ಬ್ರೇಕಿಂಗ್ ನ್ಯೂಸ್
23-09-20 03:51 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 23: ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ರಸ್ತೆ ನಾಮಕರಣದ ವಿವಾದ ಮುಗಿಯುತ್ತಲೇ ಒಂದು ವಿಭಾಗದವರು ನಾರಾಯಣ ಗುರು ಹೆಸರನ್ನು ಮಂಗಳೂರಿನ ವೃತ್ತವೊಂದಕ್ಕೆ ಇಡಬೇಕೆಂದು ಒತ್ತಾಯ ಆರಂಭಿಸಿದ್ದಾರೆ. ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರು ಇಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆಯಿಂದ ಮಹಾನಗರ ಪಾಲಿಕೆಗೆ ಮನವಿಯನ್ನೂ ನೀಡಲಾಗಿದೆ. ಈ ವಿಚಾರ ಪ್ರಸ್ತಾಪ ಆಗುತ್ತಲೇ ಲೇಡಿಹಿಲ್ ವೃತ್ತದ ಬಳಿ ಇರುವ ಶಾಲಾಡಳಿತ ಮಂಡಳಿಗಳು ವಿರೋಧ ಸೂಚಿಸಿದ್ದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ನಡುವೆ, ಕೆಲವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಖಾಸಗಿ ಬಸ್ ಗಳ ಮುಂದೆ ನಾರಾಯಣ ಗುರು ಸರ್ಕಲ್ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ. ಲೇಡಿಹಿಲ್ ದಾರಿಯಾಗಿ ಸಾಗುವ ಬಸ್ ಗಳ ಮುಂಭಾಗದಲ್ಲಿ ಈ ಸ್ಟಿಕ್ಕರ್ ಕಾಣಿಸಿಕೊಂಡಿದೆ. ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ಹೀಗೊಂದು ಅಭಿಯಾನ ನಡೀತಿದ್ಯಾ ಅನುಮಾನ ಕೇಳಿಬಂದಿದೆ. ಆದರೆ ಬಸ್ಸಿನ ಮುಂದೆ ಸ್ಟಿಕ್ಕರ್ ಅಂಟಿಸಿದ ಮಾತ್ರಕ್ಕೆ ಅಲ್ಲಿನ ಹೆಸರು ಬದಲಾವಣೆ ಆಗಲ್ಲ..! ಅಂಥ ಒತ್ತಾಯಕ್ಕೆ ಮತ್ತೊಂದಷ್ಟು ಒತ್ತಡ ಬೀಳುವುದಂತೂ ಖಚಿತ.

ಹೀಗೊಂದು ವಿವಾದ ಎದ್ದಿರುವ ಬಗ್ಗೆ ಬಿಲ್ಲವ ಸಂಘಗಳ ಅಭಿಪ್ರಾಯ ಕೇಳಿದರೆ ನಾವೇನು ಅಂತಹ ಒತ್ತಾಯ ಮಾಡಿಲ್ಲ ಎನ್ನುತ್ತಾರೆ. ನಾರಾಯಣ ಗುರು ಶಾಂತಿಪ್ರಿಯರು. ಎಲ್ಲರೂ ಒಂದೇ ಎಂದು ಸಾರಿದವರು. ಅಂಥ ವ್ಯಕ್ತಿಯ ಹೆಸರಲ್ಲಿ ವಿವಾದ ಎಬ್ಬಿಸಬಾರದು. ಈ ವಿವಾದಗಳ ಹಿಂದೆ ರಾಜಕೀಯ ಇದೆ. ಗುರುಗಳ ಹೆಸರಿಡುವ ವಿಚಾರವನ್ನು ಶಾಂತಿಯುತವಾಗೇ ಮುಗಿಸಬೇಕು. ಗುರುಗಳ ಹೆಸರಿಡುವುದಿದ್ದರೆ ಲೇಡಿಹಿಲ್ ವೃತ್ತವೇ ಆಗಬೇಕಂತಿಲ್ಲ. ಹೆಸರು ಇಲ್ಲದ ವೃತ್ತಗಳಿಗೆ ಇಟ್ಟು ಸೌಹಾರ್ದದಿಂದ ಕೆಲಸ ಮುಗಿಸಬಹುದು. ಹಂಪನಕಟ್ಟೆಯ ವೃತ್ತಕ್ಕೆ ಯಾವುದೇ ಹೆಸರಿಲ್ಲ. ಮಂಗಳೂರಿನಲ್ಲಿ ಪ್ರಮುಖ ವೃತ್ತವೂ ಹೌದು.. ಹಾಗೆ ನೋಡಿದರೆ ಹಂಪನಕಟ್ಟೆ ಸಿಗ್ನಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡಬಹುದು ಎಂದು ಬಿಲ್ಲವ ಸಂಘಟನೆಯ ಪ್ರಮುಖರೊಬ್ವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 06:29 pm
HK News Staffer
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am