ಬ್ರೇಕಿಂಗ್ ನ್ಯೂಸ್
19-09-20 05:25 pm Mangalore Reporter ಕರಾವಳಿ
ಮಂಗಳೂರು, ಸೆಪ್ಟಂಬರ್ 19: ಡ್ರಗ್ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಡ್ಯಾನ್ಸರ್ ಕಂ ಕೊರಿಯೋಗ್ರಾಫರ್ ಕಿಶೋರ್ ಅಮನ್ ಅಸಲಿಗೆ ಶೆಟ್ಟಿ ಸಮುದಾಯದವನೇ ಅಲ್ಲ. ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಹೆಸರಿನ ಮುಂದೆ ಶೆಟ್ಟಿ ಸರ್ ನೇಮ್ ಸೇರಿಸಿಕೊಂಡಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
‘ಕಿಶೋರ್ ಶೆಟ್ಟಿ’ ಬಂಧನ ಸುದ್ದಿ ಬೆಳಗ್ಗಿನಿಂದ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಸುರತ್ಕಲ್ ಪರಿಸರದ ಬಂಟ ಸಮುದಾಯದವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಒರಿಜಿನಲ್ ಶೆಟ್ಟಿಯಲ್ಲ. ತನ್ನ ಹೆಸರಿನ ಮುಂದೆ ಉದ್ದೇಶಪೂರ್ವಕವಾಗಿ ಶೆಟ್ಟಿ ಹಾಕ್ಕೊಂಡಿದ್ದಾನೆ. ಬೇಕಿದ್ದರೆ ಆತನಲ್ಲಿ ಕೇಳಿ ನೋಡಿ ಎಂದು ಹೇಳಿದ್ದರು. ಈ ಬಗ್ಗೆ ಆತನನ್ನು ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ಪ್ರಶ್ನೆ ಮಾಡಿದಾಗ, ಕಿಶೋರ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಶೆಟ್ಟಿ ಹಾಕ್ಕೊಂಡಿದ್ದರ ಕಾರಣವನ್ನೂ ಹೇಳಿದ್ದಾನೆ.
ಆರಂಭದಲ್ಲಿ ಝೀಟಿವಿಯ ರಿಯಾಲಿಟಿ ಶೋಗಳಲ್ಲಿ ಇದ್ದಾಗ ಕಿಶೋರ್, ಮಂಗಳೂರು ಅಂತಷ್ಟೇ ಬಳಕೆ ಮಾಡುತ್ತಿದ್ದ. ಆನಂತರ ಸ್ವಲ್ಪ ಹೆಸರು ಬಂದೊಡನೆ ಬಾಲಿವುಡ್ ಕಲಾವಿದರ ಪರಿಚಯ ಆಗಿತ್ತು. ಮಂಗಳೂರು ಮೂಲದವ, ಹೆಸರಿನ ಜೊತೆಗೆ ಶೆಟ್ಟಿ ಸರ್ ನೇಮ್ ಇದ್ದರೆ ಹೆಚ್ಚು ಅವಕಾಶ, ಮರ್ಯಾದೆ ಸಿಗುತ್ತೆ ಅಂತ ಸೇರಿಸಿಕೊಂಡಿದ್ದೆ ಅಂತಾ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ.
ಮಂಗಳೂರಿನ ಕುಳಾಯಿ ನಿವಾಸಿಯಾಗಿದ್ದ ಕಿಶೋರ್, 2011ರ ವೇಳೆಗೆ ಝೀ ರಿಯಾಲಿಟಿ ಶೋಗಳಿಗೆ ಹೋಗಿ ಹೆಸರು ಮಾಡಿದ್ದ. ಅದು ಬಿಟ್ಟರೆ ಮಂಗಳೂರಿನಲ್ಲಿ ಡ್ಯಾನ್ಸ್ ಕ್ಲಾಸ್ ಆಗಿರಲಿ, ಯಾವುದೇ ಡ್ಯಾನ್ಸ್ ಚಟುವಟಿಕೆಯನ್ನು ಮಾಡಿಕೊಂಡಿಲ್ಲ ಎಂದು ಆತನ ನಿಕಟವರ್ತಿಗಳು ಹೇಳಿದ್ದಾರೆ.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm