ಬ್ರೇಕಿಂಗ್ ನ್ಯೂಸ್
21-04-22 11:45 am Mangalore Correspondent ಕರಾವಳಿ
ಮಂಗಳೂರು, ಎ.21: 'ಒಂದು ದೇಶ, ಒಂದೇ ಜನ’ ಎಂಬ ಸಂದೇಶ ಹಿಡಿದು ತನ್ನ 21ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಬೈಕಿನಲ್ಲಿ ಭಾರತ ಪರ್ಯಟನೆ ಆರಂಭಿಸಿದ್ದ ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ಅಮೃತಾ ಜೋಶಿ 60 ದಿವಸಗಳ ಸಂಚಾರ ಪೂರೈಸಿದ್ದಾರೆ.
2022ರ ಫೆಬ್ರವರಿ 5ರಂದು ಕೇರಳದ ಕಲ್ಲಿಕೋಟೆಯಿಂದ ಸಂಚಾರ ಆರಂಭಿಸಿದ್ದ ಅಮೃತಾ ಜೋಶಿ ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಲ, ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳನ್ನು ಸಂದರ್ಶಿಸಿದ್ದಾರೆ. ಈಶಾನ್ಯ ರಾಜ್ಯಗಳ ಭೇಟಿಯ ಜೊತೆಗೆ ನೆರೆಯ ಬಾಂಗ್ಲಾದೇಶ, ಮ್ಯಾನ್ಮಾರ್ಗಳನ್ನು ಕೂಡ ಅಮೃತಾ ಸಂದರ್ಶಿಸಿದ್ದಾರೆ. ಇದುವರೆಗೆ 8,040 ಕಿ.ಮೀ. ಯಾನ ಪೂರೈಸಿದ್ದಾಗಿ ಅಮೃತಾ ತಿಳಿಸಿದ್ದಾರೆ.
ಮುಂದೆ ನೇಪಾಳದಿಂದ ಆರಂಭಿಸಿ ಬಿಹಾರ, ಝಾರ್ಖಂಡ್, ಛತ್ತೀಸ್ಗಢ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಖ್, ಪಂಜಾಬ್, ಹರಿಯಾಣ, ದಿಲ್ಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಕರ್ನಾಟಕ ತಲುಪಲಿದ್ದು ಕೊನೆಯಲ್ಲಿ ಕೇರಳದ ಕಾಸರಗೋಡಿನಲ್ಲಿ ಯಾತ್ರೆಯನ್ನು ಮುಕ್ತಾಯ ಮಾಡಲಿದ್ದಾರೆ.
“ಸಿ.ಆರ್.ಎಫ್ ವುಮೆನ್ ಆನ್ ವೀಲ್ಸ್’ ಎಂಬ ಕ್ಲಬ್ ಸದಸ್ಯೆಯಾಗಿರುವ ಅಮೃತಾ ಜೋಶಿ ಕುಂಬಳೆ ನಿವಾಸಿಗಳಾದ ದಿ| ಅಶೋಕ್ ಜೋಶಿ ಮತ್ತು ಅನ್ನಪೂರ್ಣ ಜೋಶಿ ದಂಪತಿಯ ಕಿರಿಯ ಪುತ್ರಿ. ಅಮೃತಾ ಜೋಶಿ ದೇಶ ಸಂಚಾರಕ್ಕೆ ವಿವಿಧ ಸಂಘಟನೆಗಳ ಬೆಂಬಲವೂ ಸಿಕ್ಕಿದೆ.
ಈಶಾನ್ಯ ರಾಜ್ಯದ ಪ್ರಯಾಣದ ಬಗ್ಗೆ ಎಲ್ಲರೂ ಆ ರಾಜ್ಯಗಳು ಸುರಕ್ಷಿತವಲ್ಲ ಎಂದಿದ್ದರು. ಆದರೆ ಈ ಯಾನದ ಬಳಿಕ ಈಶಾನ್ಯ ರಾಜ್ಯಗಳು ಸುರಕ್ಷಿತ ಸ್ಥಳ ಮತ್ತು ಅಲ್ಲಿನ ಜನರು ಮೃದು ಮನಸ್ಸಿನವರು ಎಂದು ಹೇಳುತ್ತೇನೆ. ಅವರ ಪ್ರೀತಿ ಮತ್ತು ಬೆಂಬಲದಿಂದಾಗಿ ಇಡೀ ಭಾರತ ಯಾನವನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದೇನೆ ಎಂದು ಅಮೃತಾ ಜೋಶಿ ಹೇಳಿದ್ದಾರೆ.
Youngest solo rider Amrutha Joshi from Kerala to cover northeast by bike.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 07:57 pm
Mangalore Correspondent
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
24-10-25 08:20 pm
Mangalore Correspondent
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am