ಬ್ರೇಕಿಂಗ್ ನ್ಯೂಸ್
18-04-22 10:00 am Mangalore Correspondent ಕರಾವಳಿ
ಮಂಗಳೂರು, ಎ.18: ಮಂಗಳೂರು ಹೊರವಲಯದ ಎಸ್ಇಝೆಡ್ ವ್ಯಾಪ್ತಿಯಲ್ಲಿರುವ ಫಿಶ್ ಮಿಲ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ ದುರಂತ ಸಂಭವಿಸಿದ್ದು ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಭಾನುವಾರ ರಾತ್ರಿ ಫಿಶ್ ಮಿಲ್ ಫ್ಯಾಕ್ಟರಿಯ ಟ್ಯಾಂಕ್ ಸ್ವಚ್ಚಗೊಳಿಸುವ ಸಂದರ್ಭ ಘಟನೆ ನಡೆದಿದೆ. ಮೃತರು ಪಶ್ಚಿಮ ಬಂಗಾಳ ಮೂಲದವರು ಎನ್ನಲಾಗುತ್ತಿದೆ. ಮೊಹಮ್ಮದ್ ಸಮೀವುಲ್ಲ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಆಲಿಸ್, ಮಿರಾಜುಲ್ ಇಸ್ಲಾಂ, ಸರಾಫತ್ ಆಲಿ ಮೃತರು. ಹಸನ್ ಆಲಿ, ಮೊಹಮ್ಮದ್ ಕರೀಬುಲ್ಲ, ಹಫೀಜುಲ್ಲಾ ಎಂಬವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರ ರಾತ್ರಿ ಟ್ಯಾಂಕ್ ಕ್ಲೀನ್ ನಡೆಸಲೆಂದು ಕಾರ್ಮಿಕನೊಬ್ಬ ಕೆಳಗಿಳಿದಿದ್ದ. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು ಇತರ ಏಳು ಮಂದಿ ಕಾರ್ಮಿಕರು ಒಳಕ್ಕಿಳಿದಿದ್ದು, ಎಲ್ಲರೂ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳಕ್ಕೆ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊದಲಿಗೆ ಮೂವರು ಸಾವು ಕಂಡಿದ್ದರು. ಬೆಳಗ್ಗಿನ ಆಸ್ಪತ್ರೆಯಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ.
ಫಿಶ್ ಮಿಲ್, ಮುಂಬೈ ಮೂಲದ ರಾಜು ಎಂಬವರಿಗೆ ಸೇರಿದ್ದಾಗಿದ್ದು ಶ್ರೀ ಉಲ್ಕಾ ಎಲ್ಎಲ್ ಪಿ ಹೆಸರಿನಲ್ಲಿ ಕಾರ್ಯಾಚರಿಸುತ್ತಿತ್ತು. ಕಾರ್ಮಿಕರಿಗೆ ರಕ್ಷಣಾತ್ಮಕ ಉಪಕರಣಗಳನ್ನು ಒದಗಿಸದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಬಜಪೆ ಠಾಣೆಯಲ್ಲಿ 337, 338, 304 ಅಡಿ ಪ್ರಕರಣ ದಾಖಲಾಗಿದೆ. ಕಂಪನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ ಮ್ಯಾನೇಜರ್ ಕುಬೇರ್ ಗಾಡೆ, ಫ್ಯಾಕ್ಟರಿ ಸೂಪರ್ ವೈಸರ್ ಮೊಹಮ್ಮದ್ ಅನ್ವರ್, ಕಂಪೆನಿಯ ಕಾರ್ಮಿಕರನ್ನು ನೋಡಿಕೊಳ್ಳುತ್ತಿದ್ದ ಉಳ್ಳಾಲದ ಆಜಾದ್ ನಗರ ನಿವಾಸಿ ಫಾರೂಕ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Five youth were killed after they reportedly inhaled toxic gas at a fish processing centre in Mangaluru Special Economic Zone (MSEZ) on city”s outskirts on Sunday night.
12-05-24 07:08 pm
Bangalore Correspondent
Congress MLA Kadalur Uday gowda vs Kumaraswam...
12-05-24 03:45 pm
Devaraje Gowda arrested; ರಾಜ್ಯಕ್ಕೆ ಪ್ರಜ್ವಲ್ ಪ...
12-05-24 10:51 am
ಪರಿಷತ್ ಚುನಾವಣೆ ; ಒಂದು ಸ್ಥಾನ ಬಿಟ್ಟು ಐದು ಸ್ಥಾನಗ...
11-05-24 11:20 pm
SP Dinesh, Ayanur Manjunath, Congress: ನೈರುತ್...
11-05-24 09:46 pm
11-05-24 09:43 pm
HK News Desk
Kareena Kapoor, Bible Book, court: “ಪ್ರೆಗ್ನೆನ...
11-05-24 03:13 pm
Ram Mandir, Nana Patole, Nrendra modi: ಮೋದಿಯಿ...
10-05-24 10:05 pm
Arvind Kejriwal, Supreme court: ಸಿಎಂ ಕೇಜ್ರಿವಾ...
10-05-24 03:46 pm
Kerala Arali Flower death: ಮೊಬೈಲ್ ನಲ್ಲಿ ಮಾತನಾ...
10-05-24 10:06 am
12-05-24 06:30 pm
Mangalore Correspondent
ಕುಂದಾಪುರದ ಫೈನಾನ್ಶಿಯರ್ ಹತ್ಯೆ ಆರೋಪಿಗೆ ಹಿರಿಯಡ್ಕ...
12-05-24 05:41 pm
Kadaba illegal sand raid, Mangalore crime: ಕಡ...
12-05-24 04:34 pm
Mangalore University: ಮಂಗಳೂರು ವಿವಿ ಕಾಲೇಜಿನಲ್ಲ...
12-05-24 03:04 pm
Mangalore Photographer Jitesh Prasad: ಮೂಡುಬಿದ...
12-05-24 10:45 am
12-05-24 01:53 pm
Mangalore Correspondent
Mangalore Crime, Sexual Assult: ಅನ್ಯಕೋಮಿನ ಬಾಲ...
11-05-24 10:18 pm
Bangalore Crime, Cyber, Roopa Iyer: ಸೆಲೆಬ್ರಿಟ...
10-05-24 05:04 pm
Kalaburgi youth murdered: ಕಲಬುರಗಿ ; ಕಾಂಗ್ರೆಸ್...
10-05-24 02:04 pm
Cyber fraud Kodagu, Kerala, Sim card: ಸೈಬರ್ ವ...
10-05-24 12:44 pm