ಕದ್ರಿ ; ಹಾಡಹಗಲೇ ಮನೆಗೆ ಕನ್ನ - ಕಪಾಟು ಒಡೆದು ಚಿನ್ನಾಭರಣ ಕಳವು

15-09-20 11:52 am       Mangalore Correspondent   ಕರಾವಳಿ

ಮಂಗಳೂರುರಿನ ಮನೆಯೊಂದಕ್ಕೆ ನಿನ್ನೆ ಮಧ್ಯಾಹ್ನ ಹಾಡುಹಗಲೇ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದಿದ್ದಾರೆ. ಕದ್ರಿ ಶಿವಭಾಗ್ ಬಳಿಯ ತಾರೆತೋಟ ಎಂಬಲ್ಲಿ ಘಟನೆ ನಡೆದಿದೆ.

ಮಂಗಳೂರು, ಸೆ.14: ನಗರದ ಮನೆಯೊಂದಕ್ಕೆ ನಿನ್ನೆ ಮಧ್ಯಾಹ್ನ ಹಾಡುಹಗಲೇ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದಿದ್ದಾರೆ. ಕದ್ರಿ ಶಿವಭಾಗ್ ಬಳಿಯ ತಾರೆತೋಟ ಎಂಬಲ್ಲಿ ಸೋಮವಾರ ಮಧ್ಯಾಹ್ನ 2ರಿಂದ ಸಂಜೆ 4ರ ಮಧ್ಯೆ ಘಟನೆ ನಡೆದಿದೆ.

ಕಿಮೆ ನಾಯ್ಕ ಎಂಬವರ ಪತ್ನಿ ರೂಪಾ ತನ್ನ ಮಕ್ಕಳೊಂದಿಗೆ ಸೋಮವಾರ ಮನೆಗೆ ಬೀಗ ಹಾಕಿ ತೆರಳಿದ್ದರು. ತಾರೆತೋಟಕ್ಕೆ ಹೋಗಿ ಸಂಜೆ 4 ಗಂಟೆಗೆ ಮರಳಿ ಬಂದಾಗ ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಅನುಮಾನಗೊಂಡು ಮನೆಯ ಕಪಾಟು ತೆರೆದು ನೋಡಿದಾಗ ಬಟ್ಟೆ - ಬರೆಗಳು ಚೆಲ್ಲಾಪಿಲ್ಲಿ ಆಗಿದ್ದವು. ಕಪಾಟಿನ ಲಾಕರ್ ತೆರೆದು 44 ಗ್ರಾಂ ತೂಕದ ಚಿನ್ನದ ಕರಿಮಣಿ ಸರ -1, ಕಿವಿಯೋಲೆ -1 ಜೊತೆ, ನಗದು 18,000 ರೂ. ಸಹಿತ 1.78 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ರೂಪಾ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Join our WhatsApp group for latest news updates