ಬ್ರೇಕಿಂಗ್ ನ್ಯೂಸ್
01-01-22 06:49 pm Mangalore Correspondent ಕರಾವಳಿ
ಕುಂದಾಪುರ, ಜ.1 : ರೌಡಿಗಳನ್ನು ಕಂಟ್ರೋಲ್ ಮಾಡಲು ಪೊಲೀಸರನ್ನು ನೇಮಕ ಮಾಡಿರುವುದು. ಪೊಲೀಸರೇ ರೌಡಿಗಳಾದರೆ ಯಾರು ಏನು ಮಾಡೋದು ? ಘಟನೆ ನಡೆದ ಎರಡು ದಿನಗಳ ನಂತರ ಒಬ್ಬ ಪೊಲೀಸ್ ಆಸ್ಪತ್ರೆ ದಾಖಲಾಗ್ತಾನೆ. ಕೌಂಟರ್ ಕೇಸ್ ಕೊಡ್ತಾನಂದ್ರೆ ಅದು ಸುಳ್ಳು ಕೇಸು ಅನ್ನೋದು ಗೊತ್ತಾಗತ್ತೆ. ಇದು ಅಪರಾಧ. ಕೋಟ ಪಿಎಸ್ಐ ಆಗಿದ್ದ ವ್ಯಕ್ತಿ ಪೊಲೀಸ್ ಇಲಾಖೆಗೆ ಫಿಟ್ಟೋ, ಅನ್ ಫಿಟ್ಟೋ ಅನ್ನೋದನ್ನು ನಮ್ಮ ಸರಕಾರ ನಿರ್ಧರಿಸುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಬ್ಬರಿಸಿದ್ದಾರೆ.
ಕೋಟತಟ್ಟು ಗ್ರಾಮದ ಕೊರಗರ ಕಾಲನಿಗೆ ಭೇಟಿ ನೀಡಿ, ಅಲ್ಲಿನ ಜನರ ಅಹವಾಲು ಆಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಒಂದು ಲಕ್ಷ ಪೊಲೀಸ್ ಸಿಬಂದಿ ಇದ್ದಾರೆ. ಕೋಟ ಪಿಎಸ್ಐ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿದ್ದಾನೆ. ಆತ ಒಂದು ದಾರ್ಷ್ಟ್ಯದ ವ್ಯಕ್ತಿ ಅಂತ ಕಾಣುತ್ತದೆ. ಯಾವುದೇ ವಿಚಾರ ಇದ್ದರೂ ಪೊಲೀಸರು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ಕೊಡೋದು ಪದ್ಧತಿ. ಇಲ್ಲಿ ಆತ ಯಾರಿಗೂ ಮಾಹಿತಿ ಕೊಟ್ಟಿಲ್ವಂತೆ. ತಾನೇ ಸುಪ್ರೀಂ ಅಂತ ವರ್ತಿಸಿದ್ದಾನೆ. ಸರ್ಕಲ್, ಡಿವೈಎಸ್ಪಿ, ಎಸ್ಪಿಗೆ ಯಾರಿಗೂ ಮಾಹಿತಿ ಕೊಟ್ಟಿಲ್ಲ. ಆತನ ಅತಿರೇಕದ ವರ್ತನೆಯಿಂದಾಗಿ ಪೊಲೀಸ್ ಇಲಾಖೆಯ ಪರವಾಗಿ ನಾನು ತಲೆತಗ್ಗಿಸುವ ಸ್ಥಿತಿ ಬಂದಿದೆ.



ರಾಜ್ಯದಲ್ಲಿ ಒಳ್ಳೊಳ್ಳೆ ಪೊಲೀಸ್ ಅಧಿಕಾರಿಗಳು, ಸಿಬಂದಿ ಇದ್ದಾರೆ. ಇಂಥ ಘಟನೆಯಿಂದ ಅವರೆಲ್ಲ ತಲೆ ತಗ್ಗಿಸಬೇಕಾಗುತ್ತದೆ. ನಮ್ಮ ಇಲಾಖೆಯಲ್ಲಿ ಕೆಟ್ಟವರು ಇಲ್ಲ ಎನ್ನೋದಿಲ್ಲ. ಆದರೆ ಹೆಚ್ಚಿನವರು ಒಳ್ಳಯವರಿದ್ದಾರೆ. ಒಳ್ಳೆಯ ವ್ಯಕ್ತಿಗಳಿಂದಾಗಿ, ಪೊಲೀಸರಿಂದಾಗಿ ನಾವು ನೆಮ್ಮದಿಯಿಂದ ಮಲಗುವಂತಾಗಿದೆ. ಆದರೆ ತಪ್ಪು ಮಾಡಿದವರಿಗೆ ಏನು ಶಿಕ್ಷೆ ಕೊಡಬೇಕೋ ಅದನ್ನು ಕೊಡುತ್ತೇವೆ ಎಂದು ಆರಗ ಹೇಳಿದರು.


ಪೊಲೀಸ್ ಕಾನ್ಸ್ ಟೇಬಲ್, ಎರಡು ದಿನಗಳ ನಂತರ ದೂರು ಕೊಟ್ಟು ತಪ್ಪು ಮಾಡಿದ್ದಾನೆ. ಇದೊಂದು ದೊಡ್ಡ ಅಪರಾಧ. ಜನಸಾಮಾನ್ಯರು ಈ ರೀತಿ ಮಾಡ್ತಾರೆ. ಆದರೆ ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಇಂಥ ಕೆಲಸ ಮಾಡಬಾರದು. ಪಿಎಸ್ಐ ಅಮಾನತು ಮಾಡಿದ್ದೇವೆ. ಐವರು ಪೊಲೀಸರನ್ನು ವರ್ಗಾವಣೆ ಮಾಡಿದ್ದೇವೆ. ತನಿಖೆಯ ಬಳಿಕ ಅವರ ತಪ್ಪಿಗೂ ಶಿಕ್ಷೆ ಆಗುತ್ತದೆ. ಪೊಲೀಸರು ಕೌಂಟರ್ ಕೇಸ್ ಕೊಟ್ಟಿದ್ದಾರೆಂದು ಕಾಲನಿ ನಿವಾಸಿಗಳು ಯಾರು ಕೂಡ ಹೆದರಬೇಕಾಗಿಲ್ಲ. ಜನರ ಜೊತೆ ರಾಜ್ಯ ಸರಕಾರ ನಿಲ್ಲುತ್ತದೆ ಎಂದು ಗೃಹ ಸಚಿವರು ಹೇಳಿದರು.
ಕೋಟದಲ್ಲಿ ಪೊಲೀಸ್ ದೌರ್ಜನ್ಯ ; ಡಿಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ - ಎಸ್ಪಿ ವಿಷ್ಣುವರ್ಧನ್
ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿದ ಪೊಲೀಸರಿಂದ ಲಾಠಿಚಾರ್ಜ್ ! ಸಚಿವ ಕೋಟ ಊರಲ್ಲೇ ಬಡವರ ಮೇಲೆ ಪೊಲೀಸರ ದೌರ್ಜನ್ಯ !
ಕೊರಗ ಕಾಲನಿಯಲ್ಲಿ ಲಾಠಿಚಾರ್ಜ್ ; ಘಟನೆ ಬಗ್ಗೆ ಎಸ್ಪಿಯಿಂದ ವರದಿ ಕೇಳಿದ ರಾಷ್ಟ್ರೀಯ ಮಹಿಳಾ ಆಯೋಗ
Atrocity on Koraga community SI suspended, home minister Araga Dnyanendra states we will investigate wether case is true or false
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 01:22 pm
HK News Staffer
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
07-09-26 04:09 pm
HK News Staffer
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm
ಪರವಾನಗಿ ಇಲ್ಲದೆ ಔಷಧಿ ದಾಸ್ತಾನು ; ಬೆಂಗಳೂರಿನ ಅಮೆಜ...
06-09-26 10:28 pm
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm