ಬಿಎಂಡಬ್ಲ್ಯು ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆ ; ಗಂಭೀರ ಗಾಯಗೊಂಡಿದ್ದ ಮಹಿಳೆಗೆ ಬ್ರೇನ್ ಡೆಡ್, ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ 

23-04-22 12:42 pm       Mangalore Correspondent   ಕರಾವಳಿ

ಬಿಎಂಡಬ್ಲ್ಯು ಕಾರು ಚಾಲಕನ ಅವಾಂತರದಿಂದಾಗಿ ಇನ್ನೊಂದು ರಸ್ತೆಯಲ್ಲಿ ತೆರಳುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆಯ ಬ್ರೇನ್ ಡೆಡ್ ಆಗಿದ್ದು ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. 

ಮಂಗಳೂರು, ಎ.23: ಬಿಎಂಡಬ್ಲ್ಯು ಕಾರು ಚಾಲಕನ ಅವಾಂತರದಿಂದಾಗಿ ಇನ್ನೊಂದು ರಸ್ತೆಯಲ್ಲಿ ತೆರಳುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆಯ ಬ್ರೇನ್ ಡೆಡ್ ಆಗಿದ್ದು ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. 

ಎರಡು ವಾರಗಳ ಹಿಂದೆ ನಗರದ ಬಲ್ಲಾಳ್ ಬಾಗ್ ನಲ್ಲಿ ಮಧ್ಯಾಹ್ನ 1.20ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ಬಿಎಂಡಬ್ಲ್ಯೂ ಕಾರು ಚಾಲಕ, ಮಣ್ಣಗುಡ್ಡ ನಿವಾಸಿ ಶ್ರವಣ್ ಅತಿ ವೇಗದ ಚಾಲನೆಯಿಂದಾಗಿ ಕಾರು ಡಿವೈಡರ್ ಮೇಲಿಂದ ಹಾರಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿಯಾಗಿದೆ. ಸ್ಕೂಟಿಯಲ್ಲಿದ್ದ ಮಹಿಳೆ ಮಂಗಳಾದೇವಿ ನಿವಾಸಿ ಪ್ರೀತಿ ನಾಗರಾಜ್ (39) ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ, ಚಿಕಿತ್ಸೆ ಫಲಿಸಿಲ್ಲ. ಅಪಘಾತದ ದಿನವೇ ಕೋಮಾಗೆ ಜಾರಿದ್ದ ಮಹಿಳೆಗೆ ಪ್ರಜ್ಞೆ ಬಂದಿಲ್ಲ. ಮೆದುಳು ನಿಷ್ಕ್ರೀಯಗೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪ್ರೀತಿ ಅವರ ಅಂಗಾಗ ದಾನ ಮಾಡಲು ನಿರ್ಧರಿಸಿದ್ದಾರೆ. ಯುವಕನ ನಿರ್ಲಕ್ಷ್ಯದ ಚಾಲನೆಗೆ ಮಹಿಳೆ ದುರಂತ ಸಾವು ಕಾಣುವಂತಾಗಿದೆ.

Preethi Manoj, who suffered injuries in a bizarre accident at Ballalbagh here has been declared brain dead. Her family has decided to donate her organs, said sources.