ಬ್ರೇಕಿಂಗ್ ನ್ಯೂಸ್
12-04-22 10:45 pm Udupi Correspondent ಕರಾವಳಿ
ಉಡುಪಿ, ಎ.12: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರ ರಾಜ್ಯದಲ್ಲಿ ಸಂಚಲನ ಎಬ್ಬಿಸಿದೆ. ಸಚಿವ ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದು ವಾಟ್ಸಪ್ ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹರಿಯಬಿಟ್ಟು ಸಾವಿಗೆ ಶರಣಾಗಿದ್ದರಿಂದ ಆತ್ಮಹತ್ಯೆ ಪ್ರಕರಣ ಸಚಿವರ ಕೊರಳು ಸುತ್ತಿಕೊಳ್ಳುವ ಸಾಧ್ಯತೆ ಕಂಡುಬಂದಿದೆ.
ಇದೇ ವೇಳೆ, ಮೃತನ ಸೋದರ ತಾನು ಉಡುಪಿಗೆ ಬರದೆ ಮೃತದೇಹವನ್ನು ಮುಟ್ಟುವಂತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಲಾಡ್ಜ್ ನಲ್ಲಿ ಹೆಣ ಕಾಯುವ ಸ್ಥಿತಿ ಎದುರಾಗಿದ್ದು ಬೆಂಗಳೂರಿನಲ್ಲಿರುವ ಸೋದರ ರಾತ್ರಿ ಹತ್ತು ಗಂಟೆ ವರೆಗೂ ಉಡುಪಿಗೆ ತಲುಪಿಲ್ಲ. ಇದೇ ಮಾತನ್ನು ಮೃತ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಅವರೂ ಬೆಳಗಾವಿಯಲ್ಲಿ ಹೇಳಿದ್ದಾರೆ.
ಮೃತದೇಹವನ್ನು ಲಾಡ್ಜ್ ನಿಂದ ಹೊರಕ್ಕೆ ಸಾಗಿಸಿ, ಪೋಸ್ಟ್ ಮಾರ್ಟಂ ನಡೆಸುವುದಕ್ಕೂ ಪೊಲೀಸರು ಕುಟುಂಬಸ್ಥರ ಅನುಮತಿ ಪಡೆಯಬೇಕಾಗಿದ್ದು ಅದಕ್ಕಾಗಿ ಕಾಯುತ್ತಿದ್ದಾರೆ. ಸ್ಥಳ ಮಹಜರು ನಡೆಸುವುದಕ್ಕೂ, ಅಲ್ಲಿ ಇತರೇ ಡೆತ್ ನೋಟ್ ಇದೆಯಾ ಎಂದು ಪರೀಕ್ಷೆ ನಡೆಸುವುದಕ್ಕೂ ಕುಟುಂಬಸ್ಥರು ಸ್ಥಳಕ್ಕೆ ಬರಬೇಕಾಗಿದೆ. ಬೆಳಗಾವಿಯಿಂದ ಪತ್ನಿ ಮತ್ತು ಬೆಂಗಳೂರಿನಲ್ಲಿರುವ ಮೃತನ ಸೋದರ ಉಡುಪಿಗೆ ಬಂದಿಲ್ಲ. ರಾತ್ರಿ ವೇಳೆಗೆ ಉಡುಪಿ ತಲುಪಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.

ಇದರ ನಡುವೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಹೇಳಿಕೆ ನೀಡಿದ್ದು ಮೃತ ವ್ಯಕ್ತಿ ಯಾಕಾಗಿ ಸತ್ತಿದ್ದಾನೆ, ಹೇಗೆ ಸತ್ತಿದ್ದಾನೆಂದು ಗೊತ್ತಿಲ್ಲ. ಎಲ್ಲವನ್ನೂ ತನಿಖೆ ನಡೆಸಬೇಕಾಗಿದೆ. ತನಿಖೆಯ ಬಳಿಕವೇ ನಿಜ ವಿಚಾರ ತಿಳಿಯಲಿದೆ ಎಂದಿದ್ದಾರೆ. ಆದರೆ ಲಾಡ್ಜ್ ಸಿಬಂದಿ ಮತ್ತು ಇತರ ಪೊಲೀಸರ ಮಾಹಿತಿ ಪ್ರಕಾರ, ಸಂತೋಷ್ ಪಾಟೀಲ್ ಜ್ಯೂಸ್ ಜೊತೆಗೆ ವಿಷ ಬೆರೆಸಿ ಕುಡಿದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಸಂತೋಷ್ ಪಾಟೀಲ್ ಜೊತೆಗೆ ಇತರ ಇಬ್ಬರು ಸ್ನೇಹಿತರು ಕೂಡ ಬಂದಿದ್ದು ಅಕ್ಕ ಪಕ್ಕದಲ್ಲಿ ಪ್ರತ್ಯೇಕ ರೂಮ್ ಮಾಡಿದ್ದರು. ಸೋಮವಾರ ಸಂಜೆ ಜ್ಯೂಸ್ ತಂದು ಕುಡಿದಿದ್ದಾರೆ. ಅದರ ಜೊತೆಗೆ ಪ್ರತ್ಯೇಕ ಬಾಟಲಿಯನ್ನು ಸಂತೋಷ್ ತೆಗೆದಿಟ್ಟಿದ್ದ ಎನ್ನಲಾಗಿದೆ.
ಸಂತೋಷ್ ಕೊಠಡಿಯೊಳಗೆ ಜ್ಯೂಸ್ ಬಾಟಲಿ ಮತ್ತು ವಿಷದ ಬಾಟಲಿಯೂ ಪತ್ತೆಯಾಗಿದೆ ಎನ್ನುವ ಮಾಹಿತಿಗಳಿವೆ. ಬೆಳಗ್ಗೆ 12 ಗಂಟೆ ವೇಳೆಗೆ ಲಾಡ್ಜ್ ಸಿಬಂದಿ ಬಾಗಿಲು ಒಡೆದು ನೋಡಿದಾಗಲೇ ಸಂತೋಷ್ ಪಾಟೀಲ್ ಮೃತಪಟ್ಟಿದ್ದು ಕಂಡುಬಂದಿತ್ತು. ಆದರೆ ಜೊತೆಗೆ ಬಂದಿದ್ದ ಇತರ ಇಬ್ಬರು ಸ್ನೇಹಿತರು ಯಾಕೆ ಅಷ್ಟು ಸಮಯದ ವರೆಗೂ ಸಂತೋಷ್ ಪಾಟೀಲನ್ನು ಕರೆದಿಲ್ಲ. ಪಕ್ಕದ ರೂಮ್ ಹೋಗಿ ನೋಡಿಯೂ ಇಲ್ಲ ಯಾಕೆ ಎನ್ನುವ ಬಗ್ಗೆ ಅನುಮಾನಗಳಿವೆ. ಇವೆಲ್ಲದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದು ಅವರಿಬ್ಬರನ್ನು ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಆದರೆ ಅವರಿಬ್ಬರು ತಮಗೆ ಯಾವುದೇ ಮಾಹಿತಿ ಇಲ್ಲ ಎಂದಷ್ಟೇ ಹೇಳುತ್ತಿದ್ದಾರೆ.
Udupi Contractor ends life in Udupi lodge, police suspect of drinking poison mixed with juice. A contractor and BJP worker, who had accused Rural Development & Panchayat Raj (RDPR) Minister K.S. Eshwarappa of corruption, was found dead in a lodge in Udupi on April 12. According to the local police, the contractor Santosh Patil arrived in Udupi along with a couple of his friends Santosh and Prashant on April 11 night. They took two rooms in Shambhavi lodge. While his friends were in one room, Santosh Patil was in the other. Santosh Patil had kept his luggage in the room of his friends.
19-11-25 02:16 pm
Bangalore Correspondent
ಸ್ತ್ರೀ ವೇಷಧಾರಿಗಳು ಸಹಕರಿಸದಿದ್ದರೆ ಮರುದಿನ ಮೇಳದಿಂ...
19-11-25 12:20 pm
Deputy CM D.K. Shivakumar: ರಾಜ್ಯದ ಐದು ಕಡೆಗಳಲ್...
17-11-25 07:25 pm
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
19-11-25 11:10 am
HK News Desk
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
19-11-25 01:01 pm
Mangalore Correspondent
ಅಡ್ಯಾರ್ ಕಣ್ಣೂರಿನಲ್ಲಿ ಮಂಗಳೂರಿಗೆ ನೀರು ಪೂರೈಸುವ ಪ...
18-11-25 10:18 pm
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am