ಬ್ರೇಕಿಂಗ್ ನ್ಯೂಸ್
21-09-20 06:26 pm Udupi Correspondent ಕರಾವಳಿ
ಉಡುಪಿ, ಸೆಪ್ಟಂಬರ್ 21: ಉಡುಪಿಯಲ್ಲಿ ಎರಡು ದಿನಗಳಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆ ಯಾವೆಲ್ಲ ಅನಾಹುತಗಳನ್ನು ಮಾಡಿದೆ ಅಂದರೆ ಅದನ್ನು ಊಹಿಸೋಕು ಸಾಧ್ಯವಿಲ್ಲ. ಅದಕ್ಕೆ ಒಂದು ಸಣ್ಣ ಉದಾಹರಣೆ ಕಾಪು ಬೀಚ್ ನಲ್ಲಿದ್ದ ಬ್ರಿಟಿಷರ ಕಾಲದ ದೀಪಸ್ತಂಭ ಬಳಿಯ ದೃಶ್ಯ.
ಕಾಪು ಬೀಚ್ ಬಳಿಯ ಲೈಟ್ ಹೌಸ್ ಕನ್ನಡ, ತುಳು ಸಿನಿಮಾ ಚಿತ್ರೀಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದ ಜಾಗ. ಅಪೂರ್ವ ಸೌಂದರ್ಯದಿಂದ ವೀವ್ ಸ್ಪಾಟ್ ಆಗಿದ್ದ ಕಾಪು ದೀಪಸ್ತಂಭದತ್ತ ಇನ್ನು ಸುಳಿದಾಡುವುದು ಬಿಡಿ. ಅದರ ಬಳಿಗೆ ಹೋಗುವುದೇ ಡೇಂಜರ್ ಅನ್ನುವಂತಾಗಿದೆ. ಯಾಕಂದ್ರೆ, ಎರಡು ದಿನಗಳ ಮಳೆಯಿಂದ ಭೋರ್ಗರೆದ ನದಿಗಳು ಸಮುದ್ರ ಸೇರಲು ಜಾಗ ಸಾಲದೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಸಮುದ್ರದತ್ತ ನುಗ್ಗಿದೆ. ಲೌಟ್ ಹೌಸ್ ಹಿಂಭಾಗದಿಂದ ಸಮುದ್ರ ಸೇರುತ್ತಿದ್ದ ನದಿ ತನ್ನ ಪಥವನ್ನೇ ಬದಲಿಸಿದ್ದು ದೀಪಸ್ತಂಭದತ್ತ ತೆರಳುವ ಕಾಲುದಾರಿಯನ್ನೇ ಕಬಳಿಸಿಕೊಂಡು ಮುಂಭಾಗದಿಂದ ಹರಿಯಲಾರಂಭಿಸಿದೆ. ಕಾಲು ದಾರಿ ಕೊಚ್ಚಿಹೋಗಿದ್ದು, ಎರಡೂ ಭಾಗಗಳಿಂದ ಸಮುದ್ರ ಕೊರೆತ ಉಂಟಾದಲ್ಲಿ ದೀಪಸ್ತಂಭವೇ ಸಮುದ್ರ ಪಾಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕಾಪು ಬೀಚ್ ನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್ನ ಹಿಂಭಾಗದಲ್ಲಿ ನದಿ ಸಮುದ್ರ ಸೇರ್ತಾ ಇತ್ತು. ಭಾರೀ ಮಳೆಯಿಂದಾಗಿ ನದಿ ಪಾತ್ರವೇ ಬದಲಾಗಿದ್ದು, ನೆರೆ ನೀರು ತನ್ನ ಪಥವನ್ನೇ ಬದಲಿಸಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಾಪು ಬಳಿಯ ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತುತೋಟ ಸೇರಿದಂತೆ ಆಸುಪಾಸಿನ ಭಾಗದಲ್ಲಿ ಎಲ್ಲೆಂದರಲ್ಲಿ ಹರಿಯುತ್ತಿರುವ ನದಿ ನೀರು ಲೈಟ್ ಹೌಸ್ ಮುಂಭಾಗದಿಂದಲೇ ಸಮುದ್ರ ಸೇರುತ್ತಿದೆ. ಇದರಿಂದ ದೀಪಸ್ತಂಭದತ್ತ ಹೋಗಲು ದಾರಿ ಇಲ್ಲದಾಗಿದ್ದು, ಅಲ್ಲದೆ ನೆರೆನೀರು ಇದೇ ರೀತಿ ಹರಿದರೆ ಲೈಟ್ ಹೌಸ್ ಏರುವ ಮೆಟ್ಟಲುಗಳು ಕೊಚ್ಚಿ ಹೋಗುವ ಸಾಧ್ಯತೆ ಇದೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 07:27 pm
HK News Staffer
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm