ಬ್ರೇಕಿಂಗ್ ನ್ಯೂಸ್
23-09-20 03:51 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 23: ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ರಸ್ತೆ ನಾಮಕರಣದ ವಿವಾದ ಮುಗಿಯುತ್ತಲೇ ಒಂದು ವಿಭಾಗದವರು ನಾರಾಯಣ ಗುರು ಹೆಸರನ್ನು ಮಂಗಳೂರಿನ ವೃತ್ತವೊಂದಕ್ಕೆ ಇಡಬೇಕೆಂದು ಒತ್ತಾಯ ಆರಂಭಿಸಿದ್ದಾರೆ. ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರು ಇಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆಯಿಂದ ಮಹಾನಗರ ಪಾಲಿಕೆಗೆ ಮನವಿಯನ್ನೂ ನೀಡಲಾಗಿದೆ. ಈ ವಿಚಾರ ಪ್ರಸ್ತಾಪ ಆಗುತ್ತಲೇ ಲೇಡಿಹಿಲ್ ವೃತ್ತದ ಬಳಿ ಇರುವ ಶಾಲಾಡಳಿತ ಮಂಡಳಿಗಳು ವಿರೋಧ ಸೂಚಿಸಿದ್ದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ನಡುವೆ, ಕೆಲವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಖಾಸಗಿ ಬಸ್ ಗಳ ಮುಂದೆ ನಾರಾಯಣ ಗುರು ಸರ್ಕಲ್ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ. ಲೇಡಿಹಿಲ್ ದಾರಿಯಾಗಿ ಸಾಗುವ ಬಸ್ ಗಳ ಮುಂಭಾಗದಲ್ಲಿ ಈ ಸ್ಟಿಕ್ಕರ್ ಕಾಣಿಸಿಕೊಂಡಿದೆ. ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ಹೀಗೊಂದು ಅಭಿಯಾನ ನಡೀತಿದ್ಯಾ ಅನುಮಾನ ಕೇಳಿಬಂದಿದೆ. ಆದರೆ ಬಸ್ಸಿನ ಮುಂದೆ ಸ್ಟಿಕ್ಕರ್ ಅಂಟಿಸಿದ ಮಾತ್ರಕ್ಕೆ ಅಲ್ಲಿನ ಹೆಸರು ಬದಲಾವಣೆ ಆಗಲ್ಲ..! ಅಂಥ ಒತ್ತಾಯಕ್ಕೆ ಮತ್ತೊಂದಷ್ಟು ಒತ್ತಡ ಬೀಳುವುದಂತೂ ಖಚಿತ.

ಹೀಗೊಂದು ವಿವಾದ ಎದ್ದಿರುವ ಬಗ್ಗೆ ಬಿಲ್ಲವ ಸಂಘಗಳ ಅಭಿಪ್ರಾಯ ಕೇಳಿದರೆ ನಾವೇನು ಅಂತಹ ಒತ್ತಾಯ ಮಾಡಿಲ್ಲ ಎನ್ನುತ್ತಾರೆ. ನಾರಾಯಣ ಗುರು ಶಾಂತಿಪ್ರಿಯರು. ಎಲ್ಲರೂ ಒಂದೇ ಎಂದು ಸಾರಿದವರು. ಅಂಥ ವ್ಯಕ್ತಿಯ ಹೆಸರಲ್ಲಿ ವಿವಾದ ಎಬ್ಬಿಸಬಾರದು. ಈ ವಿವಾದಗಳ ಹಿಂದೆ ರಾಜಕೀಯ ಇದೆ. ಗುರುಗಳ ಹೆಸರಿಡುವ ವಿಚಾರವನ್ನು ಶಾಂತಿಯುತವಾಗೇ ಮುಗಿಸಬೇಕು. ಗುರುಗಳ ಹೆಸರಿಡುವುದಿದ್ದರೆ ಲೇಡಿಹಿಲ್ ವೃತ್ತವೇ ಆಗಬೇಕಂತಿಲ್ಲ. ಹೆಸರು ಇಲ್ಲದ ವೃತ್ತಗಳಿಗೆ ಇಟ್ಟು ಸೌಹಾರ್ದದಿಂದ ಕೆಲಸ ಮುಗಿಸಬಹುದು. ಹಂಪನಕಟ್ಟೆಯ ವೃತ್ತಕ್ಕೆ ಯಾವುದೇ ಹೆಸರಿಲ್ಲ. ಮಂಗಳೂರಿನಲ್ಲಿ ಪ್ರಮುಖ ವೃತ್ತವೂ ಹೌದು.. ಹಾಗೆ ನೋಡಿದರೆ ಹಂಪನಕಟ್ಟೆ ಸಿಗ್ನಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡಬಹುದು ಎಂದು ಬಿಲ್ಲವ ಸಂಘಟನೆಯ ಪ್ರಮುಖರೊಬ್ವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:00 pm
HK News Staffer
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
25-08-26 07:27 pm
HK News Staffer
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm