ಕಾರಿನಲ್ಲಿ ಭಿನ್ನ ಕೋಮಿನ ಜೋಡಿಯ ಸರಸ ; ಎಸ್ಕೇಪ್ ಯತ್ನಿಸಿ ಹಿಂಜಾವೇ ಕಾರ್ಯಕರ್ತರ ವಶಕ್ಕೆ 

16-09-20 10:36 pm       Mangalore Reporter   ಕರಾವಳಿ

ಕಾರಿನಲ್ಲಿ ತೆರಳುತಿದ್ದ ಭಿನ್ನ ಕೋಮಿನ ಜೋಡಿಯೊಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ. 

ಪುತ್ತೂರು, ಸೆಪ್ಟಂಬರ್ 16: ಕಾರಿನಲ್ಲಿ ತೆರಳುತಿದ್ದ ಭಿನ್ನ ಕೋಮಿನ ಜೋಡಿಯೊಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ. 

ಪುತ್ತೂರು ಹೊರವಲಯದ ಮಿತ್ತೂರಿನಲ್ಲಿ ಕೇರಳ ನೊಂದಣಿಯ ಕಾರಿನಲ್ಲಿ ಭಿನ್ನ ಕೋಮಿನ ಜೋಡಿಯೊಂದು ಸರಸ ಸಲ್ಲಾಪದಲ್ಲಿ ತೊಡಗಿತ್ತು ಎಂದು ಹೇಳಲಾಗಿದೆ. ಇದನ್ನು ಗಮನಿಸಿದ ಸ್ಥಳೀಯ ಹಿಂದು ಜಾಗರಣೆ ವೇದಿಕೆ ಕಾರ್ಯಕರ್ತರು ಪ್ರಶ್ನಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದವರು ಕಾರು ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಕಾರನ್ನು ಸುಮಾರು 7 ಕಿಮೀ ದೂರ ಬೆನ್ನಟ್ಟಿ ಕಾರು ಹಾಗು ಕಾರಿನಲ್ಲಿದ್ದ ಜೋಡಿಯನ್ನು ಅಡ್ಡಗಟ್ಟಿದ್ದು ಕಾರ್ಯಕರ್ತರು ಬಳಿಕ ಪುತ್ತೂರು ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಯಾಗಿದ್ದಾನೆ. ಮೈಸೂರು ಮೂಲದ ಯುವತಿ ಹಿಂದೂ ಧರ್ಮೀಯಳಾಗಿದ್ದು ಬೆಂಗಳೂರಿನಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ.

Join our WhatsApp group for latest news updates