ತು. ಈ ರೀತಿ ವಿಶೇಷ ಆದ್ಯತೆಯಲ್ಲಿ ಲಸಿಕೆ ನೀಡಲು ಮಂಗಳೂರಿನಲ್ಲಿ ಕೆಎಂಸಿ ಆಸ್ಪತ್ರೆಗೆ ಅನುಮತಿ ನೀಡಲಾಗಿತ್ತು. ಸರಕಾರದ ಉಚಿತ ಲಸಿಕೆಯನ್ನು ಪಡೆದು ಸಮರ್ಥನಾ ಫೌಂಡೇಶನ್ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಸಿಬಂದಿ ಲಸಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ತುಂಬ ಸಂತಸಗೊಂಡಿರುವ ಅನಾಥರು, ನಾವು ಲಸಿಕೆ ಪಡೆಯುವುದಕ್ಕಾಗಿ ಆಸ್ಪತ್ರೆಗಳಿಗೆ ಹೋಗಿದ್ದಾಗ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಕೇಳುತ್ತಿದ್ದರು. ಆದರೆ ನಾವು ಮನೆ ಬಿಟ್ಟು ಎಷ್ಟೋ ವರ್ಷಗಳಾಗಿವೆ. ನಮ್ಮಲ್ಲಿ ಮೊಬೈಲ್ ಎಲ್ಲಿಂದ ಬರಬೇಕು. ಜೀವ ಮಾತ್ರ ಇದೆ, ಉಳಿದಿದ್ದು ಯಾವುದೂ ಇಲ್ಲ. ನಮ್ಮ ಕಷ್ಟ ಕಂಡು ಲಸಿಕೆ ನೀಡಿದ್ದಕ್ಕಾಗಿ ಧನ್ಯವಾದ ಎನ್ನುತ್ತಿದ್ದರು.

ನಿರ್ಗತಿಕರೇ ಆಗಿದ್ದರೂ, ಅವರಿಗೆ ಲಸಿಕೆ ಪಡೆದಿರುವುದಕ್ಕಾಗಿ ಕೆಎಂಸಿ ಆಸ್ಪತ್ರೆಯಿಂದ ಕೊರೊನಾ ಲಸಿಕೆ ಕಾರ್ಡ್ ಅನ್ನು ನೀಡಲಾಗಿದೆ. ಸಮಾಜಮುಖಿ ಕೆಲಸ ಮಾಡಿರುವ ಸಮರ್ಥನಾ ಫೌಂಡೇಶನ್ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ, ಟ್ರಸ್ಟಿ ಸುಜಿತ್ ಪ್ರತಾಪ್, ಪ್ರೀತಮ್ ರೈ, ಸಚಿನ್ ಶೆಟ್ಟಿ, ಅನಿಲ್ ಪ್ರಸಾದ್, ಕೆಎಂಸಿ ಆಸ್ಪತ್ರೆಯ ಸಿಂಧು ಪ್ರಸಾದ್, ಜಯರಾಮ ಪೂಜಾರಿ ಒಡಗೂಡಿ ಈ ಕೆಲಸ ಮಾಡಿದ್ದಾರೆ.
Mangalore Covid vaccine special drive for the poor and needy by Samarthana Foundation, wins hearts of people. Also a Health card from Kmc hospital has been issued by the foundation to the needy and poor for their medical benefits.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm