ಬ್ರೇಕಿಂಗ್ ನ್ಯೂಸ್
22-09-20 03:02 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 22: ಕೊನೆಗೂ ಕರಾವಳಿಯ ಹೆಮ್ಮೆಯ ಸಾಧಕ, ವಿಜಯ ಬ್ಯಾಂಕಿನ ಔನ್ನತ್ಯಕ್ಕೆ ಕಾರಣರಾಗಿದ್ದ ಮುಲ್ಕಿ ಸುಂದರರಾಮ ಶೆಟ್ಟಿ ಅವರಿಗೆ ರಾಜ್ಯ ಸರಕಾರ ಗೌರವ ನೀಡಿದೆ. ಮೂರು ವರ್ಷಗಳ ಹಿಂದೆ ಜಟಾಪಟಿಗೆ ಕಾರಣವಾಗಿದ್ದ ಸುಂದರ ರಾಮ ಶೆಟ್ಟರ ಹೆಸರಿನಲ್ಲಿ ಮಂಗಳೂರಿನಲ್ಲಿ ರಸ್ತೆ ನಾಮಕರಣ ಮಾಡುವುದಕ್ಕೆ ನಗರಾಭಿವೃದ್ಧಿ ಸಚಿವಾಲಯ ಒಪ್ಪಿಕೊಂಡಿದ್ದು ಹಿಂದಿನ ಆದೇಶವನ್ನು ಮರು ಜಾರಿಗೆ ಸೂಚನೆ ನೀಡಿದೆ.
ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ, ಲೈಟ್ ಹೌಸ್ ಹಿಲ್ ಬಳಿಯ ಕೆಥೋಲಿಕ್ ಕ್ಲಬ್ ವರೆಗಿನ ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರು ನಾಮಕರಣ ಮಾಡಲು 2017ರ ಮೇ 24ರಂದು ಆಗಿನ ರಾಜ್ಯ ಸರಕಾರ ಆದೇಶ ಮಾಡಿತ್ತು. ಆದರೆ, ಕೊನೆಕ್ಷಣದಲ್ಲಿ ಎಚ್ಚತ್ತುಕೊಂಡ ಅಲೋಶಿಯಸ್ ಕಾಲೇಜು ಆಡಳಿತ, ಆಗ ಮಂಗಳೂರು ಶಾಸಕರಾಗಿದ್ದ ಜೆ.ಆರ್ ಲೋಬೊ ಮೂಲಕ ಕೋರ್ಟಿನಿಂದ ತಡೆಯಾಜ್ಞೆ ತಂದಿತ್ತು. ಅಲ್ಲದೆ, ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರಿಡುವುದಕ್ಕೆ ಆಕ್ಷೇಪ ಸೂಚಿಸಿ ವಿದ್ಯಾರ್ಥಿಗಳ ಮೂಲಕ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಈ ವಿಚಾರ ಮಂಗಳೂರಿನಲ್ಲಿ ಕಾಂಗ್ರೆಸ್ - ಬಿಜೆಪಿ ಮಧ್ಯೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಬಂಟ ಸಮುದಾಯಕ್ಕೆ ಅವಮಾನ ಎಂಬ ನೆಲೆಯಲ್ಲಿ ಪ್ರಚಾರವನ್ನೂ ನಡೆಸಲಾಗಿತ್ತು. ಬಳಿಕ ಕೋರ್ಟ್ ಮತ್ತು ಮಹಾನಗರ ಪಾಲಿಕೆಯಲ್ಲಿ ಜಟಾಪಟಿ ನಡೆದು ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರಕಾರ ಬಂದರೆ ಒಂದೇ ತಿಂಗಳಲ್ಲಿ ರಸ್ತೆ ನಾಮಕರಣ ಮಾಡಿಸುವುದಾಗಿ ಮಾಜಿ ಸಚಿವ ನಾಗರಾಜ ಶೆಟ್ಟಿ ಕೊಚ್ಚಿಕೊಂಡಿದ್ದೂ ಆಗಿತ್ತು. ಆನಂತರ ಕೋರ್ಟಿನಲ್ಲಿ ವಾದ - ವಿವಾದ ನಡೆದಿದ್ದು ಮಹಾನಗರ ಪಾಲಿಕೆ ಕಮಿಷನರ್ ಅವರ ಅಭಿಪ್ರಾಯವನ್ನೂ ಕೇಳಲಾಗಿತ್ತು. ಎರಡೂ ಕಡೆಯ ವಾದ ಆಲಿಸಿದ ರಾಜ್ಯ ಹೈಕೋರ್ಟ್, 2019ರ ಎಪ್ರಿಲ್ 11 ರಂದು ಈ ಬಗ್ಗೆ ಪುನರ್ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು.
ಈಗ ದಿಢೀರ್ ಆಗಿ ಎಚ್ಚತ್ತ ರಾಜ್ಯದ ಬಿಜೆಪಿ ಸರಕಾರ, ಇತ್ತೀಚೆಗೆ 2020ರ ಸೆಪ್ಟಂಬರ್ 5 ರಂದು ಹಳೆಯ ಆದೇಶವನ್ನು ಊರ್ಜಿತಗೊಳಿಸಿ ನಗರಾಭಿವೃದ್ಧಿ ಸಚಿವಾಲಯದ ಮೂಲದ ಆದೇಶ ಮಾಡಿಸಿದೆ. ಅಲ್ಲಿಗೆ ಎರಡು ಸಮುದಾಯಗಳ ನಡುವಿನ ಪ್ರತಿಷ್ಠೆಗೆ ಕಾರಣವಾಗಿದ್ದ ರಸ್ತೆ ನಾಮಕರಣ ವಿವಾದಕ್ಕೆ ಇತಿಶ್ರೀ ಹಾಕಲಾಗಿದೆ.
Join our WhatsApp group for latest news updates
05-02-23 02:56 pm
HK News Desk
ಪ್ರಣಾಳಿಕೆ ಸಮಿತಿಗೆ ರಾಜಿನಾಮೆ ನೀಡಿಲ್ಲ, ನಮ್ಮಲ್ಲಿ...
04-02-23 10:17 pm
ಅಮಿತ್ ಷಾ ಸಿಡಿ ಎಕ್ಸ್ಪರ್ಟ್ ಇದ್ದಾರೆ, ಗುಜರಾತ್ ಉ...
04-02-23 05:51 pm
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಖ್ಯಾತ ಗಾಯಕಿ ವಾಣಿ...
04-02-23 05:16 pm
ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್...
04-02-23 02:23 pm
06-02-23 04:04 pm
HK News Desk
ಬಾಂಗ್ಲಾದೇಶದಲ್ಲಿ 14 ಹಿಂದು ದೇವಾಲಯಗಳ ಧ್ವಂಸ; ರಾತ್...
06-02-23 10:53 am
ನಸುಕಿನಲ್ಲಿ ಭೀಕರ ಭೂಕಂಪ ; ತತ್ತರಿಸಿದ ಟರ್ಕಿ, ಸಿರಿ...
06-02-23 10:44 am
ಮರಣದಂಡನೆಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್...
05-02-23 02:16 pm
ಫೆ.6ರಂದು ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಹೆಲಿಕಾಪ...
04-02-23 02:15 pm
06-02-23 05:39 pm
Mangalore Correspondent
ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ನಷ್ಟವೇ ಹೊರತು ಲ...
05-02-23 09:39 pm
ಜನಾರ್ದನ ಪೂಜಾರಿ ಮೂಲಕ ಟಿಕೆಟಿಗಾಗಿ ಒತ್ತಡ ತಂತ್ರ ;...
05-02-23 05:33 pm
ಟಯರ್ ಬ್ಲಾಸ್ಟ್ ; ನಿಯಂತ್ರಣ ತಪ್ಪಿದ ಮೀನಿನ ಟೆಂಪೋ ಕ...
05-02-23 12:37 pm
ಕರಾಟೆ ಕ್ಲಾಸಿಗೆ ಬಂದಿದ್ದ ಬಾಲಕಿಗೆ ಕಿರುಕುಳ ; ಆರೋಪ...
04-02-23 10:24 pm
06-02-23 03:20 pm
Mangalore Correspondent
ರಿಯಲ್ ಎಸ್ಟೇಟ್ ನಡೆಸುತ್ತಿದ್ದ ವ್ಯಕ್ತಿಯ ಬರ್ಬರ ಹತ್...
05-02-23 09:05 pm
ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ದೋಖಾ ; ಭಾರೀ ಲಾಭ ತೋರ...
05-02-23 05:26 pm
ಧೂಳೆಬ್ಬಿಸಿ ಹೋಗಬೇಡ ಎಂದು ಹೇಳಿದ್ದಕ್ಕೆ ಟಿಪ್ಪರ್ ಹಾ...
03-02-23 11:38 pm
ಪದ್ಮಾ ರಾಯಲ್ ಚಾಲೆಂಜ್ ಸ್ಕೀಮ್ ಹೆಸರಲ್ಲಿ ನೂರಾರು ಮಂ...
03-02-23 08:42 pm