ಬ್ರೇಕಿಂಗ್ ನ್ಯೂಸ್
19-09-20 05:25 pm Mangalore Reporter ಕರಾವಳಿ
ಮಂಗಳೂರು, ಸೆಪ್ಟಂಬರ್ 19: ಡ್ರಗ್ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಡ್ಯಾನ್ಸರ್ ಕಂ ಕೊರಿಯೋಗ್ರಾಫರ್ ಕಿಶೋರ್ ಅಮನ್ ಅಸಲಿಗೆ ಶೆಟ್ಟಿ ಸಮುದಾಯದವನೇ ಅಲ್ಲ. ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಹೆಸರಿನ ಮುಂದೆ ಶೆಟ್ಟಿ ಸರ್ ನೇಮ್ ಸೇರಿಸಿಕೊಂಡಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
‘ಕಿಶೋರ್ ಶೆಟ್ಟಿ’ ಬಂಧನ ಸುದ್ದಿ ಬೆಳಗ್ಗಿನಿಂದ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಸುರತ್ಕಲ್ ಪರಿಸರದ ಬಂಟ ಸಮುದಾಯದವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಒರಿಜಿನಲ್ ಶೆಟ್ಟಿಯಲ್ಲ. ತನ್ನ ಹೆಸರಿನ ಮುಂದೆ ಉದ್ದೇಶಪೂರ್ವಕವಾಗಿ ಶೆಟ್ಟಿ ಹಾಕ್ಕೊಂಡಿದ್ದಾನೆ. ಬೇಕಿದ್ದರೆ ಆತನಲ್ಲಿ ಕೇಳಿ ನೋಡಿ ಎಂದು ಹೇಳಿದ್ದರು. ಈ ಬಗ್ಗೆ ಆತನನ್ನು ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ಪ್ರಶ್ನೆ ಮಾಡಿದಾಗ, ಕಿಶೋರ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಶೆಟ್ಟಿ ಹಾಕ್ಕೊಂಡಿದ್ದರ ಕಾರಣವನ್ನೂ ಹೇಳಿದ್ದಾನೆ.

ಆರಂಭದಲ್ಲಿ ಝೀಟಿವಿಯ ರಿಯಾಲಿಟಿ ಶೋಗಳಲ್ಲಿ ಇದ್ದಾಗ ಕಿಶೋರ್, ಮಂಗಳೂರು ಅಂತಷ್ಟೇ ಬಳಕೆ ಮಾಡುತ್ತಿದ್ದ. ಆನಂತರ ಸ್ವಲ್ಪ ಹೆಸರು ಬಂದೊಡನೆ ಬಾಲಿವುಡ್ ಕಲಾವಿದರ ಪರಿಚಯ ಆಗಿತ್ತು. ಮಂಗಳೂರು ಮೂಲದವ, ಹೆಸರಿನ ಜೊತೆಗೆ ಶೆಟ್ಟಿ ಸರ್ ನೇಮ್ ಇದ್ದರೆ ಹೆಚ್ಚು ಅವಕಾಶ, ಮರ್ಯಾದೆ ಸಿಗುತ್ತೆ ಅಂತ ಸೇರಿಸಿಕೊಂಡಿದ್ದೆ ಅಂತಾ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ.
ಮಂಗಳೂರಿನ ಕುಳಾಯಿ ನಿವಾಸಿಯಾಗಿದ್ದ ಕಿಶೋರ್, 2011ರ ವೇಳೆಗೆ ಝೀ ರಿಯಾಲಿಟಿ ಶೋಗಳಿಗೆ ಹೋಗಿ ಹೆಸರು ಮಾಡಿದ್ದ. ಅದು ಬಿಟ್ಟರೆ ಮಂಗಳೂರಿನಲ್ಲಿ ಡ್ಯಾನ್ಸ್ ಕ್ಲಾಸ್ ಆಗಿರಲಿ, ಯಾವುದೇ ಡ್ಯಾನ್ಸ್ ಚಟುವಟಿಕೆಯನ್ನು ಮಾಡಿಕೊಂಡಿಲ್ಲ ಎಂದು ಆತನ ನಿಕಟವರ್ತಿಗಳು ಹೇಳಿದ್ದಾರೆ.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm